ನವದೆಹಲಿ, ಮೇ 13: ಕೊರೊನಾವೈರಸ್ ಮಹಾಮಾರಿ ಹಿಂದೆಂದೂ ಕಂಡೂ ಕೇಳರಿಯದಂತೆ ವಿನಾಶವನ್ನು ಸೃಷ್ಠಿಸಿದೆ. ಜಗತ್ತಿನ ಎಲ್ಲ ದೇಶಗಳಿಗೂ ಇದರ ಬಿಸಿ ತಟ್ಟಿದೆ. ತಮ್ಮ ತವರನ್ನು ತೊರೆದು ಬೇರೆ ದೇಶಗಳಿಗೆ ಉದ್ಯೋಗ ಅರಸಿ ಹೋಗಿದ್ದವರು ಈಗ ಉದ್ಯೋಗ ಕಳೆದುಕೊಂಡು ವಾಪಸ್ ತಮ್ಮ ತಮ್ಮ ತವರೂರುಗಳಿಗೆ ಮರಳುತ್ತಿದ್ದಾರೆ.
ಹೀಗೆ ತವರಿಗೆ ಮರಳುತ್ತಿರುವವರು ತಮ್ಮ ಉದ್ಯೋಗಳನ್ನು ಕಳೆದುಕೊಂಡು ಮತ್ತೊಂದು ರೀತಿಯ ಸಂಕಷ್ಟಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಲಾಕ್ಡೌನ್ನಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕರೆ ತರಲು ಭಾರತ ಸರ್ಕಾರ ವಂದೇ ಭಾರತ್ ಮಿಷನ್ ನಡೆಸಿದೆ.
ಹೀಗೆ ಇಲ್ಲಿವರೆಗೆ ಭಾರತಕ್ಕೆ ಬಂದವರಲ್ಲಿ ಶೇ 59 ರಷ್ಟು ಭಾರತೀಯರು ತಮ್ಮ ಮೂಲ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವೆಬ್ಸೈಟ್ ವರದಿ ಮಾಡಿದೆ.
SWADES ಮೂಲಕ ಮಾಹಿತಿ ಕಲೆ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು (ಎಂಎಸ್ಡಿಇ) ಇತ್ತೀಚೆಗೆ ಪ್ರಾರಂಭಿಸಿದ 'ಸ್ವದೇಶ' (SWADES) ಕಾರ್ಯಕ್ರಮದಿಂದ ವಿದೇಶದಿಂದ ಬಂದ ಶೇ 59 ರಷ್ಟು ಜನ ನಿರುದ್ಯೋಗಿಳಾಗಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸಹಯೋಗದೊಂದಿಗೆ ಎಂಎಸ್ಡಿಇ ಮಾಹಿತಿ ಕಲೆ ಹಾಕಿದೆ.
ಕೌಶಲ್ಯ ಫಾರ್ಮ್ ಭರ್ತಿ
ವಿದೇಶಗಳಿಂದ ಜೂನ್ ಆರಂಭದಿಂದಲೂ, ಹಿಂದಿರುಗಿದ ವಲಸೆ ಉದ್ಯೋಗಿಗಳಿಗೆ ತಮ್ಮ ಕೆಲಸದ ವಲಯ, ಉದ್ಯೋಗದ ಶೀರ್ಷಿಕೆ, ಉದ್ಯೋಗ ಮತ್ತು ವರ್ಷಗಳ ಅನುಭವದ ಬಗ್ಗೆ ವಿವರಗಳನ್ನು ದಾಖಲಿಸಲು ವಿಮಾನ ನಿಲ್ದಾಣಗಳಲ್ಲಿನ SWADES (ಉದ್ಯೋಗದ ಬೆಂಬಲಕ್ಕಾಗಿ ನುರಿತ ಕೆಲಸಗಾರರ ಆಗಮನ ಡೇಟಾಬೇಸ್) ಕೌಶಲ್ಯ ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಲಾಗುತ್ತಿದೆ.
ಶೇ 41 ಜನ ಮಾತ್ರ ಇನ್ನೂ ಕೆಲಸದಲ್ಲಿ
ಜೂನ್ 7 ರ ಹೊತ್ತಿಗೆ, SWADES ಕೌಶಲ್ಯ ಫಾರ್ಮ್ ಅನ್ನು ಭರ್ತಿ ಮಾಡಿದದವರಲ್ಲಿ 15,634 ಜನ ಇದ್ದಾರೆ. ಇದರಲ್ಲಿ ಶೇಕಡಾ 59 ಅಥವಾ 9,222 ಜನರು ತಾವು ನಿರುದ್ಯೋಗಿಗಳಾಗಿದ್ದಾರೆಂದು ವರದಿ ಮಾಡಿದರೆ, ಶೇಕಡಾ 41 ಅಥವಾ 6,412 ಜನರು ಇನ್ನೂ ತಮ್ಮ ಉದ್ಯೋಗವನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ.
47 ರಷ್ಟು ಉದ್ಯೋಗಿಗಳು ಹತ್ತು ವರ್ಷ ಕೆಲಸದ ಅನುಭವ
ಭಾರತಕ್ಕೆ ಮರಳಿದ ಶೇಕಡಾ 47 ರಷ್ಟು ಉದ್ಯೋಗಿಗಳು ಹತ್ತು ವರ್ಷಕ್ಕೂ ಮೇಲ್ಪಟ್ಟು ಕೆಲಸದ ಅನುಭವ ಹೊಂದಿದ್ದಾರೆ. ಉಳಿದವರಲ್ಲಿ, 27 ಪ್ರತಿಶತದಷ್ಟು ಜನರು 5-10 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದರೆ, 18 ಪ್ರತಿಶತದಷ್ಟು ಜನರು 2-5 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು 8 ಪ್ರತಿಶತದವರು 2 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವವನ್ನು ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.
7,341 ವ್ಯಕ್ತಿಗಳು ಪದವೀಧರರು
ಲಾಕ್ಡೌನ್ ನಿಂದ ಭಾರತಕ್ಕೆ ಬಂದವರಲ್ಲಿ 7,341 ವ್ಯಕ್ತಿಗಳು ಪದವೀಧರರಾಗಿದ್ದು, ನಂತರದ ಸ್ಥಾನದಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು (2,937 ವ್ಯಕ್ತಿಗಳು), ಸ್ನಾತಕೋತ್ತರ ಪದವೀಧರರು (2,638 ವ್ಯಕ್ತಿಗಳು) ಮತ್ತು 10 ನೇ ಉತ್ತೀರ್ಣರಾಗಿದ್ದಾರೆ (2,111 ವ್ಯಕ್ತಿಗಳು). ಹೀಗೆ ಬಂದರವಲ್ಲಿ ಗಲ್ಪ ದೇಶಗಳಿಂದ ಬಂದವರ ಸಂಖ್ಯೆಯೇ ಜಾಸ್ತಿ ಇದೆ ಎಂದು ವರದಿ ಹೇಳುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications