ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದೆನಿಸಿರುವ ಐಟಿಸಿ ತನ್ನ ವಾರ್ಷಿಕ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ ಸಂಸ್ಥೆಯ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಗೂ ಅಧಿಕ ಸಂಬಳ, ಭತ್ಯೆ ಲಭಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 2021-22ಕ್ಕೆ ಹೋಲಿಸಿದರೆ 1 ಕೋಟಿ ವಾರ್ಷಿಕ ಸಂಬಳ ಪಡೆದವರ ಪಟ್ಟಿ ಪ್ರಕಟವಾಗಿದೆ.
2020-21ರಲ್ಲಿ ಐಟಿಸಿ ಉದ್ಯೋಗಿಗಳ ಒಟ್ಟು ಸಂಖ್ಯೆಯು ತಿಂಗಳಿಗೆ 8.5 ಲಕ್ಷ ರೂಪಾಯಿ ಅಥವಾ ವರ್ಷಕ್ಕೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಬಳವನ್ನು 220ಗೂ ಅಧಿಕ ಮಂದಿ ಪಡೆದಿದ್ದಾರೆ. 153ಕ್ಕೂ ಅಧಿಕ ಮಂದಿ ಈ ಹಿಂದಿನ ವರ್ಷ ಪಡೆದಿದ್ದರು ಎಂದು ಐಟಿಸಿಯ ಇತ್ತೀಚಿನ ವಾರ್ಷಿಕ ವರದಿ ತಿಳಿಸಿದೆ.
"ಮಾರ್ಚ್ 31, 2022 ಕ್ಕೆ ಕೊನೆಗೊಂಡಂತೆ ನೀಡಿದ ವರದಿಯಲ್ಲಿರುವಂತೆ 220 ಉದ್ಯೋಗಿಗಳು ವರ್ಷವಿಡಿ ಉದ್ಯೋಗದಲ್ಲಿದ್ದರು ಮತ್ತು ಒಟ್ಟು ರೂ 102 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದರು ಅಥವಾ ವರ್ಷದ ಒಂದು ಭಾಗಕ್ಕೆ ಉದ್ಯೋಗದಲ್ಲಿದ್ದರು ಮತ್ತು ಆರ್ಥಿಕ ವರ್ಷದಲ್ಲಿ ತಿಂಗಳಿಗೆ ರೂ 8.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದರು. " ಎಂದು ತಿಳಿಸಲಾಗಿದೆ.

2022ರ ಆರ್ಥಿಕ ವರ್ಷದಲ್ಲಿ ಐಟಿಸಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ಪುರಿ ಅವರು ಪಡೆದ ಒಟ್ಟು ಸಂಭಾವನೆಯು 2.64 ಕೋಟಿ ರೂ.ಗಳ ಸಂಯೋಜಿತ(consolidated) ಸಂಬಳ, ರೂ. 49.63 ಲಕ್ಷಗಳ ಭತ್ಯೆಗಳು/ಇತರ ಪ್ರಯೋಜನಗಳು ಮತ್ತು 7.52 ಕೋಟಿ ರು ಪರ್ಫಾರ್ಮೆನ್ಸ್ ಬೋನಸ್ ಸೇರಿದಂತೆ 5.35% ಏರಿಕೆ ಕಂಡು12.59 ಕೋಟಿ ರು ಗಳಿಗೆ ಏರಿಕೆಯಾಗಿದೆ. ಪುರಿಯ ವೇತನವು ಎಲ್ಲಾ ಉದ್ಯೋಗಿಗಳ ಸಂಭಾವನೆ ಮತ್ತು ಸರಾಸರಿ ಸಂಭಾವನೆ ಅನುಪಾತದ 224:1 ಆಗಿದೆ ಎಂದು ವಾರ್ಷಿಕ ವರದಿ ಹೇಳಿದೆ.
FY21 ರಲ್ಲಿ, ಪುರಿಯ ಒಟ್ಟು ಸಂಭಾವನೆ 11.95 ಕೋಟಿ ರೂ ಇತ್ತು. ಐಟಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿ ಸುಮಂತ್ ಮತ್ತು ಆರ್ ಟಂಡನ್ ಅವರು 2022ರ ಆರ್ಥಿಕ ವರ್ಷದಲ್ಲಿ 5.76 ಕೋಟಿ ರೂ ಮತ್ತು 5.60 ಕೋಟಿ ರೂ ಒಟ್ಟು ಸಂಭಾವನೆ ಪಡೆದರು.
ಮಾರ್ಚ್ 31, 2022 ರ ಹೊತ್ತಿಗೆ ಒಟ್ಟು ಐಟಿಸಿ ಉದ್ಯೋಗಿಗಳ ಸಂಖ್ಯೆ 23,829 ರಷ್ಟಿದೆ, ಇದು ಕಳೆದ ಆರ್ಥಿಕ ವರ್ಷಕ್ಕಿಂತ 8.4 ಶೇಕಡಾ ಕಡಿಮೆಯಾಗಿದೆ. ಇದರಲ್ಲಿ 21,568 ಪುರುಷ ಮತ್ತು 2,261 ಮಹಿಳಾ ಉದ್ಯೋಗಿಗಳು ಸೇರಿದ್ದಾರೆ. ಇದಲ್ಲದೆ, ಇದು ಕಾಯಂ ವರ್ಗವನ್ನು ಹೊರತುಪಡಿಸಿ 25,513 ಉದ್ಯೋಗಿಗಳನ್ನು ಹೊಂದಿತ್ತು.
ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ (ಕೆಎಂಪಿ) ಸರಾಸರಿ ಸಂಭಾವನೆಯು ಶೇಕಡಾ 8 ರಷ್ಟು ಹೆಚ್ಚಾಗಿದೆ. ಮಾರ್ಚ್ 31, 2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ITC ಯ ಒಟ್ಟು ಆದಾಯವು ಒಂದು ವರ್ಷದ ಹಿಂದಿನ 48,151.24 ಕೋಟಿ ರೂ.ಗಳಿಂದ 59,101 ಕೋಟಿ ರೂಗೆ ಏರಿಕೆ ಕಂಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications