ಸಿಟಿ ಗ್ರೂಪ್ ನಿಂದ ಮುಂದಿನ ಮೂರು ವರ್ಷದಲ್ಲಿ ಏಷ್ಯಾದಲ್ಲಿ ಆರು ಸಾವಿರ ಯುವ ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಯುವಜನರು ತೀರಾ ಗಂಭೀರವಾದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಅವರಿಗೆ ಭರವಸೆ ನೀಡುವ ಪ್ರಯತ್ನ ಇದಾಗಿದೆ.
ಏಷ್ಯಾ ವಿಭಾಗದಲ್ಲಿ ಬರುವ ಸಿಟಿ ಗ್ರೂಪ್ ನ ಸಾಂಸ್ಥಿಕ ಹಾಗೂ ರೀಟೇಲ್ ವ್ಯವಹಾರದಲ್ಲಿ 24 ವರ್ಷದೊಳಗಿನ 60 ಸಾವಿರ ಮಂದಿಗೆ ಮುಂದಿನ ಮೂರು ವರ್ಷದಲ್ಲಿ ಉದ್ಯೋಗ ತರಬೇತಿ ನೀಡಲಾಗುತ್ತದೆ. ನ್ಯೂಯಾರ್ಕ್ ಮೂಲದ ಈ ಬ್ಯಾಂಕ್ ಶುಕ್ರವಾರ ಈ ಬಗ್ಗೆ ತಿಳಿಸಿದೆ.
ಸಿಟಿ ಹಾಗೂ ಸಿಟಿ ಫೌಂಡೇಷನ್ ನಿಂದ 3.5 ಕೋಟಿ ಯುಎಸ್ ಡಿ ಹೂಡಿಕೆ
ಏಷ್ಯಾದಲ್ಲಿ 2023ರ ಹೊತ್ತಿಗೆ ಕಡಿಮೆ ಆದಾಯ ಇರುವ ಯುವಜನರಿಗೆ ಉದ್ಯೋಗ ಸಾಧ್ಯತೆ ಹೆಚ್ಚಿಸುವ ಸಲುವಾಗಿಯೇ ಸಿಟಿ ಹಾಗೂ ಸಿಟಿ ಫೌಂಡೇಷನ್ ನಿಂದ 3.5 ಕೋಟಿ ಅಮೆರಿಕ ಡಾಲರ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಲಾಗಿದೆ. ಇಡೀ ವಿಶ್ವದಲ್ಲಿನ ಒಟ್ಟು ಯುವ ಜನರ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಏಷ್ಯಾದಲ್ಲೇ ಇದೆ. ಅಂದರೆ, ಅಂದಾಜು 70 ಕೋಟಿ ಯುವ ಜನರಿದ್ದಾರೆ. ವಿಶ್ವ ಕಾರ್ಮಿಕ ಸಂಸ್ಥೆ ಪ್ರಕಾರ, ಈ ಪೈಕಿ 20%ನಷ್ಟು ದುಡಿಯವ ವಯಸ್ಸಿನವರಿದ್ದು, ಅದರಲ್ಲಿ ಅರ್ಧದಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. 2020ರ ಕೊನೆ ಹೊತ್ತಿಗೆ 13 ರಾಷ್ಟ್ರಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಕೆಲವು ಕಡೆಯಂತೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಯುವಜನರ ನಿರುದ್ಯೋಗ ದರವು ದುಪ್ಪಟ್ಟಾಗಲಿದೆ.
ಅತಿ ದೊಡ್ಡ ಆದಾಯ ಏಷ್ಯಾದಿಂದ
ಏಷ್ಯಾ ಪೆಸಿಫಿಕ್ ನಲ್ಲಿ ಯುವಜನರ ನಿರುದ್ಯೋಗ ಬಿಕ್ಕಟ್ಟು ಇದ್ದು, ಅದರಲ್ಲೂ ಕಡಿಮೆ ಆದಾಯದ, ದುರ್ಬಲ ವರ್ಗದಲ್ಲಿ ಕೊರೊನಾದ ಕಾರಣಕ್ಕೆ ಪರಿಣಾಮ ಮತ್ತೂ ಗಂಭೀರವಾಗಿದೆ ಎಂದು ಸಿಟಿ ಏಷ್ಯಾ ಪೆಸಿಫಿಕ್ ಸಿಇಒ ಪೀಟರ್ ಬಜೆಟ್ ಹೇಳಿದ್ದಾರೆ. ಉತ್ತರ ಅಮೆರಿಕಾ ಹೊರತು ಪಡಿಸಿದಲ್ಲಿ ಸಿಟಿ ಗ್ರೂಪ್ ಗೆ ಅತಿ ದೊಡ್ಡ ಆದಾಯ ಏಷ್ಯಾದಿಂದ ಬರುತ್ತದೆ. 2020ರ ಮಾಹಿತಿ ಪ್ರಕಾರ, ಜಾಗತಿಕ ಆದಾಯದ ಶೇಕಡಾ 25ರಷ್ಟು ಈ ಭಾಗದಿಂದ ಬಂದಿದೆ.
ಹೊಸ ಹುದ್ದೆ, ಪ್ರತಿ ವರ್ಷದ ನೇಮಕಾತಿ ಎರಡೂ ಉಂಟು
ಬ್ಯಾಂಕಿಂಗ್, ಕ್ಯಾಪಿಟಲ್ ಮಾರ್ಕೆಟ್, ಅಡ್ವೈಸರಿ, ಮಾರ್ಕೆಟ್ಸ್ ಮತ್ತು ಸೆಕ್ಯೂರಿಟೀಸ್ ಸರ್ವೀಸಸ್ ಮತ್ತು ಗ್ರಾಹಕ ಬ್ಯಾಂಕಿಂಗ್ ಹೀಗೆ ವಿವಿಧ ವ್ಯವಹಾರಗಳಲ್ಲಿ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಹಾಂಕಾಂಗ್ ಮೂಲದ ವಕ್ತಾರ ತಿಳಿಸಿದ್ದಾರೆ. ಈ ಉದ್ಯೋಗಾವಕಾಶಗಳಲ್ಲಿ ಹೊಸ ಹುದ್ದೆ ಹಾಗೂ ಪ್ರತಿ ವರ್ಷದ ನೇಮಕಾತಿ ಎರಡೂ ಒಳಗೊಂಡಿರುತ್ತವೆ. ಏಷ್ಯಾ ಪೆಸಿಫಿಕ್ ನಾದ್ಯಂತ ನೇಮಕಾತಿ ನಡೆಯುತ್ತದೆ. ಆ ಪೈಕಿ ಬಹುತೇಕ ಉದ್ಯೋಗ ಆಗ್ನೇಯ ಏಷ್ಯಾ ಭಾಗಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications