ಬಂದಿದೆ ಲಾಕ್ ಡೌನ್ ಪರೀಕ್ಷೆಯ ಸಮೀಕ್ಷೆ; ಇನ್ನೊಂದು ವಾರ ಹೀಗೇ ಆದರೆ...
ಕೊರೊನಾ ಕಾರಣಕ್ಕೆ ಲಾಕ್ ಡೌನ್ ಇನ್ನೊಂದು ವಾರಕ್ಕೆ ಮುಂದುವರಿದರೆ ಭಾರತದಲ್ಲಿ ಶೇಕಡಾ 33ರಷ್ಟು ಕುಟುಂಬಗಳ ಬಳಿ ಇರುವಂಥ ಸಂಪನ್ಮೂಲಗಳು ಬರಿದಾಗಿ, ಸಂಕಷ್ಟಕ್ಕೆ ಸಿಲುಕಲಿವೆ. ಆ ನಂತರ ಸಹಾಯ ಬೇಕಾಗುತ್ತದೆ ಎಂಬುದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಕುಟುಂಬಗಳ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಲಾಕ್ ಡೌನ್ ನಿಂದ ಕುಟುಂಬಗಳ ಆದಾಯದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಮಂಗಳವಾರ ಬಿಡುಗಡೆ ಆಗಿದೆ. ಆ ಸಮೀಕ್ಷೆಯಲ್ಲಿ ತಿಳಿಸಿರುವ ಪ್ರಮುಖಾಂಶಗಳು ಹೀಗಿವೆ:
* ಶೇಕಡಾ 84ರಷ್ಟು ಕುಟುಂಬಗಳ ಆದಾಯದಲ್ಲಿ ಇಳಿಕೆ ಆಗಿದೆ.
* ದೇಶದಲ್ಲಿ ಇರುವ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದಾರೆ.
* ದೇಶದಾದ್ಯಂತ ಮಾಡಿರುವ ಸಮೀಕ್ಷೆ ವರದಿ ಪ್ರಕಾರ, ಹೆಚ್ಚುವರಿ ನೆರವು ಸಿಗದಿದ್ದಲ್ಲಿ ಶೇಕಡಾ 34ರಷ್ಟು ಕುಟುಂಬಗಳಿಗೆ ಒಂದು ವಾರಕ್ಕಿಂತ ಹೆಚ್ಚು ಸಮಯ ದಿನ ದೂಡುವುದು ಕಷ್ಟವಾಗಲಿದೆ.
* 65 ಪರ್ಸೆಂಟ್ ನಷ್ಟು ನಗರ ಪ್ರದೇಶದ ಕುಟುಂಬಗಳು ಹಾಗೂ 54 ಪರ್ಸೆಂಟ್ ನಷ್ಟು ಗ್ರಾಮೀಣ ಭಾಗದ ಕುಟುಂಬಗಳು ಒಂದು ವಾರಕ್ಕೆ ಆಗುವಷ್ಟು ದಿನಸಿ ಇದೆ ಎಂದು ಹೇಳಿವೆ.
* ದೆಹಲಿ, ಪಂಜಾಬ್ ಹಾಗೂ ಕರ್ನಾಟಕ ರಾಜ್ಯದ ಮೇಲೆ ಲಾಕ್ ಡೌನ್ ನಿಂದ ಹೆಚ್ಚಿನ ಪರಿಣಾಮ ಆಗಿಲ್ಲ.
ರಿಸರ್ವ್ ಬ್ಯಾಂಕ್ ನಿಂದ ನೋಟು ಮುದ್ರಣವೋ ಅಥವಾ ಐಎಂಎಫ್ ಸಾಲವೋ?
* ಬಿಹಾರ, ಹರ್ಯಾಣ, ಜಾರ್ಖಂಡ್ ರಾಜ್ಯಗಳ ಮೇಲೆ ಪರಿಣಾಮ ಬೀಕರವಾಗಿದೆ.
* ಆದಾಯದಲ್ಲಿನ ಇಳಿಕೆ, ಲಾಕ್ ಡೌನ್ ಗೂ ಮುಂಚಿನ ತಲಾದಾಯ, ಅನುದಾನದ ಪರಿಣಾಮಕಾರಿ ನೀಡಿಕೆ ಇವೆಲ್ಲವೂ ಲಾಕ್ ಡೌನ್ ಗಿಂತ ಹೆಚ್ಚು ಪರಿಣಾಮಕಾರಿ ಆಗಿದೆ.
ಈ ಅಧ್ಯಯನವನ್ನು ಮಾಡಿರುವವರು ಸಿಎಂಐಇಯ ಕೃಷ್ಣನ್ ಹಾಗೂ ಹೀಥರ್ ಶೋಫೀಲ್ಡ್.