ರಿಲಯನ್ಸ್ ಜಿಯೋ 5ಜಿ ನೆಟ್ವರ್ಕ್ಗಾಗಿ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ದೀಪಾವಳಿಯೊಳಗೆ ಪ್ರಮುಖ ನಾಲ್ಕು ಮೆಟ್ರೋ ನಗರಗಳಲ್ಲಿ 5ಜಿ ನೆಟ್ವರ್ಕ್ ಆರಂಭವಾಗಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
45ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, "ಎಲ್ಲಾ ನಗರಗಳಲ್ಲಿ, ತಾಲೂಕುಗಳಲ್ಲಿ 2023ರ ಡಿಸೆಂಬರ್ ಒಳಗಾಗಿ ಜಿಯೋ 5ಜಿ ಸೇವೆಯನ್ನು ಆರಂಭ ಮಾಡಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 22ರಿಂದ ಆರಂಭವಾಗುವ ದೀಪಾವಳಿಯ ಒಳಗೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ 5ಜಿ ಸೇವೆ ಆರಂಭವಾಗಲಿದೆ," ಎಂದು ಮಾಹಿತಿ ನೀಡಿದ್ದಾರೆ.
ಗುರುಗ್ರಾಮ, ಬೆಂಗಳೂರು, ಚಂಡೀಗಢ, ಜಮ್ನಗರ, ಅಹಮದಾಬಾದ್, ಹೈದಾರಾಬಾದ್, ಲಕ್ನೋ, ಪುಣೆ, ಗಾಂಧಿನಗರದಲ್ಲಿಯೂ ಜಿಯೋ 5ಜಿ ನೆಟ್ವರ್ಕ್ ಅನ್ನು ಆರಂಭ ಮಾಡುವ ಸಾಧ್ಯತೆ ಇದೆ. ಇತ್ತೀಚೆಗೆ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು ಅದರಲ್ಲಿ ಜಿಯೋ ಮೇಲುಗೈ ಸಾಧಿಸಿದೆ.

ಮಾಧ್ಯಮ, ಮನರಂಜನ ಉದ್ಯಮಕ್ಕೆ ಅಂಬಾನಿ
ಮಾಧ್ಯಮ ಉದ್ಯಮವು ಹೆಚ್ಚು ಪ್ರಗತಿಯನ್ನು ಸಾಧಿಸಿದೆ. ಸಬ್ಸ್ಕ್ರಿಪ್ಶನ್, ಜಾಹೀರಾತು ಆದಾಯ ಅಧಿಕವಾಗಿದೆ. ಇನ್ನು ಕ್ರೀಡಾ ಕ್ಷೇತ್ರಕ್ಕೂ ಹೆಜ್ಜೆ ಇಡಲಾಗುವುದು. ಐದು ವರ್ಷಗಳ ಕಾಲ ಐಪಿಎಲ್ನ ಡಿಜಿಟಲ್ ಹಕ್ಕನ್ನು ಪಡೆಯಲಾಗುವುದು ಎಂದು ಕೂಡಾ ಅಂಬಾನಿ ಹೇಳಿದ್ದಾರೆ.
ಇನ್ನು ರಿಲಯನ್ಸ್ನ ರಿಟೇಲ್ ವಹಿವಾಟು ಉತ್ತಮವಾಗಿದೆ. ಸುಮಾರು 2 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ. ಏಷ್ಯಾದ ಪ್ರಮುಖ ಹತ್ತು ರಿಟೇಲರ್ಗಳಲ್ಲಿ ಜಿಯೋ ಒಂದಾಗಿದೆ ಎಂದು ಇಶಾ ಅಂಬಾನಿ ತಿಳಿಸಿದ್ದಾರೆ.
ಜಿಯೋ 5ಜಿ ಆರಂಭ
ಜಿಯೋ 5ಜಿ ಅನ್ನು ಆರಂಭ ಮಾಡುವುದಕ್ಕೆ ಇನ್ನೂ ಕೂಡಾ ತಿಂಗಳುಗಳ ಕಾಲವಿದೆ. ಜಿಯೋ 5ಜಿ ವಿಶ್ವದ ಅತೀ ದೊಡ್ಡ ನೆಟ್ವರ್ಕ್ ಆಗಿದೆ. ಅತೀ ಪ್ರಗತಿ ಹೊಂದಿರುವ 5ಜಿ ನೆಟ್ವರ್ಕ್ ಆಗಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ 5ಜಿ ಆರಂಭವಾಗಲಿದೆ.
ದೇಶದಲ್ಲಿ ಶೀಘ್ರದಲ್ಲೇ 5ಜಿ ಮೊಬೈಲ್ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಆಗಸ್ಟ್ 15ರಂದು ಘೋಷಣೆ ಮಾಡಿದ್ದಾರೆ. ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನವು ಪ್ರತಿ ವಲಯದಲ್ಲೂ ಸುಧಾರಣೆಯನ್ನು ತರಲು ಇದು ಸಕಾಲ. 5ಜಿ ಸೆಮಿಕಂಡಕ್ಟರ್ ಮಾನ್ಯುಫಾಕ್ಷರಿಂಗ್ & ಆಪ್ಟಿಕಲ್ ಫೈಬರ್ ಕೇಬರ್ (ಒಎಫ್ಸಿ)ಗಳೊಂದಿಗೆ ನಾವು ಭಾರತದ ಹಳ್ಳಿ ಹಳ್ಳಿಗಳಲ್ಲಿ ಕ್ರಾಂತಿಯನ್ನು ತರುತ್ತೇವೆ ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications