ಕೊರೊನಾ ವೈರಸ್ ಹೊಡೆತಕ್ಕೆ ಹಲವು ಘಟಾನುಘಟಿ ಕಂಪೆನಿಗಳು ಉದ್ಯೋಗಿಗಳಿಗೆ ವೇತನ ಕಡಿತ ಮಾಡಿವೆ. ಹಲವು ಕಡೆ ಉದ್ಯೋಗ ಕಡಿತವಾಗಿದೆ. ಆದರೆ ಭಾರತದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವೆ ಒದಗಿಸುವ ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್ ಕಂಪೆನಿಯ 1,50,000 ಲಕ್ಷ ಸಿಬ್ಬಂದಿಗೆ ಯಾವುದೇ ವೇತನ ಕಡಿತ ಮಾಡಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಈಗಾಗಲೇ ಮಾತು ನೀಡಿರುವಂತೆ ಕಳೆದ ವರ್ಷದ ಬೋನಸ್ ಕೊಡುವುದಾಗಿ ತಿಳಿಸಿದೆ.
ಹೊಸಬರಿಗಾಗಿ ಈಗಾಗಲೇ ನೀಡಿರುವ ಹದಿನೈದು ಸಾವಿರ ಜಾಬ್ ಆಫರ್ ಗಳನ್ನು ಮಾನ್ಯ ಮಾಡಲಾಗುವುದು ಎಂದು ಎಚ್ ಸಿಎಲ್ ತಿಳಿಸಿದೆ. "ನಮಗೆ ಈ ವರೆಗೆ ಯಾವ ಪ್ರಾಜೆಕ್ಟ್ ಕ್ಯಾನ್ಸಲ್ ಆಗಿಲ್ಲ. ಆದರೆ ಹೊಸ ಪ್ರಾಜೆಕ್ಟ್ ಗಳು ಸ್ವಲ್ಪ ತಡವಾಗಿವೆ. ಆದರೆ ನಮಗೆ ಹಲವು ಅವಕಾಶಗಳು ಕಾಣುತ್ತಿದೆ. ನಮ್ಮ ಕಂಪೆನಿಯಲ್ಲಿ ಐದು ಸಾವಿರ ಹುದ್ದೆಗಳಿವೆ. ಕೆಲವು ಕಡೆ ನೇಮಕಾತಿ ಮಾಡುತ್ತಿದ್ದೇವೆ" ಎಂದು ತಿಳಿಸಲಾಗಿದೆ.
ಬೋನಸ್ ತಡೆ ಹಿಡಿಯುವ ಆಲೋಚನೆ ಇಲ್ಲ
ಎಚ್ ಸಿಎಲ್ ಕಂಪೆನಿಯ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆ ಜುಲೈ ತಿಂಗಳ ಸಮೀಪದಲ್ಲಿ ಇದ್ದು, ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಕೆಲಸ ಬಿಡುವವರ ಪ್ರಮಾಣದಲ್ಲಿ ಶೇಕಡಾ ಐವತ್ತರಷ್ಟು ಕಡಿಮೆ ಆಗಿದೆ ಎಂದು ತಿಳಿಸಲಾಗಿದೆ. ಇನ್ನು ಸಿಬ್ಬಂದಿಯ ವೇತನ ಕಡಿತ ಅಥವಾ ಬೋನಸ್ ತಡೆ ಹಿಡಿಯುವ ಆಲೋಚನೆ ಕಂಪೆನಿಗೆ ಇಲ್ಲ ಎನ್ನಲಾಗಿದೆ.
ಯಾವುದೇ ಬಿಕ್ಕಟ್ಟಿನಲ್ಲಿ ಸಿಬ್ಬಂದಿಯ ವೇತನ ಮುಟ್ಟಿಲ್ಲ
ಕಳೆದ ಹನ್ನೆರಡು ತಿಂಗಳಲ್ಲಿ ಸಿಬ್ಬಂದಿ ಏನು ಕೆಲಸ ಮಾಡಿದ್ದಾರೋ ಅದಕ್ಕೆ ಪ್ರತಿಯಾಗಿ ಬೋನಸ್ ಕೊಡ್ತೀವಿ. ನಮ್ಮವರ ಶ್ರಮಕ್ಕೆ ಪ್ರತಿಫಲ ನೀಡಲು ನಾವು ಬದ್ಧರಾಗಿದ್ದೇವೆ. ಈ ಹಿಂದೆ 2008ರ ಬಿಕ್ಕಟ್ಟಿನಲ್ಲಿ, ಅದಕ್ಕೂ ಮುಂಚಿನ ಯಾವುದೇ ಬಿಕ್ಕಟ್ಟಿನಲ್ಲಿ ಕಂಪೆನಿಯು ಸಿಬ್ಬಂದಿಯ ವೇತನ ಮುಟ್ಟಿಲ್ಲ. ಇನ್ನು ಮುಂದೆಯೂ ಅದೇ ಸಿದ್ಧಾಂತ ಪಾಲಿಸುತ್ತೇವೆ ಎಂದು ಕಂಪೆನಿ ಪರವಾಗಿ ತಿಳಿಸಲಾಗಿದೆ.
ಟಾಪ್ ಐದು ಕಂಪೆನಿಗಳಿಗಿಂತ ಬೆಳವಣಿಗೆ ವೇಗ ಹೆಚ್ಚು
ಟಾಪ್ ಐದು ಕಂಪೆನಿಗಳಿಗೆ ಹೋಲಿಸಿದರೆ ಕಳೆದ ಆರ್ಥಿಕ ವರ್ಷದಲ್ಲಿ ಎಚ್ ಸಿಎಲ್ ಟೆಕ್ನಾಲಜಿ 16.7 ಪರ್ಸೆಂಟ್ ನೊಂದಿಗೆ ಬೆಳವಣಿಗೆ ವೇಗ ಹೆಚ್ಚಾಗಿದೆ. ಆದಾಯ 9.94 ಬಿಲಿಯನ್ ಅಮೆರಿಕನ್ ಡಾಲರ್ ಇದೆ. ಕೊರೊನಾದ ಕಾರಣಕ್ಕೆ ಇರುವ ಅನಿಶ್ಚಿತತೆಯಿಂದ ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯ ಅಂದಾಜು ಮಾಡಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications