ನವದೆಹಲಿ, ಅ. 7: ಡಾಬರ್ ಕಂಪನಿ ಈಗ ಬ್ರಾಂಡೆಡ್ ಮಸಾಲ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದೆ. ಬಾದ್ಶಾ ಮಸಾಲ ಕಂಪನಿಯ ಶೇ. 51ರಷ್ಟು ಷೇರುಗಳನ್ನು ತಾನು ಖರೀದಿಸುತ್ತಿರುವುದಾಗಿ ಡಾಬರ್ ಸಂಸ್ಥೆ ನಿನ್ನೆ ಬುಧವಾರ ತಿಳಿಸಿದೆ. 587.5 ಕೋಟಿ ರೂಪಾಯಿಗೆ ಈ ಡೀಲ್ ನಡೆಯಲಿದೆ. ಕಂಪನಿ ನಿನ್ನೆ ನೀಡಿದ ಹೇಳಿಕೆ ಪ್ರಕಾರ 2023 ಮಾರ್ಚ್ 31ರೊಳಗೆ ಈ ಖರೀದಿ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇನ್ನುಳಿದ ಷೇರುಗಳನ್ನು ಐದು ವರ್ಷಗಳ ನಂತರ ಡಾಬರ್ ಖರೀದಿಸಲಿದೆ.
"ಡಾಬರ್ ಇಂಡಿಯಾ ಸಂಸ್ಥೆ ಬಾದ್ಸಾ ಮಸಾಲ ಪ್ರೈ ಲಿ ಕಂಪನಿಯ ಶೇ. 51ರಷ್ಟು ಈಕ್ವಿಟಿ ಷೇರುಗಳನ್ನು ಖರೀದಿಸಲು ಆ ಕಂಪನಿಯ ಪ್ರೊಮೋಟರ್ಸ್ ಮತ್ತು ಷೇರುದಾರರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನುಳಿದ ಶೇ. 49ರಷ್ಟು ಷೇರುಗಳನ್ನು ಐದು ವರ್ಷದ ಅವಧಿ ಬಳಿಕ ಖರೀದಿಸಲಾಗುವುದು" ಎಂದು ಡಾಬರ್ ಕಂಪನಿ ಹೇಳಿಕೆ ನೀಡಿದೆ.
70 ಸಾವಿರ ಕೋಟಿ ರೂ ಮಾರುಕಟ್ಟೆ
ಡಾಬರ್ ಕಂಪನಿ ಈಗಾಗಲೇ ಮಸಾಲ ಪದಾರ್ಥಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಆದರೆ, ಬಾದ್ಶಾ ಮಸಲಾ ಖರೀದಿ ಮೂಲಕ ಬ್ರಾಂಡೆಡ್ ಮಸಾಲ ಕ್ಷೇತ್ರಕ್ಕೆ ಅಡಿ ಇಡಲು ಸಾಧ್ಯವಾಗುತ್ತದೆ. ಒಂದು ವರದಿ ಪ್ರಕಾರ ಭಾರತದಲ್ಲಿ ಮಸಾಲಾ ಪದಾರ್ಥಗಳ ಮಾರುಕಟ್ಟೆ 70 ಸಾವಿರ ಕೋಟಿ ರೂಪಾಯಿಯಷ್ಟಿದೆ. ಇದರಲ್ಲಿ ಬ್ರಾಂಡೆಡ್ ಮಸಾಲ ಪದಾರ್ಥಗಳ ಪಾಲು ಶೇ. 35ರಷ್ಟಿದೆ. ಅಂದರೆ ಸುಮಾರು 25 ಸಾವಿರ ಕೋಟಿ ರೂಪಾಯಿಯಷ್ಟಿರುವ ಈ ಬ್ರಾಂಡೆಡ್ ಸ್ಪೈಸಸ್ನ ಮಾರುಕಟ್ಟೆ 2025ರಷ್ಟರಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಅವೆಂಡಸ್ ಕ್ಯಾಪಿಟಲ್ ಎಂಬ ಹೂಡಿಕೆ ಸಂಸ್ಥೆ ಪ್ರಕಾರ 2030ರಷ್ಟರಲ್ಲಿ ಸ್ಪೈಸ್ ಮಾರುಕಟ್ಟೆ ಗಣನೀಯವಾಗಿ ವಿಸ್ತಾರವಾಗಲಿದೆ.

ಎಫ್ಎಂಸಿಜಿಗಳ ಚಿತ್ತ
ಸ್ಪೈಸಸ್ ಅಥವಾ ಮಸಾಲ ಮಾರುಕಟ್ಟೆಗೆ ದೊಡ್ಡ ದೊಡ್ಡ ಕಂಪನಿಗಳು ಇದೂವರೆಗೆ ಹೆಚ್ಚು ಗಮನ ಹರಿಸಲು ಹೋಗಿಲ್ಲ. ಈ ಕ್ಷೇತ್ರದಲ್ಲಿ ವಿಭಿನ್ನವಾದ ಉತ್ಪನ್ನವನ್ನು ಕೊಟ್ಟು ತಮ್ಮದೇ ಬ್ರಾಂಡ್ ಅಭಿವೃದ್ಧಿಪಡಿಸುವ ಅವಕಾಶ ಕಡಿಮೆ ಇರುವುದರಿಂದ ಎಫ್ಎಂಸಿಜಿ ಕಂಪನಿಗಳು ಈ ಕ್ಷೇತ್ರದಿಂದ ತುಸು ದೂರವೇ ಉಳಿದಿವೆ. ಆದರೆ, ಇತ್ತೀಚೆಗೆ ಇಲ್ಲೂ ಸಂಚಲನಗಳಾಗುತ್ತಿವೆ.
ಟಾಟಾ, ಐಟಿಸಿ ಕಂಪನಿಗಳು ಮಸಾಲ ಕ್ಷೇತ್ರಕ್ಕೆ ಕಾಲಿಟ್ಟಿವೆಯಾದರೂ ಹೆಚ್ಚಿನ ಗಮನ ವಹಿಸಿಲ್ಲ. ದೇಶದ ಪ್ರಮುಖ ಮಸಾಲ ಪದಾರ್ಥಗಳ ಬ್ರಾಂಡ್ ಕಂಪನಿ ಎನಿಸಿದ ಎಂಡಿಎಚ್ ಮಸಾಲಾವನ್ನು ಹಿಂದೂಸ್ತಾನ್ ಯೂನಿಲಿವರ್ ಖರೀದಿಸಲು ಮುಂದಾಗಿದೆ ಎಂಬಂತಹ ಸುದ್ದಿ ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಆದರೆ, ಈ ವಿಚಾರವನ್ನು ಎರಡೂ ಕಂಪನಿಗಳು ತಳ್ಳಿಹಾಕಿರುವುದು ಹೌದು.
ಎಂಡಿಎಚ್ ಜೊತೆ ಎವರೆಸ್ಟ್, ಶಕ್ತಿ ಮಸಾಲ, ಆಚಿ ಮಸಾಲ, ಈಸ್ಟರ್ನ್ ಕಾಂಡಿಮೆಂಟ್ಸ್ ಕಂಪನಿಗಳು ಭಾರತೀಯ ಮಸಾಲ ಮಾರುಕಟ್ಟೆಯಲ್ಲಿ ಹಳೆಯ ಹುಲಿಗಳೆನಿಸಿವೆ. ಎಂಟಿಆರ್ ಕಂಪನಿಯ ಮಸಾಲ ಪದಾರ್ಥಗಳು ಕರ್ನಾಟಕದ ಮಾರುಕಟ್ಟೆಯಲ್ಲಿ ಜನಪ್ರಿಯ ಎನಿಸಿವೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications