ಗ್ರಾಹಕರು 5000 ರುಪಾಯಿಗಿಂತ ಹೆಚ್ಚು ಹಣವನ್ನು ಎಟಿಎಂನಿಂದ ವಿಥ್ ಡ್ರಾ ಮಾಡುವ ಪ್ರತಿ ಸಲವೂ ಶುಲ್ಕ ವಿಧಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಮಿತಿಯು ಶಿಫಾರಸು ಮಾಡಿದೆ. ಇನ್ನೂ ಬಿಡುಗಡೆ ಆಗದ ವರದಿಯೊಂದರ ಮಾಹಿತಿಯು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಯಿಂದ ತಿಳಿದುಬಂದಿದೆ.
ಎಟಿಎಂನಿಂದ ಐದು ಸಾವಿರದ ತನಕ (ಮತ್ತು ಒಳಗೊಂಡಂತೆ) ಮಾತ್ರ ಉಚಿತವಾಗಿ ವಿಥ್ ಡ್ರಾ ಮಾಡುವುದಕ್ಕೆ ಉಚಿತವಾಗಿ ಅವಕಾಶ ನೀಡಬೇಕು. 5,000 ರುಪಾಯಿ ಮೇಲ್ಪಟ್ಟ ಪ್ರತಿ ವ್ಯವಹಾರಕ್ಕೂ ಶುಲ್ಕ ವಿಧಿಸಲಾಗುತ್ತದೆ. ಎಂದು ವರದಿಯಲ್ಲಿ ಹೇಳಲಾಗಿದೆ. ಅಮ್ದ ಹಾಗೆ ಆರ್ ಬಿಐ ಸಮಿತಿಯ ನೇತೃತ್ವ ವಹಿಸಿದ್ದವರು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಖ್ಯ ಅಧಿಕಾರಿ ಆಗಿದ್ದ ವಿ.ಜಿ. ಕಣ್ಣನ್.
ಎಟಿಎಂ ಶುಲ್ಕದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ
ಈ ವರದಿಯನ್ನು ಅಕ್ಟೋಬರ್ 22, 2019ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಲ್ಲಿಸಿದ್ದಾರೆ. ಆದರೆ ಆ ವರದಿ ಬಿಡುಗಡೆಯೇ ಆಗಿಲ್ಲ. ಮೊದಲಿಗೆ ವರದಿ ಬಗ್ಗೆ ಕೇಳಿರುವುದಕ್ಕೆ ಆರ್ ಟಿಐ ಅಡಿಯಲ್ಲಿ ಅದನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಆ ನಂತರ ಎಟಿಎಂ ಶುಲ್ಕದ ಬಗೆಗಿನ ಮಾಹಿತಿಗಾಗಿ ಅರ್ಜಿ ಹಾಕಿದ ಮೇಲೆ ಸಿಕ್ಕಿದ್ದು, ಅರ್ಜಿದಾರ ಶ್ರೀಕಾಂತ್ ಈ ಮಾಹಿತಿ ಸಾರ್ವಜನಿಕರಿಗೂ ದೊರೆಯುವಂತೆ ಮಾಡಿದ್ದಾರೆ.
ಕಾರ್ಯ ನಿರ್ವಹಣೆ ಶುಲ್ಕ ಹೆಚ್ಚಾಗಿದೆ
ವರದಿಯಲ್ಲಿ ಹೇಳಿರುವ ಪ್ರಕಾರ, ಎಟಿಎಂ ಕಾರ್ಯ ನಿರ್ವಹಣೆ ವೆಚ್ಚವು ಹೆಚ್ಚಳವಾಗಿದೆ. ಬೇರೆ ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಾಡಿದರೆ ಅದರ ಶುಲ್ಕ 2012ರಿಂದ ಹಾಗೂ ಎಟಿಎಂ ಬಳಕೆಯ ಶುಲ್ಕವನ್ನು 2008ರಿಂದ ಏರಿಕೆ ಮಾಡಿಲ್ಲ. ಇನ್ನು ಅರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಎಟಿಎಂ ಆರಂಭ ಮಾಡದ ಬಗ್ಗೆ ಸಮಿತಿಯು ಆತಂಕ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯೆಯೇ ಮಾನದಂಡ
ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಂಡು ಎಟಿಎಂ ಶುಲ್ಕ ವಿಧಿಸುವಂತೆ ಶಿಫಾರಸು ಮಾಡಲಾಗಿದೆ. ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಡೆ ಸದ್ಯಕ್ಕೆ ಇರುವ ಐದು ಉಚಿತ ವ್ಯವಹಾರದ ಬದಲಿಗೆ ಆರಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ. ಇನ್ನು ಜನಸಂಖ್ಯೆ ಹೆಚ್ಚಿರುವ ಕಡೆ ಎಟಿಎಂ ವಿಥ್ ಡ್ರಾ ಮಿತಿಯನ್ನು ಮೂರಕ್ಕೆ ನಿಗದಿ ಮಾಡಲು ಶಿಫಾರಸು ಮಾಡಲಾಗಿದೆ.
ಶುಲ್ಕದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ
ಕಳೆದ ಒಂದು ವರ್ಷದಿಂದ ಎಟಿಎಂ ಬಳಕೆ ಹೆಚ್ಚಾಗಿದೆ. ಆದರೆ ಎಟಿಎಂ ಕಾರ್ಯ ನಿರ್ವಹಣೆ ವೆಚ್ಚ ಹೆಚ್ಚಾಗುವುದರಿಂದ ಹೊಸನ್ನು ಆರಂಭಿಸುತ್ತಿಲ್ಲ. ಆಯಾ ಬ್ಕಾಂಕ್ ಬಿಟ್ಟು ಬೇರೆ ಬ್ಯಾಂಕ್ ಎಟಿಎಂನಲ್ಲಿ ವಿಥ್ ಡ್ರಾ ಮಾಡಿದರೆ, ನಿಗದಿತ ಮಿತಿಗಿಂತ ಹೆಚ್ಚು ಡ್ರಾ ಮಾಡಿದರೆ ವಿಧಿಸುವ ಶುಲ್ಕದಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications