ಅಮೆಜಾನ್.ಕಾಮ್ ಮಂಗಳವಾರ ನೀಡಿರುವ ಮಾಹಿತಿ ಪ್ರಕಾರ, ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದು, ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ. ಕಂಪೆನಿಯು ಸತತವಾಗಿ ದಾಖಲೆಯ ಲಾಭವನ್ನು ವರದಿ ಮಾಡಿದ್ದು, ಮೂರನೇ ತ್ರೈಮಾಸಿಕದಲ್ಲಿ ಮಾರಾಟವು ಇದೇ ಮೊದಲ ಬಾರಿಗೆ $ 100 ಬಿಲಿಯನ್ ದಾಟಿದೆ.
ಸದ್ಯಕ್ಕೆ ಕ್ಲೌಡ್ ಕಂಪ್ಯೂಟಿಂಗ್ ಮುಖ್ಯಸ್ಥ ಆಗಿರುವ ಆಂಡಿ ಜಸ್ಸಿ ಅಮೆಜಾನ್ ಗೆ ಮುಂದಿನ ಸಿಇಒ ಆಗಲಿದ್ದಾರೆ. ರಜಾ ದಿನದ ಖರೀದಿಗೆ ಗ್ರಾಹಕರು ಆನ್ ಲೈನ್ ನೆಡೆಗೆ ಮುಖ ಮಾಡಿದ್ದರಿಂದ ನಿವ್ವಳ ಮಾರಾಟವು $ 125.56 ಬಿಲಿಯನ್ ಆಗಿದೆ. ಫಲಿತಾಂಶ ಪ್ರಕಟಣೆಗೆ ಮುನ್ನ ತಜ್ಞರು $ 119.7 ಬಿಲಿಯನ್ ಲಾಭದ ಅಂದಾಜು ಮಾಡಿದ್ದರು. ಆ ನಿರೀಕ್ಷೆಗೂ ಮೀರಿ ಅಮೆಜಾನ್ ಲಾಭ ದಾಖಲಿಸಿದೆ.
ಇಪ್ಪತ್ತೇಳು ವರ್ಷದ ಹಿಂದೆ ಅಮೆಜಾನ್ ಅನ್ನು ಇಂಟರ್ ನೆಟ್ ಪುಸ್ತಕ ಮಾರಾಟ ಕಂಪೆನಿಯಾಗಿ ಆರಂಭಿಸಿದವರು ಜೆಫ್ ಬೆಜೋಸ್. ಕಾರ್ಯ ನಿರ್ವಾಹಕ ಹುದ್ದೆಯಲ್ಲಿ ಅಮೆಜಾನ್ ನ ಪ್ರಮುಖ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಸಮಯ ಮತ್ತು ಸಾಮರ್ಥ್ಯದೊಂದಿಗೆ ಡೇ 1 ಫಂಡ್, ಬೆಜೋಸ್ ಅರ್ಥ್ ಫಂಡ್, ಬ್ಲ್ಯೂ ಆರಿಜಿನ್, ದ ವಾಷಿಂಗ್ಟನ್ ಪೋಸ್ಟ್ ಮತ್ತು ಇತರ ಆಸಕ್ತಿಗಳ ಕಡೆಗೂ ಗಮನ ಕೇಂದ್ರೀಕರಿಸಬೇಕು. ಇದು ನಿವೃತ್ತಿಯಲ್ಲ ಎಂದು ಬೆಜೋಸ್ ಹೇಳಿದ್ದಾರೆ.

ಜಸ್ಸಿ ಅಮೆಜಾನ್ ಗೆ ಸೇರ್ಪಡೆಯಾಗಿದ್ದು 1997ರಲ್ಲಿ. ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಎಂಬಿಎ ಮಾಡಿದ್ದಾರೆ. ಅಮೆಜಾನ್ ವೆಬ್ ಸರ್ವೀಸಸ್ (AWS) ಆರಂಭಿಸಿದವರೇ ಅವರು. ಆ ನಂತರ ಕ್ಲೌಡ್ ಪ್ಲಾಟ್ ಫಾರ್ಮ್ ಆಗಿ ಬೆಳೆಸಿ, ಹತ್ತಾರು ಲಕ್ಷ ಜನ ಬಳಸುವಂತೆ ಮಾಡಿದರು.
ಅಮೆಜಾನ್ ಭವಿಷ್ಯದಲ್ಲಿ ವೆಬ್ ಸರ್ವೀಸಸ್ ಪಾತ್ರ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಜಸ್ಸಿ ಬಡ್ತಿಯೇ ಉದಾಹರಣೆ ಎಂದು ಕಂಪೆನಿಯ ಸಿಟಿಒ ಟಾಮ್ ಜಾನ್ಸನ್ ತಿಳಿಸಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications