ಭಾರತದಲ್ಲಿ 2011-12 ರಿಂದ 2017-18ರ ಅವಧಿಯಲ್ಲಿ ಗ್ರಾಮೀಣ ಬಡತನವು 4 ಪರ್ಸೆಂಟ್ ಏರಿಕೆಯಾಗಿದೆ. ನಗರ ಬಡತನವು ಶೇಕಡಾ 5 ಪರ್ಸೆಂಟ್ ಇಳಿದು 9 ಪರ್ಸೆಂಟ್ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ(NSO) ತಿಳಿಸಿದೆ.
ಭಾರತವು 1980ರ ದಶಕದಲ್ಲಿ ಬೆಳವಣಿಗೆಯ ಪಥಕ್ಕೆ ಸ್ಥಳಾಂತರಗೊಂಡ ಬಳಿಕ ಇಲ್ಲಿಯವರೆಗೂ ಬಡತನ ಪ್ರಮಾಣವು ಸ್ಥಿರವಾಗಿ ಕುಸಿದಿದೆ. 2011-12 ರಿಂದ 2017-18ರ ಅವಧಿಯಲ್ಲಿ 4 ಪರ್ಸೆಂಟ್ ಏರಿಕೆಯಾಗಿದ್ದು, ಇದೇ ಅವಧಿಯಲ್ಲಿ ನಗರ ಬಡತನವು 5 ಪರ್ಸೆಂಟ್ ಇಳಿದು 9 ಪರ್ಸೆಂಟ್ಗೆ ತಲುಪಿದೆ ಎಂದು NSO ತಿಳಿಸಿದೆ ಎಂದು 'ದಿ ಮಿಂಟ್' ವರದಿ ಮಾಡಿದೆ.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಬಡತನ ದರ
ಗ್ರಾಮೀಣ ಜನಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನಿಸದರೆ, ಅಂದಾಜು ಒಟ್ಟಾರೆ ಬಡತನವು 2017-18ರ ಅವಧಿಯಲ್ಲಿ ಸುಮಾರು 23 ಪರ್ಸೆಂಟ್ ಏರಿಕೆಯಾಗಿದೆ. ಕಳೆದ ಅರ್ಧ ದಶಕದಲ್ಲಿ 30 ದಶಲಕ್ಷ ಜನರು ಭಾರತದ ಅಧಿಕೃತ ಬಡತನ ರೇಖೆಗಿಂತ ಕೆಳಗಿಳಿದು ಬಡವರ ಶ್ರೇಣಿಗೆ ಸೇರಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.
ಬಿಹಾರ, ಜಾರ್ಖಂಡ್ನಲ್ಲಿ ಹೆಚ್ಚಿದ ಬಡತನ ದರ
ಕಳೆದ ಕೆಲವು ವರ್ಷಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ ರಾಜ್ಯಗಳಲ್ಲಿ ಗ್ರಾಮೀಣ ಬಡತನವು ಅತಿ ಹೆಚ್ಚು ಏರಿಕೆಯಾಗಿದೆ ಎಂದು NSO ಅಂಕಿ-ಅಂಶಗಳು ತಿಳಿಸಿವೆ.
ಬಿಹಾರವು 2011-12 ರಿಂದ 2017-18ರ ಅವಧಿಯಲ್ಲಿ ಬಡತನ ಪ್ರಮಾಣವು 17 ಪರ್ಸೆಂಟ್ ಏರಿಕೆಯಾಗಿ, 50.47 ಪರ್ಸೆಂಟ್ಗೆ ಏರಿದೆ. ಜಾರ್ಖಂಡ್ (8.6 ಪರ್ಸೆಂಟ್), ಒಡಿಶಾ (8.1 ಪರ್ಸೆಂಟ್), ಬಡತನದ ದರದಲ್ಲಿ ದೊಡ್ಡ ಏರಿಕೆ ಕಂಡ ಇತರೆ ರಾಜ್ಯಗಳಾಗಿವೆ.
ಬಡತನ ದರವು ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯ (ಶೇಕಡಾವಾರು) ಪಾಲನ್ನು ಸೂಚಿಸುತ್ತದೆ. ಜಾರ್ಖಂಡ್ ಮತ್ತು ಒಡಿಶಾ ಎರಡರಲ್ಲೂ 40 ಪರ್ಸೆಂಟ್ ಗಿಂತಲೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರದಲ್ಲೂ ಬಡತನ ದರ ಏರಿಕೆ
ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ಬಡತನವು ಇಳಿಕೆಯಾದರೆ, ಕರ್ನಾಟಕದಲ್ಲಿ ಇದೇ ಅವಧಿಯಲ್ಲಿ 2.3 ಪರ್ಸೆಂಟ್ ಏರಿಕೆಯಾಗಿದೆ. ಮಹಾರಾಷ್ಟ್ರವು (5 ಪರ್ಸೆಂಟ್), ಛತ್ತೀಸಘಡ (2.1 ಪರ್ಸೆಂಟ್), ರಾಜಸ್ಥಾನ (1.9 ಪರ್ಸೆಂಟ್) ಏರಿಕೆ ದಾಖಲಿಸಿದೆ.
ಪಶ್ಚಿಮ ಬಂಗಾಳ, ಗುಜರಾತ್ನಲ್ಲಿ ಬಡತನ ದರ ಇಳಿಕೆ
2011-12 ರಿಂದ 2017-18ರ ಅವಧಿಯಲ್ಲಿ ಪಶ್ಚಿಮ ಬಂಗಾಳ (6 ಪರ್ಸೆಂಟ್), ಗುಜರಾತ್ ( 5 ಪರ್ಸೆಂಟ್), ತಮಿಳುನಾಡು (5 ಪರ್ಸೆಂಟ್), ರಾಜ್ಯಗಳು ಬಡತನದ ದರದಲ್ಲಿ ಭಾರೀ ಇಳಿಕೆ ಕಂಡಂತಹ ರಾಜ್ಯಗಳಾಗಿವೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications