ದೇಶದಲ್ಲಿ ಇಂದು ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. 2023-2024ನೇ ಹಣಕಾಸು ವರ್ಷದ ಬಜೆಟ್ ಅನ್ನು ನಾಳೆ ಅಂದರೆ ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಜಾಗತಿಕವಾಗಿ ಬೆಳವಣಿಗೆ ದರವನ್ನು ಬಿಡುಗಡೆ ಮಾಡಿದೆ.
ಮಾರ್ಚ್ 31ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇಕಡ 6.8 ಆಗಿದ್ದು, ಯಾವುದೇ ಬದಲಾವಣೆಯನ್ನು ಐಎಂಎಫ್ ಮಾಡಿಲ್ಲ. ಆದರೆ ಮುಂದಿನ 2023-24ನೇ ಹಣಕಾಸು ವರ್ಷದಲ್ಲಿ ದರವು ಶೇಕಡ ಶೇ 6.1ಕ್ಕೆ ಇಳಿಯಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.
ಹಾಗೆಯೇ ಈ ಹಣಕಾಸು ವರ್ಷದಲ್ಲಿ (2022-23) ವಿಶ್ವ ಆರ್ಥಿಕ ಪ್ರಗತಿ ದರವು ಶೇ 2.9ಕ್ಕೆ ಕುಸಿಯಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಮೊದಲು ಪ್ರಸಕ್ತ ಹಣಕಾಸು ವರ್ಷದ ಪ್ರಗತಿ ದರವು ಶೇ 3.4 ಇರಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಅಂದಾಜು ಮಾಡಿತ್ತು. 2023-24ರಲ್ಲಿ ಜಾಗತಿಕ ಬೆಳವಣಿಗೆ ದರವು ಶೇ 3.1ಕ್ಕೆ ಏರುವ ನಿರೀಕ್ಷೆಯಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಎಂಎಫ್ನ ಸಂಶೋಧನಾ ವಿಭಾಗದ ಮುಖ್ಯ ಆರ್ಥಶಾಸ್ತ್ರಜ್ಞ ಪಿರೆ-ಆಲಿವೀರ್ ಗೌರಿಂಚಸ್, "ಭಾರತದಲ್ಲಿ ನಾವು ಪ್ರಗತಿ ವಿಚಾರದಲ್ಲಿ ಮಾಡಿದ ಅಂದಾಜಿನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರಸಕ್ತ ಹಣಕಾಸು ವರ್ಷಕ್ಕೆ ಪ್ರಗತಿ ದರವನ್ನು ಶೇ 6.8ರಲ್ಲಿಯೇ ಇರಲಿದೆ. ಆದರೆ ಮಾರ್ಚ್ ಬಳಿಕ ಕೊಂಚ ಬದಲಾವಣೆಯಾಗಬಹುದು," ಎಂದು ಹೇಳಿದ್ದಾರೆ.
2023ರಲ್ಲಿ ಜಗತ್ತಿನ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ
ವಿಶ್ವದ ಮೂರನೇ ಒಂದು ಭಾಗದಲ್ಲಿ 2023ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ. ಈ ವರ್ಷದ ಈ ಹಿಂದಿನ ವರ್ಷಕ್ಕಿಂತ ತೀರಾ ಕಷ್ಟಕರವಾದ ವರ್ಷವಾಗಲಿದೆ. ಯುಎಸ್, ಚೀನಾ ಹಾಗೂ ಇಯುವಿನಲ್ಲಿ ಅತೀ ಕೆಟ್ಟ ಸ್ಥಿತಿ ಉಂಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಈ ಹಿಂದೆ ಹೇಳಿದ್ದಾರೆ.
ಆರ್ಥಿಕ ಹಿಂಜರಿತವು ಭಾರೀ ಆರ್ಥಿಕ ದುಸ್ಥಿತಿಗೆ ದೂಡಲಿದೆ. ಅಮೆರಿಕಾ, ಐರೋಪ್ಯ ಒಕ್ಕೂಟ, ಚೀನಾದಲ್ಲಿ ಆರ್ಥಿಕತೆಯು ಮಂದಗತಿಯಲ್ಲಿ ಸಾಗಲಿದೆ. 2023 ಅತೀ ಕಠಿಣವಾದ ವರ್ಷವಾಗಲಿದೆ. ಆರ್ಥಿಕ ಹಿಂಜರಿತ ಯಾವ ದೇಶದಲ್ಲಿ ಉಂಟಾಗುವುದಿಲ್ಲವೋ ಆ ದೇಶದಲ್ಲಿಯೂ ಬೇರೆ ದೇಶಗಳಲ್ಲಿ ಉಂಟಾದ ಹಿಂಜರಿತದ ಪ್ರಭಾವ ಬೀರಲಿದೆ. ಮುಂದಿನ ಎರಡು ತಿಂಗಳು ಚೀನಾಕ್ಕೆ ಅತೀ ಕಷ್ಟವಾಗಲಿದೆ ಎಂದು ಕೂಡಾ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಮಾಹಿತಿ ನೀಡಿದ್ದಾರೆ.
ಜಾಗತಿಕವಾಗಿ ಬೆಳವಣಿಗೆಯು 2021ರಲ್ಲಿ ಶೇಕಡ 6ರಿಂದ 2022ರಲ್ಲಿ ಶೇಕಡ 3.2ಕ್ಕೆ ಮತ್ತು 2023ರಲ್ಲಿ ಶೇಕಡ 2.7ಕ್ಕೆ ಇಳಿಯಲಿದೆ. ಚೀನಾದಲ್ಲಿ ಶೂನ್ಯ ಕೋವಿಡ್ ನೀತಿ ವಿರುದ್ಧ ಸರ್ಕಾರದ ವಿರುದ್ಧ ಧ್ವನಿ ಕೇಳಿಬಂದ ಬಳಿಕ ಸರ್ಕಾರವು ಈ ನೀತಿಯನ್ನು ರದ್ದು ಮಾಡಿ, ಆರ್ಥಿಕತೆಯನ್ನು ತೆರೆದಿದೆ. ಆದರೆ ಇದು ಮುಂದಿನ ಎರಡು ತಿಂಗಳಲ್ಲಿ ಚೀನಾಕ್ಕೆ ಭಾರೀ ಕಷ್ಟಕರವಾದ ಸ್ಥಿತಿಗೆ ತಂದೊಡ್ಡಲಿದೆ ಎಂದು ಕೂಡಾ ಅಭಿಪ್ರಾಯಿಸಿದ್ದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications