ಕೊರೊನಾವೈರಸ್ ಪರಿಣಾಮ ದೇಶದೆಲ್ಲೆಡೆ ಉದ್ಯಮಗಳೆಲ್ಲಾ ನೆಲಕಚ್ಚಿದ್ದು, ಇದರ ನಡುವೆ ಸದ್ದಿಲ್ಲದೆ ಡಿಜಿಟಲೀಕರಣ ಸಾಗುತ್ತಿದೆ. ಹೌದು ಈ ಹಿಂದೆ ಕೇಂದ್ರ ಸರ್ಕಾರ ಡಿಜಿಟಲೀಕರಣಕ್ಕೆ ಒತ್ತು ನೀಡಿ ನಾನಾ ಯೋಜನೆಗೆ ಮುಂದಾಗಿತ್ತು. ಆದರೆ ಕೊರೊನಾವೈರಸ್ ಕಾರಣ ಜನರು ತಮ್ಮಷ್ಟಕ್ಕೆ ತಾವೇ ಡಿಜಿಟಲೀಕರಣ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯೊಂದರ ವರದಿಯಿಂದ ತಿಳಿದುಬಂದಿದೆ.
ಮಾತಿನ ಮೂಲಕವೇ ಕೆಲಸ ಮಾಡುವ ಆ್ಯಪ್ಗಳು
ಕೊರೊನಾವೈರಸ್ ಬಂದ ಮೇಲೆ ಜನರಿಗೆ ವಸ್ತುಗಳನ್ನು, ವ್ಯಕ್ತಿಗಳನ್ನು ಮುಟ್ಟುವುದೆಂದರೆ ಬಹಳ ಹೆದರಿಕೆ. ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರು ಕೆಲವು ವಿಶೇಷ ತಂತ್ರಜ್ಞಾನಗಳಿಗೆ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿರುವುದು ವಾಯ್ಸ ಬೇಸ್ಡ್ ಇಂಟರ್ಫೇಸ್. ಅಂದರೆ ಇಲ್ಲಿ ಸ್ಪರ್ಶವಿಲ್ಲದೇ, ನಮ್ಮ ಮಾತಿನ ಮೂಲಕ ಕೆಲಸ ಮಾಡಿಸಬಹುದಾದ ಸಾಧನಗಳಿಗೆ ಆದ್ಯತೆ. ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ನಂತವು ಇಂತಹ ಸಾಧನಗಳ ಬಳಕೆ ಹೆಚ್ಚಿದೆ. ಮೊಬೈಲ್ನಲ್ಲೂ ಅಂತಹ ಆ್ಯಪ್ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಮೊಬೈಲ್ ಪಾವತಿಗೆ ಹೆಚ್ಚಿದ ಆದ್ಯತೆ
ಜನ ವಸ್ತುಗಳನ್ನು ಖರೀದಿಸಲು ಹೋದಾಗ, ಮನೆಗೆ ತರಿಸಿಕೊಂಡಾಗ ನಗದು ಅಥವಾ ಕಾರ್ಡ್ ನೀಡಲು ಬಯಸುತ್ತಿದ್ದರು. ಈ ಮಾದರಿಯಲ್ಲಿ ಸ್ಪರ್ಶ ಅನಿವಾರ್ಯ. ಆದ್ದರಿಂದ ಮೊಬೈಲ್ ಆ್ಯಪ್ಗಳ ಮೂಲಕ ನೇರವಾಗಿ ಖಾತೆಗೆ ಹಣ ರವಾನಿಸುವ ಸ್ವಭಾವ ಜಾಸ್ತಿಯಾಗಿದೆ. 90 ಪರ್ಸೆಂಟ್ರಷ್ಟು ಮಂದಿ ಈ ದಾರಿಯನ್ನೇ ಆಯ್ದುಕೊಳ್ಳುತ್ತಿದ್ದಾರೆಂದು ಕ್ಯಾಪ್ಜೆಮಿನಿ ಹೇಳಿದೆ.
ಸಂಪರ್ಕರಹಿತ ಸೇವೆಗೆ ಗ್ರಾಹಕರ ಆದ್ಯತೆ
ಬಹುತೇಕ ಗ್ರಾಹಕರು ಕೋವಿಡ್ ಕಾರಣದಿಂದ ಸಂಪರ್ಕರಹಿತ ಸೇವೆಯನ್ನು ಬಯಸುತ್ತಿದ್ದಾರೆ. ಇದನ್ನು ಎಲ್ಲ ಕಂಪನಿಗಳು, ಸೇವಾ ಸಂಸ್ಥೆಗಳು ಗಮನಿಸಿವೆ. ಉದಾಹರಣೆಗೆ ಕಾರು ಕಂಪನಿಗಳು, ಸಂಪೂರ್ಣ ಪ್ರಕ್ರಿಯೆಯನ್ನು ಅಂತರ್ಜಾಲದ ಮುಖೇನ ಮುಗಿಸಿ, ಕಾರನ್ನು ತಾವೇ ಖುದ್ದಾಗಿ, ಗರಿಷ್ಠ ಸ್ವಚ್ಛತಾ ನಿಯಮ ಅನುಸರಿಸಿ ಮನೆಗೆ ತಲುಪಿಸಿ ಬರುತ್ತಿವೆ. ಇದೇ ರೀತಿಯಲ್ಲಿ ಹಲವು ಕಂಪನಿಗಳು ಸೇವೆಯನ್ನು ಆದಷ್ಟು ಅಂತರ್ಜಾಲದ ಮೂಲಕ, ಡಿಜಿಟಲೀಕರಣದ ಮೂಲಕ ಗ್ರಾಹಕರನ್ನು ತಲುಪುತ್ತಿವೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications