ಪಾಲಿಸಿಬಜಾರ್ ನ ಸಹವರ್ತಿ ಸಂಸ್ಥೆಯಾದ ಪೈಸಾಬಜಾರ್ ನಿಂದ 1500 ಉದ್ಯೋಗಿಗಳು ಹೊರಬಿದ್ದಿದ್ದಾರೆ. ಅಂದರೆ ಅಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಅಂದಹಾಗೆ, ಪೈಸಾಬಜಾರ್ ನಲ್ಲಿ ಇರುವ ಉದ್ಯೋಗಿಗಳ ಸಂಖ್ಯೆಯೇ 3,000. ಅದರಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಯನ್ನು ತೆಗೆದಂತಾಗಿದೆ.
ಕಾರ್ಯ ಚಟುವಟಿಕೆ ಹಾಗೂ ವ್ಯವಹಾರ ತರುವ ವಿಭಾಗದಲ್ಲಿ ಇದ್ದವರ ಪೈಕಿಯೇ ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಏಕೆಂದರೆ ಕೆಲವು ಸೆಗ್ಮೆಂಟ್ ಗಳಲ್ಲಿ ಹೊಸದಾಗಿ ಸಾಲ ಪಡೆಯುವವರ ಪ್ರಮಾಣವೇ ಶೇಕಡಾ 90ರಷ್ಟು ಕುಸಿದಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲವರು ಮಾಹಿತಿ ನೀಡಿದ್ದಾರೆ.
ಉದ್ಯೋಗದಿಂದ ತೆಗೆದವರಿಗೆ ಒಂದು ತಿಂಗಳು ನೋಟಿಸ್
ಉದ್ಯೋಗದಿಂದ ತೆಗೆಯಲಾದವರನ್ನು ಒಂದು ತಿಂಗಳು ನೋಟಿಸ್ ಅವಧಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದು, ಜೂನ್ 30, 2020ಕ್ಕೆ ಕೊನೆಯಾಗುತ್ತದೆ. ಇನ್ನು ಮೇಲ್ ಸ್ತರದ ಅಧಿಕಾರಿಗಳು ನೂರು ಮಂದಿಯನ್ನು ಪೈಸಾಬಜಾರ್ ನಿಂದ ಪಾಲಿಸಿಬಜಾರ್ ಗೆ ನೇಮಿಸಿಕೊಳ್ಳಲಾಗಿದೆ. ಆದರೆ ಈ ಯಾವುದರ ಬಗ್ಗೆಯೂ ಪೈಸಾಬಜಾರ್ ನಿಂದ ಪ್ರತಿಕ್ರಿಯೆ ದೊರೆತಿಲ್ಲ.
ಹಣದ ಹರಿವು ನಿಂತಿದ್ದರಿಂದ ಬಡ್ಡಿ ದರ ಹೆಚ್ಚಳ
ಕೊರೊನಾದ ಕಾರಣಕ್ಕೆ ಕಳೆದ ಎರಡು ತಿಂಗಳಿಂದಲೂ ಡಿಜಿಟಲ್ ಮೂಲಕ ಸಾಲ ನೀಡುವ ವಲಯ ಸಂಕಷ್ಟದಲ್ಲಿತ್ತು. ಇನ್ನು ಡಿಜಿಟಲ್ ಮೂಲಕ ಸಾಲ ನೀಡುವವರಿಗೆ ಬ್ಯಾಂಕ್, ಎನ್ ಬಿಎಫ್ ಸಿಗಳಿಂದ ಹೊಸದಾಗಿ ಹಣ ಸಂಗ್ರಹಿಸುವುದು ಸಹ ಕಷ್ಟವಾಗಿತ್ತು. ಏಕೆಂದರೆ, ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಹಣವನ್ನೇ ಸಾಲವಾಗಿ ಇವುಗಳು ನೀಡುತ್ತಿದ್ದವು. ಹೀಗೆ ಹಣದ ಹರಿವು ನಿಂತುಹೋಗಿದ್ದರಿಂದ ಸಾಲದ ಬಡ್ಡಿ ದರದಲ್ಲಿ ಹೆಚ್ಚಳವಾಗಿತ್ತು.
ಇಎಂಐ ವಿನಾಯಿತಿ ನೀಡಿದ್ದರಿಂದ ವಸೂಲಿ ಕಷ್ಟ
ಇದರ ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಾಲದ ಮೇಲಿನ ಇಎಂಐಗೆ ವಿನಾಯಿತಿ ಘೋಷಿಸಿದ್ದರಿಂದ ಸಾಲ ನೀಡುವ ಸಂಸ್ಥೆಗಳಿಗೆ ಸಾಲಗಾರರಿಂದ ಹಣ ವಸೂಲಿ ಮಾಡುವುದೇ ಕಷ್ಟವಾಯಿತು. ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಹೇಳುವ ಪ್ರಕಾರ, ಹೊಸದಾಗಿ ಸಾಲ ಪಡೆಯುವವರ ಪ್ರಮಾಣ 10ರಿಂದ 25 ಪರ್ಸೆಂಟ್ ಕಡಿಮೆ ಆಗಿದೆ.
ಲಾಕ್ ಡೌನ್ ನಂತರದ ಪರಿಣಾಮ
ಅತಿ ದೊಡ್ಡ ಮಟ್ಟದಲ್ಲಿ ಪರಿಣಾಮ ಶುರುವಾಗಿದ್ದು ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾದ ಮೇಲೆ. ಈ ಹಿಂದೆ ಯಾವಾಗಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳೂ ಒಳಗೊಂಡಂತೆ ಡಿಜಿಟಲ್ ಸಾಲ ನೀಡುವ ಸಂಸ್ಥೆಗಳು ಇಂಥ ಸನ್ನಿವೇಶಕ್ಕೆ ಸಿದ್ಧವಿರಲಿಲ್ಲ. ಈ ಬಿಕ್ಕಟ್ಟಿನ ಸಂದರ್ಭದಲ್ಲೇ ಪೈಸಾಬಜಾರ್ ಪಾಲಿಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಶೇಕಡಾ 80ರಷ್ಟು ಕಡಿಮೆ ಆಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ



Click it and Unblock the Notifications