ಈ ಹಿಂದೆ ಕಂಡರಿಯದ ಕ್ರಮದ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರ ಹಲ್ವಾ ಸಮಾರಂಭದ ವೇಳೆ "ಕೇಂದ್ರ ಬಜೆಟ್ ಮೊಬೈಲ್ ಆಪ್" ಆರಂಭಿಸಿದರು. ಈ ಮೂಲಕ ಸಂಸತ್ ಸದಸ್ಯರು ಈ ಬಾರಿ ಬಜೆಟ್ ದಾಖಲಾತಿಗಳನ್ನು ತಮ್ಮ ಮೊಬೈಲ್ ಫೋನ್ ಗಳ ಮೂಲಕವೇ ಪಡೆಯಬಹುದು.
ಈ ಹಿಂದಿನ ರೀತಿಯಲ್ಲಿ ಅಲ್ಲದೆ, ಕೋವಿಡ್- 19 ಹಿನ್ನೆಲೆಯಲ್ಲಿ ಬಜೆಟ್ ದಾಖಲಾತಿಗಳು ಈ ವರ್ಷ ಮುದ್ರಣ ಕಾಣುತ್ತಿಲ್ಲ. ಅದರ ಬದಲಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಂಸತ್ ಸದಸ್ಯರಿಗೆ ವಿತರಿಸಲಾಗುತ್ತದೆ. ಈ ದಾಖಲಾತಿಗಳು ಸಾರ್ವಜನಿಕರಿಗೂ ದೊರೆಯುತ್ತವೆ. ಹಣಕಾಸು ಸಚಿವಾಲಯ ಹೇಳಿಕೆ ನೀಡಿ, ಈ ಹಿಂದೆಂದೂ ಕಾಣದ ಹೆಜ್ಜೆ ಭಾಗವಾಗಿ ಕೇಂದ್ರ ಬಜೆಟ್ 2021- 22ರಲ್ಲಿ ಮೊದಲ ಬಾರಿಗೆ ಕಾಗದರಹಿತವಾಗಿ ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಬಜೆಟ್ ಅಪ್ಲಿಕೇಷನ್ ಬಳಕೆ ಮಾಡಬೇಕು ಎಂದಿದ್ದಲ್ಲಿ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು:
* ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
ಕೇಂದ್ರ ಬಜೆಟ್ ವೆಬ್ ಪೋರ್ಟಲ್ www.indianbudget.gov.in ಮೂಲಕ ಅಪ್ಲಿಕೇಷನ್ ಅನ್ನು ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಆಂಡ್ರಾಯಿಡ್ ಮತ್ತು ಐಒಎಸ್ ಎರಡೂ ಪ್ಲಾಟ್ ಫಾರ್ಮ್ ನಲ್ಲಿ ಡೌನ್ ಲೋಡ್ ಮಾಡಬಹುದು.
* ಈ ಅಪ್ಲಿಕೇಷನ್ ನಲ್ಲಿ ಯಾವ ದಾಖಲಾತಿಗಳು ಲಭ್ಯ ಇವೆ?
ಈ ಮೊಬೈಲ್ ಆಪ್ ನಿಂದ ಹದಿನಾಲ್ಕು ಕೇಂದ್ರ ಬಜೆಟ್ ದಾಖಲಾತಿ ದೊರೆಯುತ್ತದೆ. ಅದರಲ್ಲಿ ವಾರ್ಷಿಕ ಬಜೆಟ್, ಅನುದಾನದ ಬೇಡಿಕೆ (ಡಿಜಿ), ಹಣಕಾಸು ವಿಧೇಯಕ ಮುಂತಾದ ಸಂವಿಧಾನದಲ್ಲಿ ತಿಳಿಸಿರುವಂಥ ಮಾಹಿತಿ ದೊರೆಯುತ್ತದೆ.
* ಅಪ್ಲಿಕೇಷನ್ ದ್ವಿ ಭಾಷೆಯಲ್ಲಿದೆ
ಈ ಅಪ್ಲಿಕೇಷನ್ ಮೂಲಕ ದಾಖಲಾತಿಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ದೊರೆಯುತ್ತದೆ.

* ಅಪ್ಲಿಕೇಷನ್ ನಲ್ಲಿ ವಿಶೇಷ ಫೀಚರ್
ದಾಖಲಾತಿಗಳು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಸರ್ಚ್, ಝೂಮ್ ಇನ್ ಮತ್ತು ಔಟ್ ಸೇರಿದಂತೆ ಇತರ ಫೀಚರ್ ಗಳಿವೆ. ಒಂದು ವೇಳೆ ಬೇಕೆಂದಲ್ಲಿ ದಾಖಲಾತಿಯ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.
* ಅಪ್ಲಿಕೇಷನ್ ನಲ್ಲಿ ದಾಖಲಾತಿಗಳು ಯಾವಾಗ ಸಿಗುತ್ತವೆ?
ಫೆಬ್ರವರಿ 1, 2021ರಂದು ಸಂಸತ್ ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ನಂತರ ಮೊಬೈಲ್ ಆಪ್ ನಲ್ಲಿ ಬಜೆಟ್ ದಾಖಲಾತಿಗಳು ಸಿಗುತ್ತದೆ. ಈ ಹಿಂದೆಲ್ಲ ಬಜೆಟ್ ದಾಖಲಾತಿಗಳ ಮುದ್ರಣಕ್ಕೆ ಮುನ್ನ ಹಲ್ವಾ ಕಾರ್ಯಕ್ರಮ ಮಾಡಲಾಗುತ್ತಿತ್ತು. ಸ್ವತಂತ್ರ ಭಾರತದ ಮೊದಲ ಬಜೆಟ್ ನವೆಂಬರ್ 26, 1947ರಿಂದ ಇದು ನಡೆದುಬಂದಿತ್ತು. ಬಜೆಟ್ ದಾಖಲೆಯಲ್ಲಿ ಕೇಂದ್ರ ಸರ್ಕಾರದ ಆದಾಯ- ವೆಚ್ಚ, ಹಣಕಾಸು ವೆಚ್ಚ, ಹೊಸ ತೆರಿಗೆಗಳ ಮಾಹಿತಿ, ಹೊಸ ಹಣಕಾಸು ವರ್ಷಕ್ಕೆ ಇತರ ಮಾಹಿತಿ ಇರುತ್ತದೆ. ಆ ದಾಖಲಾತಿ ಈ ವರ್ಷ ಫಿಸಿಕಲ್ ಆಗಿ ಮುದ್ರಣವಾಗಲ್ಲ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications