ಡಿಸೆಂಬರ್ 2020ಕ್ಕೆ ಕೊನೆಗೊಂಡ ಅಂಕಿ-ಅಂಶಗಳ ಪ್ರಕಾರ ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳ ಪೈಕಿ ನರ್ಸಿಂಗ್ ಹಾಗೂ ಎಂಜಿನಿಯರಿಂಗ್ಗಾಗಿ ಪಡೆದ ಶಿಕ್ಷಣ ಸಾಲವೇ ಹೆಚ್ಚಿನ ಅನುತ್ಪಾದಕ ಸಾಲ (ಎನ್ಪಿಎ) ಆಗಿ ಉಳಿದಿದೆ ಎಂಬುದು ತಿಳಿದು ಬಂದಿದೆ.
ರಾಜ್ಯ ಮಟ್ಟದ ಬ್ಯಾಂಕರ್ಸ್ ಕಮಿಟೀಸ್ (SLBCs) ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಶಿಕ್ಷಣ ಸಾಲಗಳಲ್ಲಿ ಶೇಕಡಾ 9.7ರಷ್ಟು ಸಾಲವನ್ನು ತೀರಿಸಲಾಗಿಲ್ಲ. ಇದರಲ್ಲಿ ನರ್ಸಿಂಗ್ ಹಾಗೂ ಎಂಜಿನಿಯರಿಂಗ್ ವಿಭಾಗದಿಂದಲೇ ಹೆಚ್ಚಿದೆ.
ಅನುತ್ಪಾದಕ ಸಾಲ 8,263 ಕೋಟಿ ರೂಪಾಯಿ
ಡಿಸೆಂಬರ್ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ 23.3 ಲಕ್ಷ ಅಕೌಂಟ್ಗಳಿಂದ 84,965 ಕೋಟಿ ರೂಪಾಯಿ ಶಿಕ್ಷಣ ಸಾಲವನ್ನು ಪಡೆಯಲಾಗಿದೆ. ಇದರಲ್ಲಿ 3.5 ಲಕ್ಷ ಅಕೌಂಟ್ಗಳನ್ನೊಳಗೊಂಡ 8,263 ಕೋಟಿ ರೂಪಾಯಿ ಅನುತ್ಪಾದಕ ಸಾಲ(ಎನ್ಪಿಎ) ಆಗಿದೆ.
ಒಟ್ಟಾರೆ ಶಿಕ್ಷಣ ಸಾಲ 84,965 ಕೋಟಿ ರೂಪಾಯಿ
ಒಟ್ಟಾರೆ ಶಿಕ್ಷಣ ಸಾಲ (84,965 ಕೋ.) ಪಡೆದವರಲ್ಲಿ ಯಾವ ವಿದ್ಯಾರ್ಥಿಗಳು ಎಷ್ಟು ಸಾಲ ಪಡೆದಿದ್ದಾರೆ ಎಂಬ ಶೇಕಡಾವಾರು ಮಾಹಿತಿ ಈ ಕೆಳಗಿಳಿದಿದೆ
ಮೆಡಿಕಲ್ ವಿದ್ಯಾರ್ಥಿಗಳು 10,147 ಕೋಟಿ ರೂಪಾಯಿ (11.9%)
ಎಂಜಿನಿಯರಿಂಗ್ ವಿದ್ಯಾರ್ಥಿಗಳು 33,316 ಕೋಟಿ ರೂಪಾಯಿ (39.2%)
ನರ್ಸಿಂಗ್ 3,675 ಕೋಟಿ ರೂಪಾಯಿ (4.3%)
ಎಂಬಿಎ 9,541 ಕೋಟಿ ರೂಪಾಯಿ (11.2%)
ಇತರೆ 28,286 ಕೋಟಿ ರೂಪಾಯಿ (33.2%)
ಯಾವ ಶಿಕ್ಷಣ ವಿಭಾಗದಲ್ಲಿ ಹೆಚ್ಚಿದೆ ಅನುತ್ಪಾದಕ ಸಾಲ?
ಬಾಕಿ ಇರುವ ಶಿಕ್ಷಣ ಸಾಲದ ಮೊತ್ತದಲ್ಲಿ ನರ್ಸಿಂಗ್ ವಿಭಾಗವೇ ಅಗ್ರಸ್ಥಾನದಲ್ಲಿದೆ. 8,263 ಕೋಟಿ ರೂಪಾಯಿ ಅನುತ್ಪಾದಕ ಸಾಲದಲ್ಲಿ ಯಾವ ವಿಭಾಗವು ಎಷ್ಟು ಸಾಲ ಹೊಂದಿದೆ ಎಂಬ ಮಾಹಿತಿ ಈ ಕೆಳಗಿದೆ.
ನರ್ಸಿಂಗ್ 14.1%
ಎಂಜಿನಿಯರಿಂಗ್ 12.1%
ಎಂಬಿಎ 7.1%
ಮೆಡಿಕಲ್ 6.2%
ಇತರೆ 8.4%
ಒಟ್ಟು 9.7%
ಅನುತ್ಪಾದಕ ಸಾಲಗಳಲ್ಲಿ ಶಿಕ್ಷಣದ ಪಾತ್ರ
ಕೃಷಿ ಮತ್ತು ಕೈಗಾರಿಕೆಯನ್ನು ಹೊರತುಪಡಿಸಿದರೆ ಅನುತ್ಪಾದಕ ಸಾಲಗಳಲ್ಲಿ ಶಿಕ್ಷಣ ಸಾಲವು ಪ್ರಮುಖ ಪಾಲನ್ನು ಹೊಂದಿದೆ. 2018, 2019, 2020ರ ಹಣಕಾಸು ವರ್ಷದಲ್ಲಿ ಕೈಗಾರಿಕಾ ವಲಯದ ಬಾಕಿ ಉಳಿಸಿಕೊಂಡ ಸಾಲವು ಕ್ರಮವಾಗಿ 21%, 16,7%, 13.6% ನಷ್ಟಿದೆ. ಇನ್ನು ಇದೇ ಹಣಕಾಸು ವರ್ಷಗಳಲ್ಲಿ ಕೃಷಿ 7.8%, 8.9%, 10.3% ಆಗಿದೆ.
ಈ ಎರಡು ಪ್ರಮುಖ ವಲಯಗಳ ನಂತರದಲ್ಲಿ ಶಿಕ್ಷಣ ಕ್ಷೇತ್ರವು 8.1%, 8.3%, 7.6% ನಷ್ಟಿದೆ. ಹೌಸಿಂಗ್ ಮತ್ತು ಆಟೊಮೊಬೈಲ್ ಕ್ಷೇತ್ರವು 2% ಗಿಂತ ಕಡಿಮೆಯಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications