ಚೀನಾದಲ್ಲಿ ಭಾರೀ ಭೀತಿ ಮೂಡಿಸಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿರುವ ಡೆಡ್ಲಿ ಕೊರೊನಾವೈರಸ್ ಈಗಾಗಲೇ ಚೀನಾದ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡಿದೆ. ಜನರ ಜೀವವನ್ನು ಬಲಿ ತೆಗೆದುಕೊಂಡಿರುವುದರ ಜೊತೆಗೆ ಉದ್ಯಮದ ಮೇಲೆ ಭಾರೀ ಪೆಟ್ಟು ನೀಡಿದೆ.
ಕೊರೊನಾವೈರಸ್ ಸೋಂಕು ತಡೆಗಾಗಿ ಚೀನಾ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಪತ್ಯೇಕ ಆಸ್ಪತ್ರೆಯನ್ನೇ ನಿರ್ಮಿಸಿ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಕೊರೊನಾವೈರಸ್ನಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿನ ನೋಟುಗಳನ್ನು ನಾಶಮಾಡಲು ತೀರ್ಮಾನಿಸಿದೆ.
ವೈರಸ್ ಹೆಚ್ಚಿರುವ ಪ್ರದೇಶಗಳಲ್ಲಿನ ನೋಟುಗಳು ನಾಶ
ಕೊರೊನಾವೈರಸ್ ತೀವ್ರವಾಗಿ ಹಾನಿಗೊಳಗಾದ ಕೆಲವು ಪ್ರದೇಶಗಳಲ್ಲಿನ ಆಸ್ಪತ್ರೆಗಳು, ಮಾರುಕಟ್ಟೆಗಳು ಮತ್ತು ಬಸ್ಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ನೋಟುಗಳನ್ನು ನಾಶಮಾಡಲು ಯೋಜನೆ ಮಾಡಿರುವುದಾಗಿ ಚೀನಾದ ಕೇಂದ್ರ ಬ್ಯಾಂಕ್ ಹೇಳಿದೆ.
600 ಬಿಲಿಯನ್ ಯುವಾನ್ ನೋಟು ಬದಲಾವಣೆ
ಸೋಂಕು ಪೀಡಿದ ಪ್ರದೇಶಗಳಲ್ಲಿ ಚಲಾವಣೆಯಲ್ಲಿರುವ ಸುಮಾರು 600 ಬಿಲಿಯನ್ ಯುವಾನ್ ಅಂದರೆ 85.6 ಬಿಲಿಯನ್ (ಭಾರತದ ರುಪಾಯಿಗಳಲ್ಲಿ 6 ಲಕ್ಷ, 11,955 ಕೋಟಿ) ಹಣವನ್ನು ನಾಶ ಮಾಡಿ ಹೊಸದಾಗಿ ಮುದ್ರಿತ ಕಾಗದದ ಕರೆನ್ಸಿಯನ್ನು ರಚಿಸಲು ಯೋಜಿಸಲಾಗಿದೆ ಎಂದು ಚೀನಾದ ಕೇಂದ್ರೀಯ ಬ್ಯಾಂಕಿನ ಉಪ ಗವರ್ನರ್ ಫ್ಯಾನ್ ಯೀಫೈ ಹೇಳಿದ್ದಾರೆ.
ಹೊಸ ನೋಟುಗಳ ಮೇಲೂ ನಿಗಾ
ದೇಶದ ಇತರ ಪ್ರದೇಶಗಳಲ್ಲಿ, ಒಳಬರುವ ಕಾಗದದ ಕರೆನ್ಸಿಯನ್ನು ಚಲಾವಣೆಯಿಂದ ತೆಗೆದುಹಾಕಿ ಮತ್ತು ಅದನ್ನು ಹೊಸ ನಗದು ಮೂಲಕ ಬದಲಾಯಿಸುವಂತೆ ಸರ್ಕಾರ ಬ್ಯಾಂಕುಗಳಿಗೆ ಈಗಾಗಲೇ ಆದೇಶಿಸಿದೆ. ಹೊಸ ಹಣವನ್ನು 14 ದಿನಗಳವರೆಗೆ ಕ್ಯಾರೆಂಟೈನ್ ಅಡಿಯಲ್ಲಿ ಇರಿಸಲು ಮತ್ತು ಹೆಚ್ಚಿನ ತಾಪಮಾನದಲ್ಲಿ ಇರಿಸಿ, ಜೊತೆಗೆ ನೇರಳಾತೀತ ಬೆಳಕಿನಿಂದ ಅದನ್ನು ಶೋಧಿಸಿ, ಸೋಂಕುರಹಿತವಾಗಿ ಸಾರ್ವಜನಿಕರಿಗೆ ಹಿಂದಿರುಗಿಸಲು ನಿರ್ದೇಶಿಸಲಾಗಿದೆ.
ಜನವರಿ 17ರಿಂದಲೇ ಹೊಸ ನೋಟುಗಳ ವಿತರಣೆ
ಜನವರಿ 17ರಿಂದಲೇ ಚೀನಾ ಸರ್ಕಾರ ಹೊಸ ನೋಟುಗಳನ್ನು ವಿತರಣೆ ಮಾಡುತ್ತಿದೆ. ಈಗಾಗಲೇ 4 ಬಿಲಿಯನ್ ಯುವಾನ್ (572 ಮಿಲಿಯನ್ ಅಮೆರಿಕನ್ ಡಾಲರ್) ನಷ್ಟು ಹಣವನ್ನು ದೇಶಾದ್ಯಂತ ವಿತರಣೆ ಮಾಡಲಾಗಿದೆ.
ಜೊತೆಗೆ ಫೆಬ್ರವರಿ 3 ಮತ್ತು 13ರ ನಡುವೆ ಶೆನ್ಜೆನ್ ಹೊರತುಪಡಿಸಿ ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ಗೆ ಸುಮಾರು 3 ಬಿಲಿಯನ್ ಯುವಾನ್ಗಳನ್ನು(ಚೀನಾದ ಕರೆನ್ಸಿ) ವಿತರಿಸಲಾಗಿದೆ. ಆದರೆ 7.8 ಬಿಲಿಯನ್ ಯುವಾನ್ಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಪಿಬಿಒಸಿ ತಿಳಿಸಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications