ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1, 2023ರಂದು ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ. ಈ ಬಜೆಟ್ನಲ್ಲಿ ಮೂಲಸೌಕರ್ಯಕ್ಕೆ ಅಧಿಕ ಗಮನ ನೀಡುವ ಸಾಧ್ಯತೆಯಿದೆ. ಏತನ್ಮಧ್ಯೆ ತಜ್ಞರು ಕೇಂದ್ರ ಬಜೆಟ್ಗೂ ಮುನ್ನ ಮುಂದಿನ ವಾರ ಕೆಲವೊಂದು ಪ್ರಮುಖ ಸ್ಟಾಕ್ಗಳನ್ನು ಖರೀದಿ ಮಾಡಲು ಸಲಹೆ ನೀಡಿದೆ.
2024ರ ಚುನಾವಣೆಗೂ ಮುನ್ನ ನಡೆಯುವ ಬಜೆಟ್ ಇದಾದ ಕಾರಣ ಈ ಬಜೆಟ್ ಜನರ ಮೇಲೆ, ಮೂಲಸೌಕರ್ಯ ಒದಗಿಸುವ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಮೂಲಸೌಕರ್ಯ ವಲಯದ ಮೇಲೆ ಅಧಿಕ ಗಮನ ಹರಿಸುವ ಕಾರಣದಿಂದಾಗಿ ಕೆಲವು ನಿಗದಿತ ಸ್ಟಾಕ್ಗಳು ಮುಂದಿನ 3-4 ತ್ರೈಮಾಸಿಕದಲ್ಲಿ ಅಧಿಕ ಬೆಳವಣಿಗೆ ಹೊಂದುವ ಸಾಧ್ಯತೆಯಿದೆ.
ಚುನಾವಣೆಗೂ ಮುನ್ನ ಬರುವ ಈ ಬಜೆಟ್ ಹೆಚ್ಚಾಗಿ ಜನರಿಗೆ ಸಹಾಯ ಮಾಡುವ ಬಗ್ಗೆ ಕೇಂದ್ರಿತವಾಗಿರಲಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಚತುರ ಹೂಡಿಕೆದಾರರು ಯಾವಾಗಲೂ ಚಿಂತನೆ ನಡೆಸಿಯೇ ಹೂಡಿಕೆ ಮಾಡುತ್ತಾರೆ ಎಂದು ಹೇಳಿರುವ ತಜ್ಞರು, ಮುಂದಿನ ವಾರದಲ್ಲಿ, ಬಜೆಟ್ಗೂ ಮುನ್ನ ಪ್ರಮುಖ 5 ಸ್ಟಾಕ್ಸ್ಗಳ ಮೇಲೆ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ.
ಯಾವೆಲ್ಲ ಸ್ಟಾಕ್ಸ್ಗಳಲ್ಲಿ ಹೂಡಿಕೆ ಮಾಡಲು ಸಲಹೆ?
ಹೂಡಿಕೆದಾರರು ಪ್ರಮುಖವಾಗಿ ಎನ್ಸಿಸಿ, ಕೆಎನ್ಆರ್ ಕನ್ಸ್ಟ್ರಕ್ಷನ್ಸ್, ಕ್ಯೂಮಿನ್ಸ್ ಇಂಡಿಯಾ, ಎಲ್&ಟಿ ಮೊದಲಾದ ಸ್ಟಾಕ್ಗಳೆಡೆ ಗಮನ ಹರಿಸಲು ತಿಳಿಸಿದ್ದಾರೆ. 2023ರ ಬಜೆಟ್ಗೂ ಮುನ್ನ ಈ ಸ್ಟಾಕ್ಗಳನ್ನು ಖರೀದಿಸುವುದು ಉತ್ತಮ ಎಂದು ಹೇಳಿದ್ದಾರೆ. ಹಾಗೆಯೇ ಪ್ರಮುಖವಾಗಿ ಇನ್ಫ್ರಾ ಸ್ಟಾಕ್ಗಳನ್ನೇ ಯಾಕೆ ಖರೀದಿ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಸ್ಟಾಕ್ಗಳು ಮುಂದಿನ 3-4 ತ್ರೈಮಾಸಿಕಗಳು ಲಾಭವನ್ನೇ ತರಲಿದೆ ಎಂದು ತಿಳಿಸಿದ್ದಾರೆ. ಇನ್ನು 2023ರಲ್ಲಿ ಯಾವೆಲ್ಲ ಸ್ಟಾಕ್ಗಳು ಖರೀದಿ ಮಾಡಬಹುದು ಎಂದು ಈ ಹಿಂದದೆಯೇ ಮೋತಿಲಾಲ್ ಓಸ್ವಾಲ್ ಸಂಸ್ಥೆ ಹೇಳಿದೆ. ಎನ್ಸಿಸಿ, ಕ್ಯೂಮಿನ್ಸ್ ಇಂಡಿಯಾ, ಸೀಮೆನ್ಸ್, ಕೆಎನ್ಆರ್ ಕನ್ಸ್ಟ್ರಕ್ಷನ್, ಎಲ್&ಟಿ ಸ್ಟಾಕ್ಗಳನ್ನು ಖರೀದಿಸುವಂತೆ ಮೋತಿಲಾಲ್ ಓಸ್ವಾಲ್ನ ಚಂದನ್ ತಾಪಾರಿಯ ತಿಳಿಸಿದ್ದಾರೆ.
ಯಾಕೆ ಇನ್ಫ್ರಾ ಸ್ಟಾಕ್ ಖರೀದಿಸಬೇಕು?
2023ರ ಕೇಂದ್ರ ಬಜೆಟ್ಗೂ ಮುನ್ನ ಇನ್ಫ್ರಾ ಸ್ಟಾಕ್ಗಳನ್ನೇ ಏಕೆ ಖರೀದಿ ಮಾಡುವುದು ಉತ್ತಮ ಎಂಬ ಬಗ್ಗೆ ಪ್ರಾಫೀಟ್ಮಾರ್ಟ್ ಸೆಕ್ಯೂರಿಟೀಸ್ನ ರಿಸರ್ಚ್ ಮುಖ್ಯಸ್ಥ, ಅವಿನಾಶ್ ಗೋರಕ್ಷಕರ ಮಾಹಿತಿ ನೀಡಿದ್ದಾರೆ. "ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆ ಬಜೆಟ್ ಇದಾಗಿದೆ. ಈ ಬಜೆಟ್ನಲ್ಲಿ ಸರ್ಕಾರವು ಹೆಚ್ಚಾಗಿ ಜನರಿಗೆ ಸಹಾಯಕವಾಗುವ ನಿರ್ಧಾರವನ್ನು, ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ವಿರೋಧ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ನಿರುದ್ಯೋಗ ಪ್ರಮಾಣವನ್ನು ಅಸ್ತ್ರವನ್ನಾಗಿಸಿದೆ. ಈ ಕಾರಣದಿಂದಾಗಿ ಉದ್ಯೋಗ ಸೃಷ್ಟಿಗೆ ಸರ್ಕಾರ ಬಜೆಟ್ನಲ್ಲಿ ಹೆಚ್ಚಿನ ಗಮನ ನೀಡುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದ ಬಳಿಕ ಮೂಲಸೌಕರ್ಯವು ಅಧಿಕವಾಗಿ ಉದ್ಯೋಗ ಸೃಷ್ಟಿ ಮಾಡುವ ವಲಯವಾದ ಕಾರಣದಿಂದಾಗಿ ಈ ವಲಯದ ಮೇಲೆ ವಿಶೇಷವಾದ ಗಮನವನ್ನು ಕೇಂದ್ರ ಬಜೆಟ್ ವೇಳೆ ಸರ್ಕಾರ ಇರಿಸುವ ನಿರೀಕ್ಷೆಯಿದೆ," ಎಂದು ಅವಿನಾಶ್ ಗೋರಕ್ಷಕರ ಹೇಳಿದ್ದಾರೆ.
ಚುನಾವಣೆಗೂ ಮುನ್ನ ಸ್ಟಾಕ್ಗಳ ಮೇಲೆ ಕಣ್ಣು
"ಈ ವರ್ಷ 5 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದರಿಂದಾಗಿ ಈ ರಾಜ್ಯಗಳ ಮೇಲೆಯೂ ಕೇಂದ್ರ ಸರ್ಕಾರ ಹೆಚ್ಚಿನ ಗಮನಹರಿಸುವ ಸಾಧ್ಯತೆಯಿದೆ. ಈ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಮೊದಲಾದವುಗಳಿಗೆ ವಿಶೇಷ ಗಮನಹರಿಸುವ ನಿರೀಕ್ಷೆಯಿದೆ. ಚುನಾವಣೆಗಳು ಇರುವ ಕಾರಣದಿಂದಾಗಿ ಮುಂದಿನ ಅರ್ಧ ವರ್ಷವು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮೂಲಸೌಕರ್ಯ ಸಂಸ್ಥೆಗಳ ಮೇಲೆ ಹೆಚ್ಚು ಗಮನ ಇಡಲಿದೆ. ಇದರಿಂದಾಗಿ ಷೇರುಮಾರುಕಟ್ಟೆಯಲ್ಲಿಯೂ ಈ ಪ್ರಮುಖ ಸಂಸ್ಥೆಗಳು ಲಾಭವನ್ನು ಕಾಣಬಹುದು. ಅದರಿಂದಾಗಿ ಕೇಂದ್ರ ಬಜೆಟ್ಗೂ ಮುನ್ನ ನೀವು ಮಧ್ಯಮ ಅವಧಿಯ ಅಥವಾ 9ರಿಂದ 12 ತಿಂಗಳ ಸ್ಟಾಕ್ ಅನ್ನು ಖರೀದಿಸುವುದು ಉತ್ತಮ," ಎಂದು ಕೂಡಾ ವಿವರಿಸಿದ್ದಾರೆ.
ಮೋತಿಲಾಲ್ ಓಸ್ವಾಲ್ನ ತಜ್ಞರು ಹೇಳುವುದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋತಿಲಾಲ್ ಓಸ್ವಾಲ್ ಸಂಸ್ಥೆಯ ತಜ್ಞರಾದ ಚಂದನ್ ತಾಪಾರಿಯಾ, "ಮುಂದಿನ ಕೇಂದ್ರ ಬಜೆಟ್ನಲ್ಲಿ ಹೆಚ್ಚಾಗಿ ಮೂಲಸೌಕರ್ಯದ ಮೇಲೆ ಗಮನಹರಿಸುವ ಸಾಧ್ಯತೆಯಿದೆ. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರವು ತಮ್ಮ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವಂತಹ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅಭಿವೃದ್ಧಿ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿ ಮೇಲೆ ಅಧಿಕ ಗಮನಹರಿಸಲಾಗುತ್ತದೆ. ಚುನಾವಣೆ ಕಾರಣದಿಂದಾಗಿ ಮುಂದಿನ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅತೀ ದೊಡ್ಡ ಘೋಷಣೆಯನ್ನು ಮಾಡುವ ನಿರೀಕ್ಷೆಯಿದೆ," ಎಂದು ತಿಳಿಸಿದ್ದಾರೆ.
ಇಲ್ಲಿ ಗಮನಿಸಿ!
ಈ ಮೇಲಿನ ಲೇಖನವನ್ನು ತಜ್ಞರ ಅಭಿಪ್ರಾಯದ ಮೇಲೆ ಬರೆಯಲಾಗಿದೆ. ಯಾವುದೇ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ನೀವು ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅರಿತುಕೊಂಡು ಹೂಡಿಕೆ ಮಾಡುವುದು ಉತ್ತಮ. ಈ ಲೇಖನದ ಆಧಾರದಲ್ಲಿ ಹೂಡಿಕೆ ಮಾಡಿದ ಬಳಿಕ ಉಂಟಾದ ಯಾವುದೇ ನಷ್ಟಕ್ಕೆ ಗ್ರೇನಿಯಂ ಸಂಸ್ಥೆ ಅಥವಾ ಲೇಖಕರು ಜವಾಬ್ದಾರರಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications