"ಬ್ಯಾಂಕರ್ಸ್ ಬ್ಯಾಂಕ್ 2022 ಪ್ರಶಸ್ತಿ" ಯು ಕೆನರಾ ಬ್ಯಾಂಕ್ ತೆಕ್ಕೆಗೆ ಸೇರಿದೆ. ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್ನಲ್ಲಿ ಕೆನರಾ ಬ್ಯಾಂಕ್ಗೆ ಬ್ಯಾಂಕರ್ಸ್ ಬ್ಯಾಂಕ್ ಎಂಬ ಪ್ರಶಸ್ತಿ ಲಭ್ಯವಾಗಿದೆ ಎಂದು ಕೆನರಾ ಬ್ಯಾಂಕ್ ಶುಕ್ರವಾರ ಘೋಷಣೆ ಮಾಡಿದೆ. ಇನ್ನು ಕೆನರಾ ಬ್ಯಾಂಕ್ ಈಗಾಗಲೇ ಭಾರತದಲ್ಲಿ ಉತ್ತಮ ಬ್ಯಾಂಕ್ ಎಂದನಿಸಿಕೊಂಡಿದೆ.
ಲಂಡನ್ನಲ್ಲಿ ನವೆಂಬರ್ 29ರಿಂದ ಡಿಸೆಂಬರ್ 1, 2022ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್ನಲ್ಲಿ ಕೆನರಾ ಬ್ಯಾಂಕ್ನ ಎಂಡಿ, ಸಿಇಒ ಎಲ್ ವಿ ಪ್ರಭಾಕರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಕೆನರಾ ಬ್ಯಾಂಕ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭ ಪಡೆದಿದೆ. ಜುಲೈನಿಂದ ಸೆಪ್ಟೆಂಬರ್ವರೆಗಿನ 3 ತಿಂಗಳಲ್ಲಿ ಕೆನರಾ ಬ್ಯಾಂಕ್ನ ನಿವ್ವಳ ಲಾಭ 2,525 ಕೋಟಿ ರೂಪಾಯಿ ಇದೆ. ಈ ನಡುವೆ ಈ ಪ್ರಶಸ್ತಿಯು ಲಭ್ಯವಾಗಿದ್ದು, ಕೆನರಾ ಬ್ಯಾಂಕ್ ಮಾರುಕಟ್ಟೆ ಮೌಲ್ಯವೂ ಏರುವ ನಿರೀಕ್ಷೆಯಿದೆ. ಈ ಪ್ರಶಸ್ತಿ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಏನಿದು ಈ ಬ್ಯಾಂಕರ್ಸ್ ಬ್ಯಾಂಕ್ ಪ್ರಶಸ್ತಿ?
ಬ್ಯಾಂಕರ್ಸ್ ಬ್ಯಾಂಕ್ ಪ್ರಶಸ್ತಿಯು ಬ್ಯಾಂಕಿಂಗ್ ವಲಯದಲ್ಲಿ ಆಸ್ಕರ್ ಪ್ರಶಸ್ತಿಯಂತಹ ಮೌಲ್ಯವನ್ನು ಹೊಂದಿದೆ. ಈ ಪ್ರಶಸ್ತಿ ಲಭ್ಯವಾದ ಬ್ಯಾಂಕ್ ಅತೀ ಉನ್ನತ ಬ್ಯಾಂಕ್ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ ಕಳೆದ 12 ತಿಂಗಳಿನಲ್ಲಿ ಉತ್ತಮ ರಿಟರ್ನ್, ಕಾರ್ಯತಂತ್ರ, ಹೊಸ ಅನ್ವೇಷನೆ, ತಂತ್ರಜ್ಞಾನ, ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂಬುವುದರ ಪ್ರತೀಕವಾಗಿದೆ ಈ ಪ್ರಶಸ್ತಿ.
ಬ್ಯಾಂಕಿಂಗ್ ಕ್ಷೇತ್ರದ ಪ್ರಸಿದ್ಧ ಮ್ಯಾಗಜಿನ್ (ನಿಯತಕಾಲಿಕೆ) ಆದ ದೀ ಬ್ಯಾಂಕರ್ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಮ್ಯಾಗಜಿನ್ 180ಕ್ಕೂ ಅಧಿಕ ದೇಶಗಳಲ್ಲಿ ಪ್ರಸಿದ್ಧವಾಗಿದೆ. ಫೈನಾನ್ಶಿಯಲ್ ಟೈಮ್ಸ್ (ಎಫ್ಟಿ) ಗ್ರೂಪ್ ಈ ಮ್ಯಾಗಜಿನ್ ಅನ್ನು ಪ್ರಕಟಿಸುತ್ತದೆ. ಫೈನಾನ್ಶಿಯಲ್ ಟೈಮ್ಸ್ ಬ್ರಿಟಿಷ್ ಮೂಲದ ದೈನಂದಿನ ಪತ್ರಿಕೆಯಾಗಿದ್ದು 1888ರಲ್ಲಿ ಬಿಡುಗಡೆಯಾಗಿದೆ.
ಕೆನರಾ ಬ್ಯಾಂಕ್ಗೆ 2ನೇ ತ್ರೈಮಾಸಿಕದಲ್ಲಿ ಲಾಭ
ಕೆನರಾ ಬ್ಯಾಂಕ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭ ಪಡೆದಿದೆ. 3 ತಿಂಗಳಲ್ಲಿ ಕೆನರಾ ಬ್ಯಾಂಕ್ನ ನಿವ್ವಳ ಲಾಭ 2,525 ಕೋಟಿ ರೂಪಾಯಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ 1,333 ಕೋಟಿ ರೂ ನಿವ್ವಳ ಲಾಭ ಕೆನರಾ ಬ್ಯಾಂಕ್ಗೆ ದಕ್ಕಿತ್ತು. ಅಂದರೆ ಅದರ ಲಾಭದಲ್ಲಿ ಶೇ. 89ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಕೆನರಾ ಬ್ಯಾಂಕ್ನ ಒಟ್ಟು ಆದಾಯ 24,932.19 ಕೋಟಿ ರೂ ಆಗಿದೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಅದರ ಆದಾಯ 21,331.49 ಕೋಟಿ ರೂ ಇತ್ತು. ಕೆನರಾ ಬ್ಯಾಂಕ್ನ ಆದಾಯದ ಮಾಹಿತಿ ಪ್ರಕಟವಾಗುತ್ತಿದ್ದಂತೆಯೇ ಅಕ್ಟೋಬರ್ 21ರಂದು ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ. 4ರಷ್ಟು ಹೆಚ್ಚಾಗಿ ಹೋಗಿದೆ. ಅ. 20ರ ಬ್ಯುಸಿನೆಸ್ ಎಂಡ್ನಲ್ಲಿ ಕೆನರಾ ಬ್ಯಾಂಕ್ನ ಷೇರು 259.3 ರೂಪಾಯಿ ಮಾರಾಟವಾಗಿತ್ತು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications