ದೆಹಲಿ ಮೂಲದ ಉದ್ಯಮಿಯೊಬ್ಬ ತನ್ನದೇ ಕೊಲೆಗೆ ಸಂಚು ರೂಪಿಸಿದ್ದ ಘಟನೆ ಪೊಲೀಸರು ಬಯಲು ಮಾಡಿದ್ದಾರೆ. ಆ ಉದ್ಯಮಿಯು ಸಾವನ್ನಪ್ಪಿದ್ದಾನೆ. ಆದರೆ ಆ ಯೋಜನೆ ಗೊತ್ತಾಗಿದೆ. ಅಸಲಿಗೆ ಆಗಿದ್ದೇನೆಂದರೆ, ತಾನು ಸಾವನ್ನಪ್ಪಿದರೆ 1 ಕೋಟಿ ರುಪಾಯಿ ಇನ್ಷೂರೆನ್ಸ್ ಮೊತ್ತ ಕುಟುಂಬದವರಿಗೆ ಬರುತ್ತದೆ. ಅದರಿಂದ ಸಾಲವನ್ನು ತೀರಿಸಬಹುದು ಎಂಬುದು ಲೆಕ್ಕಾಚಾರ ಆಗಿತ್ತು.
ಸಾವಗೀಡಾದ ವ್ಯಕ್ತಿಯ ಹೆಸರು ಗೌರವ್ ಬನ್ಸಾಲ್. ವಯಸ್ಸು 37 ವರ್ಷ. ಆತ ದೆಹಲಿಯ ಐಪಿ ಎಕ್ಸ್ ಟೆನ್ಷನ್ ನಲ್ಲಿ ಪತ್ನಿ ಹಾಗೂ ಮಕ್ಕಳ ಜತೆಗೆ ವಾಸವಿದ್ದ. ಆತನ ಸಾವಿನ ನಂತರ ಇಡೀ ಸಾವಿನ ಪ್ರಕರಣದ ಹಿನ್ನೆಲೆ ಗೊತ್ತಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ದೆಹಲಿ ಹೊರವಲಯದ ರಣ್ ಹೌಲ ಪ್ರದೇಶದಲ್ಲಿ ಗೌರವ್ ಶವ ಜೂನ್ 10ನೇ ತಾರೀಕು ಪತ್ತೆಯಾಗಿದ್ದು, ಶವದ ಕೈ ಕಟ್ಟಿ ಹಾಕಿ, ಮರಕ್ಕೆ ನೇಣು ಹಾಕಲಾಗಿತ್ತು.
ಗೌರವ್ ಪತ್ನಿ ಶಾಲು ಪೊಲೀಸರಲ್ಲಿ ಜೂನ್ 10ರಂದು ದೂರು ದಾಖಲಿಸಿದ್ದರು. ತಾನು ನಡೆಸುತ್ತಿದ್ದ ದಿನಸಿ ಅಂಗಡಿಗೆ ತೆರಳಿದ ಗೌರವ್ ಮನೆಗೆ ವಾಪಸ್ ಆಗಿಲ್ಲ ಎಂದು ತಿಳಿಸಿದ್ದರು. ಇನ್ನು ಆಕೆಯೇ ನೀಡಿದ ಮಾಹಿತಿಯಂತೆ, ಫೆಬ್ರವರಿಯಲ್ಲಿ ಗೌರವ್ ಆರು ಲಕ್ಷ ರುಪಾಯಿ ಸಾಲ ಪಡೆದುಕೊಂಡಿದ್ದ. ಜತೆಗೆ ಖಿನ್ನತೆಗೆ ಚಿಕಿತ್ಸೆಗೆ ಪಡೆಯುತ್ತಿದ್ದ. ಇನ್ನು ಕ್ರೆಡಿಟ್ ಕಾರ್ಡ್ ವಂಚನೆಗೆ ಕೂಡ ಒಳಗಾಗಿದ್ದ.

ಪೊಲೀಸರು ತನಿಖೆ ಆರಂಭಿಸಿದಾಗ ಗೊತ್ತಾಗಿದ್ದೇನೆಂದರೆ, ಅಪ್ರಾಪ್ತ ವ್ಯಕ್ತಿಯ ಜತೆಗೆ ಗೌರವ್ ನಿರಂತರವಾಗಿ ಮಾತುಕತೆ ನಡೆಸಿದ್ದ. ಆ ವ್ಯಕ್ತಿಗೇ ತನ್ನ ಹತ್ಯೆಯ ಸುಪಾರಿ ನೀಡಿದ್ದ. ಜೂನ್ 9ನೇ ತಾರೀಕು ಸಾರ್ವಜನಿಕ ಸಾರಿಗೆಯಲ್ಲಿ ಹೊರವಲಯಕ್ಕೆ ತೆರಳಿದ ಗೌರವ್, ತನ್ನ ಫೋಟೋ ಕಳಿಸಿದ್ದ. ಆರೋಪಿಗಳು ಆತನ ಕೈಯನ್ನು ಕಟ್ಟಿ ಮರಕ್ಕೆ ನೇಣು ಹಾಕಿದ್ದರು.
ಅಂದ ಹಾಗೆ, ಗೌರವ್ ಗೆ ಆ ಅಪ್ರಾಪ್ತ ಫೇಸ್ ಬುಕ್ ಮೂಲಕ ಪರಿಚಯ ಆಗಿದ್ದ. ಇಪ್ಪತ್ತು ದಿನಗಳ ಹಿಂದಷ್ಟೇ ಆ ಅಪ್ರಾಪ್ತನನ್ನು ಫೇಸ್ ಬುಕ್ ಸ್ನೇಹಿತರ ಪಟ್ಟಿಯಿಂದ ಹೊರಹಾಕಿದ್ದ ಗೌರವ್. ಆದರೆ ಫೇಸ್ ಬುಕ್ ಚಾಟ್ ನಲ್ಲಿ ಗೌರವ್ ತನ್ನ ಕೊಲೆಗೆ ಮಾಡಿದ್ದ ಪ್ರಸ್ತಾವದ ಮಾಹಿತಿ ಇತ್ತು. ಆರಂಭದಲ್ಲಿ ಗೌರವ್ ಪ್ರಸ್ತಾವಕ್ಕೆ ಆ ಅಪ್ರಾಪ್ತ ನಿರಾಕರಿಸಿದ್ದು, ಆ ನಂತರ 80 ಸಾವಿರ ಮೊತ್ತಕ್ಕೆ ಒಪ್ಪಿಸಿದ್ದಾನೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications