ನವದೆಹಲಿ: ಕೊರೊನಾವೈರಸ್ ಲಾಕ್ಡೌನ್ ಪರಿಣಾಮವಾಗಿ ಆಟೋ ಉದ್ಯಮದ ಪ್ರತಿಷ್ಠಿತ ಹೀರೋ ಮೊಟೊಕಾರ್ಪ್ ತನ್ನ 2019-20 ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಲಾಭದಲ್ಲಿ 15% ಕುಸಿತವನ್ನು ಕಂಡಿದೆ.
ಮಾರ್ಚ್ 31 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಹೀರೋ ಮೊಟೊಕಾರ್ಪ್ನ ನಿವ್ವಳ ಲಾಭ ₹ 620.71 ಕೋಟಿಗೆ ಇಳಿದಿದೆ ಎಂದು ಕಂಪನಿ ತಿಳಿಸಿದೆ.
ಮಾರ್ಚ್ನಲ್ಲಿ ಕೊರೊನಾವೈರಸ್ ಲಾಕ್ಡೌನ್ನಿಂದಾಗಿ ಕಂಪೆನಿಯ ರಿಟೇಲ್ ಮಾರಾಟದಲ್ಲಿ ಗಮನಾರ್ಹ ಕುಸಿತ ಕಂಡಿದೆ. ಚೀನಾದದಿಂದ ಸರಬರಾಜು ಆಗುತ್ತಿದ್ದ ಬಿಡಿ ಭಾಗಗಳು ಸರಬರಾಜು ಆಗದೇ ಇದ್ದಿದ್ದರಿಂದ ಏಪ್ರಿಲ್-ಮೇ ಅವಧಿಯಲ್ಲಿ ಹೀರೋ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.
21% ನಿವ್ವಳ ಮಾರಾಟ ಕುಸಿತ
2019-20 ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ನಿವ್ವಳ ಮಾರಾಟವು 21% ರಷ್ಟು ಕುಸಿದು, 6,238.39 ಕೋಟಿ ರುಪಾಯಿಗೆ ಇಳಿದಿದೆ. ಇದರ ಪರಿಣಾಮವಾಗಿ ನಾಲ್ಕನೇ ತ್ರೈಮಾಸಿಕದ ವಾಹನ ಮಾರಾಟದಲ್ಲಿ 25.7% ರಷ್ಟು ಇಳಿಕೆಯಾಗಿ 132,300 ಯುನಿಟ್ಗಳಿಗೆ ತಲುಪಿದೆ.
ಮಾರಾಟವಾಗದ ಬಿಎಸ್-6 ವಾಹನಗಳು
ಲಾಕ್ ಡೌನ್ ಸಮಯದಲ್ಲಿ ಬಿಎಸ್-6 ವಾಹನಗಳು ಮಾರಾಟವಾಗದ ಕಾರಣ ಹೀರೋ ಕಂಪೆನಿಯು ಗಮನಾರ್ಹ ನಷ್ಟವನ್ನು ಅನುಭವಿಸಿದೆ. ಹೀರೋ, ಗಮನಾರ್ಹವಾದ ಷೇರುಗಳನ್ನು ಹೊಂದಿರುವ ಷೇರುದಾರರಿಗೆ, ದಾಸ್ತಾನುಗಳನ್ನು ಖರೀದಿಸಿರುವ ತನ್ನ ಎಲ್ಲ ವಿತರಕರಿಗೆ ಪರಿಹಾರವನ್ನು ನೀಡಲು ನಿರ್ಧರಿಸಿದೆ.
ಉದ್ಯಮದ ಎಲ್ಲ ಘಟಕಗಳಿಂದ ಬೆಂಬಲ ಪಡೆಯುತ್ತೇವೆ
''ಕೋವಿಡ್ -19 ಸಾಂಕ್ರಾಮಿಕ ರೋಗವು ಆಟೋ ಉದ್ಯಮವನ್ನು ಹಿಂದಕ್ಕೆ ತಳ್ಳಿದೆ. ಹೀರೋ ಮೋಟಾರ್ಸ್ ಕೂಡ ಗಮನಾರ್ಹ ನಷ್ಟ ಅನುಭವಿಸಿದೆ. ಆದರೆ, ಇದರಿಂದ ವೇಗವಾಗಿ ಎದ್ದು ಬರಲು ಪ್ರಯತ್ನಿಸುತ್ತದೆ. ಉದ್ಯಮದ ಎಲ್ಲಾ ಭಾಗಗಳಿಂದ ಬೆಂಬಲವನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಹೀರೋ ಮೊಟೊಕಾರ್ಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್.
ಚಿಗುರಲು ಸಕಾರಾತ್ಮಕ ಅಂಶಗಳನ್ನು ಹೊಂದಿದ್ದೇವೆ
"2020 ನೇ ವರ್ಷ ಜಾಗತಿಕವಾಗಿ ಆಟೋ ಉದ್ಯಮಕ್ಕೆ ಸವಾಲಿನ ವರ್ಷವಾಗಿತ್ತು. ಹೀರೋ ಮೊಟೊಕಾರ್ಪ್ನಲ್ಲಿ ನಾವು ಕೆಲವು ಸಕಾರಾತ್ಮಕ ಅಂಶಗಳನ್ನು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಂದಿದ್ದೇವೆ. ನಾವು ನಿಧಾನಗತಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಅನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವ" ಎಂದು ಮುಂಜಾಲ್ ಹೇಳುತ್ತಾರೆ. (ಕೃಪೆ; ಲೈವ್ ಮಿಂಟ್).
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications