2020ನೇ ಇಸವಿಯ ಏಪ್ರಿಲ್ ಹಾಗೂ ಜೂನ್ ತ್ರೈಮಾಸಿಕದ ಅರ್ಥ ವ್ಯವಸ್ಥೆಯನ್ನು ಕೊರೊನಾ ನುಂಗಿಹಾಕಿದೆ. ಇಡೀ ವಿಶ್ವದಲ್ಲೇ ಕೊರೊನಾ ಬೀರಿದ ಪ್ರಭಾವದ ಫಲಿತಾಂಶ ಬರುತ್ತಿದೆ. ಇದೀಗ ಯುನೈಟೆಡ್ ಕಿಂಗ್ ಡಮ್ ನಿಂದ ಬಂದಿರುವ ಸುದ್ದಿ ಪ್ರಕಾರ, ಈ ಅವಧಿಯಲ್ಲಿ ಅಲ್ಲಿನ ಆರ್ಥಿಕ ಉತ್ಪಾದನೆ 20.4% ಕುಗ್ಗಿದೆ. ಈವರೆಗೆ ಯಾವುದೇ ಪ್ರಮುಖ ದೇಶ ಬಿಡುಗಡೆ ಮಾಡಿರುವ ಜಿಡಿಪಿ ಅಂಕಿ- ಅಂಶದಲ್ಲೇ ಅತ್ಯಂತ ಹೆಚ್ಚಿನ ಕುಸಿತ ಇದು.
ವಿಶ್ವದಲ್ಲೇ ಆರನೇ ಪ್ರಮುಖ ಆರ್ಥಿಕತೆ ಹೊಂದಿದ ದೇಶ ಯು.ಕೆ. ಈ ಹಿಂದಿನ ತ್ರೈಮಾಸಿಕದಲ್ಲೂ ಜಿಡಿಪಿ ಪ್ರಮಾಣ ಕುಗ್ಗಿತ್ತು. ಇದೀಗ ಸತತವಾಗಿ ಎರಡನೇ ತ್ರೈಮಾಸಿಕವೂ ಕುಸಿತ ಕಂಡಿರುವುದರಿಂದ ಆರ್ಥಿಕ ಕುಸಿತದ (ರಿಸೆಷನ್) ವಲಯದೊಳಗೆ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.
ಜೂನ್ ತ್ರೈಮಾಸಿಕದಲ್ಲಿ ಮೇ ತಿಂಗಳಿಗಿಂತ ಸ್ವಲ್ಪ ಮಟ್ಟಿಗೆ, ಅಂದರೆ 8.7% ಜಿಡಿಪಿ ಚೇತರಿಸಿಕೊಂಡಿದೆ. ಇನ್ನು ಈ ಬಾರಿ ಜೂನ್ ಉತ್ಪಾದನೆಯು 16.8% ಇದ್ದು, ಕಳೆದ ವರ್ಷದ ಜೂನ್ ಗೆ ಹೋಲಿಸಿದಲ್ಲಿ ಕಡಿಮೆ ಇದೆ. ಅದೇ ರೀತಿ ಮೇ ತಿಂಗಳಲ್ಲಿ 23.3% ಕಡಿಮೆ ಆಗಿತ್ತು.

ಈಗಿನ ಆರ್ಥಿಕ ಕುಸಿತವು ಕೊರೊನಾದಿಂದ ಆಗಿರುವ ಜಿಡಿಪಿ ಕುಸಿತದ ಪರಿಣಾಮ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ನಲ್ಲಿ ಆರ್ಥಿಕತೆ ಪುಟಿದೇಳಲು ಆರಂಭವಾಯಿತು. ಆದರೂ ಜೂನ್ ತಿಂಗಳ ಜಿಡಿಪಿಯು ಕೊರೊನಾ ವ್ಯಾಪಿಸುವ ಮುಂಚಿನ, ಅಂದರೆ ಫೆಬ್ರವರಿ ಮಟ್ಟಕ್ಕಿಂತ ಕಡಿಮೆ ಇದೆ.
ಭಾರತಕ್ಕೆ ರಿಸರ್ವ್ ಬ್ಯಾಂಕ್ ಹೇಗೋ ಅದೇ ರೀತಿ ಯುಕೆ ಪಾಲಿಗೆ ಬ್ಯಾಂಕ್ ಆಫ್ ಇಂಗ್ಲೆಂಡ್. ಅಲ್ಲಿನ ಕೇಂದ್ರ ಬ್ಯಾಂಕ್ ಪ್ರಕಾರ, ಯು.ಕೆ. ಆರ್ಥಿಕತೆ ಮೊದಲಿನ ಪ್ರಮಾಣಕ್ಕೆ ಬರಬೇಕಿದ್ದಲ್ಲಿ 2021ರ ಕೊನೆ ತ್ರೈಮಾಸಿಕ ಆಗಬಹುದು. ಇದರ ಜತೆಗೆ ನಿರುದ್ಯೋಗ ಪ್ರಮಾಣ ವಿಪರೀತ ಹೆಚ್ಚಾಗಲಿದೆ ಎಂದು ಕೂಡ ಎಚ್ಚರಿಸಲಾಗಿದೆ.
ಈ ಸಂಖ್ಯೆಗಳು ಬಹಳ ಕಷ್ಟದ ಸಮಯ ಎಂಬುದನ್ನು ಖಾತ್ರಿ ಮಾಡುತ್ತಿವೆ ಎಂದು ಹಣಕಾಸು ಸಚಿವ ರಿಷಿ ಸುನಕ್ ಹೇಳಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮತ್ತು ದುಃಖದ ಸಂಗತಿ ಅಂದರೆ, ಮುಂಬರುವ ತಿಂಗಳಲ್ಲಿ ಇನ್ನೂ ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications