ನವದೆಹಲಿ, ನ. 17: ಬಹಳ ವಿವಾದಕ್ಕೆ ಒಳಗಾಗಿದ್ದ ಮತ್ತು ಬಹಳಷ್ಟು ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದ ನೋಟು ಅಪನಗದೀಕರಣ (Note demonetisation) ಪ್ರಕ್ರಿಯೆ ಆಗಿ 6 ವರ್ಷ ಗತಿಸಿವೆ. ಸರ್ಕಾರದ ಈ ವಿವಾದಿತ ನಿರ್ಧಾರಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಹಣಕಾಸು ಸಚಿವಾಲಯ ತನ್ನ ನಿರ್ಧಾರಕ್ಕೆ ಕಾರಣ ಏನೆಂದು ನಿನ್ನೆ ಬುಧವಾರ ತಿಳಿಸಿದೆ.
ಕೇಂದ್ರ ಸರ್ಕಾರದ ಪರಿವರ್ತನೀಯ ಆರ್ಥಿಕ ನೀತಿಯ (Transformational economic policy) ಸರಣಿ ಕ್ರಮಗಳ ಒಂದು ಭಾಗವಾಗಿ 2016ರ ನವೆಂಬರ್ನಲ್ಲಿ ಡೀಮಾನಿಟೈಸೇಶನ್ ಕ್ರಮ ತೆಗೆದುಕೊಳ್ಳಲಾಯಿತು. ನೋಟು ಅಪನಗದೀಕರಣದ ಪರಿಣಾಮವಾಗಿ ದೇಶದಲ್ಲಿ ನಕಲಿ ಕರೆನ್ಸಿ ಕಡಿಮೆ ಆಯಿತು, ಡಿಜಿಟಲ್ ವಹಿವಾಟು ಊಹಿಸಲೂ ಅಸಾಧ್ಯವಾದಷ್ಟು ಹೆಚ್ಚಾಯಿತು. ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಯಿತು ಎಂದು ಸರ್ಕಾರ ಸುಪ್ರೀಮ್ ಕೋರ್ಟ್ಗೆ ವಿವರ ನೀಡಿದೆ.
ನೋಟ್ ಬ್ಯಾನ್
2016 ನವೆಂಬರ್ 8ರಂದು ರಾತ್ರೋರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಕ್ರಮ ಪ್ರಕಟಿಸಿದ್ದರು. ಆಗ ಅತಿಹೆಚ್ಚು ಚಲಾವಣೆಯಲ್ಲಿದ್ದ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳು ಅಮಾನ್ಯವೆಂದು ಘೋಷಿಸಲಾಯಿತು. ಈ ನೋಟುಗಳನ್ನು ಹೊಂದಿದ್ದವರು ಅದನ್ನು ಬ್ಯಾಂಕಿಗೆ ಮರಳಿಸಬೇಕೆಂದು ಸೂಚಿಸಲಾಯಿತು. ಬ್ಯಾಂಕ್ನಿಂದ ಹಣ ವಿತ್ಡ್ರಾ ಮಾಡಲು ಮಿತಿ ಹಾಕಲಾಯಿತು. ಹಲವು ದಿನಗಳ ಕಾಲ ಜನರಿಗೆ ಹಣ ಸಿಗದೇ ಪರದಾಡಿದ್ದು ಹೌದು.
ಆದರೆ, ದೇಶದ ಒಳಿತಿಗಾಗಿ ಕೆಲ ಕಹಿ ಗುಳಿಗೆಗಳನ್ನು ಪಡೆಯಬೇಕಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು. ಕಪ್ಪು ಹಣ ಹೊರತೆಗೆಯಲು ನೋಟ್ ಬ್ಯಾನ್ ಮಾಡಬೇಕಾಯಿತು ಎಂದು ಆಡಳಿತ ಪಕ್ಷದ ನಾಯಕರುಗಳು ಕಾರಣಗಳನ್ನು ಕೊಟ್ಟಿದ್ದರು.. ಆದರೆ ಕಾಕತಾಳೀಯವೋ ಅಥವಾ ನೋಟ್ ಬ್ಯಾನ್ ಪರಿಣಾಮವೋ, 2016ರಿಂದ ಭಾರತದ ಆರ್ಥಿಕ ಬೆಳವಣಿಗೆ ಮಂದಗೊಂಡಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಸರ್ಕಾರದ ಸಮರ್ಥನೆ ಏನು?
ನೋಟು ಅಮಾನ್ಯೀಕರಣ ಕ್ರಮವು ದೇಶದ ಆರ್ಥಿಕತೆಗೆ ಶಿಷ್ಟಾಚಾರ ತರುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿತ್ತು. ಆರ್ಥಿಕತೆಯ ಪರಿಧಿಯ ಹೊರಗುಳಿದಿದ್ದ ಲಕ್ಷಾಂತರ ಜನರಿಗೆ ಅವಕಾಶಗಳನ್ನು ನಿರ್ಮಿಸುವ ಉದ್ದೇಶ ಇತ್ತು. ನಗದು ಆಧಾರಿತ ಅನೌಪಚಾರಿಕ ಆರ್ಥಿಕತೆಯನ್ನು ವಿಧ್ಯುಕ್ತ ಆರ್ಥಿಕತೆಯ ಪರಿಧಿಗೆ ತರಬೇಕಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
2016ರಲ್ಲಿ ಡೀಮಾನಿಟೈಸೇಶನ್ಗೆ ಐದು ವರ್ಷ ಮುಂಚೆ ಇದ್ದ ಸ್ಥಿತಿಯನ್ನು ಉಲ್ಲೇಖಿಸಿರುವ ಸರ್ಕಾರ, ಈ ಐದು ವರ್ಷದಲ್ಲಿ 500 ರೂ ಮತ್ತು 1 ಸಾವಿರ ರೂ ಮುಖಬೆಲೆಯ ನೋಟುಗಳು ತೀವ್ರವಾಗಿ ಹೆಚ್ಚಾಗಿದ್ದವು. ಈ ಅವಧಿಯಲ್ಲಿ 500 ರೂ ಮುಖಬೆಲೆಯ ನೋಟು ಶೇ. 76.4ರಷ್ಟು ಹೆಚ್ಚಾಗಿದೆ. 1000 ರೂ ಮುಖಬೆಲೆಯ ನೋಟುಗಳ ಸಂಖ್ಯೆ ಶೇ. 100ಕ್ಕಿಂತ ಹೆಚ್ಚಾಗಿತ್ತು. ಕಪ್ಪು ಹಣ, ನಕಲಿ ಹಣ ಎಲ್ಲವೂ ಸೃಷ್ಟಿಯಾಗಿತ್ತು. ಅದನ್ನು ನಿಯಂತ್ರಿಸಲು 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಬೇಕಾಯಿತು ಎಂದು ಸರ್ಕಾರ ವಾದಿಸಿದೆ.
ಡಿಜಿಟಲ್ ಪರಿವರ್ತನೆ
ಅಪನಗದೀಕರಣ ಕ್ರಮದಿಂದ ಆರ್ಥಿಕತೆಗೆ ಹಿನ್ನಡೆಯಾಗಿತ್ತು ಎಂಬ ವಾದವನ್ನು ಈ ಸಂದರ್ಭದಲ್ಲಿ ಸರ್ಕಾರ ತಳ್ಳಿಹಾಕಿದೆ. 2016-17ರ ಹಣಕಾಸು ವರ್ಷದಲ್ಲಿ ನೈಜ ಬೆಳವಣಿಗೆ ದರ ಶೇ. 8.2 ಇತ್ತು. 2017-18ರಲ್ಲಿ ಶೇ. 6.8 ಇತ್ತು. ಕೋವಿಡ್ ಮುಂಚಿನ ದಶಕದ ಆರ್ಥಿಕ ಬೆಳವಣಿಗೆಯ ಶೇ. 6.6ರ ದರಕ್ಕಿಂತ ಆ ಎರಡು ವರ್ಷ ಹೆಚ್ಚು ಬೆಳವಣಿಗೆ ಆಗಿತ್ತು ಎಂದು ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠಕ್ಕೆ ನಿನ್ನೆ ಸರ್ಕಾರ ಕೊಟ್ಟಿರುವ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇನ್ನು, ನೋಟ್ ಬ್ಯಾನ್ ನಂತರ ದೇಶದಲ್ಲಿ ಡಿಜಿಟಲ್ ಪರಿವರ್ತನೆ ಸುಗಮವಾಯಿತು ಎಂದು ಸರ್ಕಾರ ಹೇಳಿದೆ. 2016ರ ಇಡೀ ವರ್ಷದಲ್ಲಿ 6,952 ಕೋಟಿ ರೂ ಮೌಲ್ಯದ 1.09 ಲಕ್ಷ ಡಿಜಿಟಲ್ ಪೇಮೆಂಟ್ ಟ್ರಾನ್ಸಾಕ್ಷನ್ ನಡೆದಿತ್ತು. ಅದೇ 2022ರ ಅಕ್ಟೋಬರ್ ತಿಂಗಳೊಂದರಲ್ಲೇ 12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 730 ಕೋಟಿ ಡಿಜಿಟಲ್ ವಹಿವಾಟು ನಡೆದಿದೆ ಎಂದು ಸರ್ಕಾರ ಅಂಕಿ ಅಂಶ ಮುಂದಿಟ್ಟಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications