ಬೆಂಗಳೂರು: ಕೊರೊನಾವೈರಸ್ ಲಾಕ್ಡೌನ್ ಪರಿಣಾಮ ಇ-ಕಾಮರ್ಸ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ಮೂರು ತಿಂಗಳಿನಿಂದ ಇ ಕಾಮರ್ಸ್ ಕಂಪನಿಗಳು ಬಹುತೇಕ ವ್ಯವಹಾರವನ್ನು ಸ್ಥಗೀತಗೊಳಿಸಿ, ಕೇವಲ ಅತ್ಯಾವಶ್ಯಕ ವಸ್ತುಗಳ ಮಾರಾಟ ಮಾತ್ರ ಮಾಡುತ್ತಿದ್ದವು.
ಈಗ ಇ-ಕಾಮರ್ಸ್ ಸಂಸ್ಥೆಗಳು ಸ್ಥಳೀಯ ಮಾರಾಟಗಾರರನ್ನು ಒಳಗೊಂಡಂತೆ, ಎಂಎಸ್ಎಂಇಗಳನ್ನು ಜೊತೆಯಾಗಿಸಿಕೊಳ್ಳುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯಾಗಿ ಇ ಕಾಮರ್ಸ್ ಕಂಪನಿಗಳು ವ್ಯವಹಾರ ಪುನರಾರಂಭಿಸಿದ ಕೆಲವೇ ವಾರಗಳ ನಂತರ, ಭಾರತದ ದೊಡ್ಡ ಇ-ಕಾಮರ್ಸ್ ಸ್ಟೋರ್ ಫ್ಲಿಪ್ಕಾರ್ಟ್ ಗೆ ಶೇ 90 ರಷ್ಟು ಮಾರಾಟಗಾರರು ಮರಳಿದ್ದಾರೆ.
ಏಪ್ರಿಲ್-ಜೂನ್ ಅವಧಿಯಲ್ಲಿ ಹೊಸ ಮಾರಾಟಗಾರರ ಸೈನ್ ಅಪ್ಗಳಲ್ಲಿ 125% ಹೆಚ್ಚಳವಾಗಿದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.
ನೀತಿಗಳಲ್ಲಿ ಬದಲಾವಣೆ ಮಾಡಿದೆ
ಪ್ಲಿಪ್ಕಾರ್ಟ್ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (MSMEs) ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಲಾಕ್ಡೌನ್ ನಂತರ ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿದೆ. ಫ್ಲಿಪ್ಕಾರ್ಟ್ನಲ್ಲಿ ಸೈನ್ ಅಪ್ ಮಾಡಲು ಮತ್ತು ಆನ್ಲೈನ್ನಲ್ಲಿ ತಮ್ಮ ವ್ಯವಹಾರವನ್ನು ತೆಗೆದುಕೊಳ್ಳಲು ಹೆಚ್ಚಿನ ಎಂಎಸ್ಎಂಇಗಳು ಮುಂದೆ ಬಂದಿವೆ.
ಹೆಚ್ಚಿನ ಎಂಎಸ್ಎಂಇಗಳು
ಫ್ಲಿಪ್ಕಾರ್ಟ್ನಲ್ಲಿ ಸೈನ್ ಅಪ್ ಮಾಡುವ ಮತ್ತು ಆನ್ಲೈನ್ನಲ್ಲಿ ತಮ್ಮ ವ್ಯವಹಾರವನ್ನು ತೆಗೆದುಕೊಳ್ಳುವ ಹೆಚ್ಚಿನ ಎಂಎಸ್ಎಂಇಗಳು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಸೇರಿವೆ.
ಅಗತ್ಯ ಉತ್ಪನ್ನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿವೆ
ಪ್ಲಿಪ್ಕಾರ್ಟ್ನಲ್ಲಿ ನೋಂದಾಯಿಸಿಕೊಂಡಿರುವ ಎಂಎಸ್ಎಂಇ ಮಾರಾಟಗಾರರು ಅಗತ್ಯ ಉತ್ಪನ್ನ ವಿಭಾಗಗಳಾದ ಆಹಾರ, ಪೋಷಣೆ ಮತ್ತು ಮಹಿಳೆಯರ ಬಟ್ಟೆ, ವೈಯಕ್ತಿಕ ಆರೈಕೆ ಮತ್ತು ಗೃಹ ಬಳಕೆಯ ವಸ್ತುಗಳು ಸೇರಿದಂತೆ ದೈನಂದಿನ ಅಗತ್ಯತೆಗಳ ಉತ್ಪನ್ನಗಳಲ್ಲಿ ವ್ಯವಹರಿಸುತ್ತಾರೆ.
ಕೋವಿಡ್ ಆರೋಗ್ಯ ವಿಮೆ
ಫ್ಲಿಪ್ಕಾರ್ಟ್ ತನ್ನಲ್ಲಿ ನೋಂದಾಯಿಸಿಕೊಂಡಿರುವ ಎಂಎಸ್ಎಂಇಗಳಿಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಕೋವಿಡ್ ಆರೋಗ್ಯ ವಿಮೆ ಜಾರಿಗೊಳಿಸಿದೆ. ಇದು ಮಾರಾಟಗಾರರು ಹಾಗೂ ಅವರ ಕುಟುಂಬವನ್ನು ಒಳಗೊಂಡಿದೆ. ಗ್ರೋಥ್ ಕ್ಯಾಪಿಟಲ್ ಕಾರ್ಯಕ್ರಮದ ಮೂಲಕ ಸಾಲಗಳನ್ನು ನೀಡುತ್ತಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications