ಈಗಾಗಲೇ ಸಾಲದ ಹೊರೆಯಲ್ಲಿ ಕುಗ್ಗಿಹೋಗಿರುವ ಡಿಎಚ್ ಎಫ್ ಎಲ್ ನಲ್ಲಿ ಆರ್ಥಿಕ ವರ್ಷ 2007ರಿಂದ 2019ರ ಮಧ್ಯೆ 17,394 ಕೋಟಿ ರುಪಾಯಿ ಮೌಲ್ಯದ ವಂಚನೆ ನಡೆದಿದೆ ಎಂದು ಟ್ರಾನ್ಸಾಕ್ಷನ್ ಆಡಿಟರ್ ಗ್ರಾಂಟ್ ಥೋರ್ ನ್ಟಾನ್ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಇನ್ ಸಾಲ್ವೆನ್ಸಿ ಹಾಗೂ ಬ್ಯಾಂಕ್ ರಪ್ಸಿ ಕೋಡ್ (IBC) ಅಡಿಯಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (DHFL)ಗೆ ಆಡಳಿತಗಾರರನ್ನು ನೇಮಿಸಲಾಯಿತು.
ಈ ಸಂಸ್ಥೆಯಲ್ಲಿ ನಡೆದಿರುವ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಗ್ರಾಂಟ್ ಥೋರ್ ನ್ಟಾನ್ ನೆರವು ಪಡೆಯಲಾಯಿತು. ಕಳೆದ ವರ್ಷ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ (NCLT) ಮುಂಬೈ ಪೀಠವು ಕಳೆದ ವರ್ಷ ಕಂಪೆನಿಯ ದಿವಾಳಿ ನಿರ್ಣಯವನ್ನು ಒಪ್ಪಿಕೊಂಡಿತು.
14,046 ಕೋಟಿ ರುಪಾಯಿ ಮೊತ್ತ
ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಆರ್. ಸುಬ್ರಮಣಿಯಕುಮಾರ್ ಅವರನ್ನು ಕಂಪೆನಿ ಆಡಳಿತಗಾರರಾಗಿ ನೇಮಿಸಲಾಯಿತು. ಎನ್ ಸಿಎಲ್ ಟಿ ಮುಂದೆ ದಾಖಲಿಸಿರುವ ಅರ್ಜಿ ಪ್ರಕಾರ, ಹಣಕಾಸು ಪರಿಣಾಮ ಬೀರುವ ಅಂದಾಜು 14,046 ಕೋಟಿ ರುಪಾಯಿ ಮೊತ್ತವು ಜೂನ್ 30, 2019ಕ್ಕೆ ಕಂಪೆನಿ ಲೆಕ್ಕದ ಅನ್ವಯ ಬಾಕಿ ಇದೆ.
3,348 ಕೋಟಿ ರುಪಾಯಿ ನಷ್ಟ
ಇನ್ನು ಕೆಲವು ಕಂಪೆನಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡಿರುವ ಸಾಲದಿಂದ ಆಗಿರುವ ನಷ್ಟದ ಪ್ರಮಾಣದ ಅಂದಾಜು 3,348 ಕೋಟಿ ರುಪಾಯಿ ಎಂದು ತಿಳಿಸಲಾಗಿದೆ. ಈ ಕುರಿತು ಬುಧವಾರ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಮಾಹಿತಿ ನೀಡಲಾಗಿದೆ. ಈ ವ್ಯವಹಾರಗಳು ಆರ್ಥಿಕ ವರ್ಷ 2006- 2007ರಿಂದ 2018- 2019ರ ಮಧ್ಯೆ ನಡೆದಿವೆ ಎಂದು ಟ್ರಾನ್ಸಾಕ್ಷನ್ ಆಡಿಟರ್ ವರದಿಯಲ್ಲಿ ತಿಳಿಸಲಾಗಿದೆ.
87 ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಅರ್ಜಿ
ಈ ವರದಿಯನ್ನು ಆಧರಿಸಿ, ಕಪಿಲ್ ವಾಧ್ವಾನ್ ಹಾಗೂ ಧೀರಜ್ ವಾಧ್ವಾನ್ ಸೆರಿದಂತೆ 87 ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಅರ್ಜಿ ಹಾಕಲಾಗಿದೆ. ಕಳೆದ ವರ್ಷ ಡಿಎಚ್ ಎಫ್ ಎಲ್ ನ ದಿವಾಳಿ ಕಲಾಪಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳಿಸಿತ್ತು. ತೀರುವಳಿಗಾಗಿ ಎನ್ ಸಿಎಲ್ ಟಿಗೆ ಕಳಿಸಿದ ಮೊದಲ ಹಣಕಾಸು ಸೇವಾ ಸಂಸ್ಥೆ ಡಿಎಚ್ ಎಫ್ ಎಲ್ ಆಯಿತು.
83,873 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ
ಜುಲೈ 2019ರ ಹೊತ್ತಿಗೆ ಬ್ಯಾಂಕ್ ಗಳು, ನ್ಯಾಷನಲ್ ಹೌಸಿಂಗ್ ಬೋರ್ಡ್, ಮ್ಯೂಚುವಲ್ ಫಂಡ್ ಗಳು, ಬಾಂಡ್ ಹೋಲ್ಡರ್ ಗಳು/ರೀಟೇಲ್ ಬಾಂಡ್ ಹೋಲ್ಡರ್ ಗಳಿಗೆ ಡಿಎಚ್ ಎಫ್ ಎಲ್ ನಿಂದ 83,873 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ. ಅದರಲ್ಲಿ ಸೆಕ್ಯೂರ್ಡ್ ಸಾಲ ಮೊತ್ತ 74,054 ಕೋಟಿ ರುಪಾಯಿಯಾದರೆ, ಅನ್ ಸೆಕ್ಯೂರ್ಡ್ ಮೊತ್ತ 9,818 ಕೋಟಿ. ಹಲವು ಬ್ಯಾಂಕ್ ಗಳು ಡಿಎಚ್ ಎಫ್ ಎಲ್ ಖಾತೆಯನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಎಂದು ಘೋಷಿಸಿವೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications