ಕೋವಿಡ್ 19 ವಿರುದ್ಧದ ಹೋರಾಟದ ಖರ್ಚು ಮತ್ತು ಅನೇಕ ಲಾಕ್ಡೌನ್ ವಿಸ್ತರಣೆಗಳಿಂದಾಗಿ ರಾಜ್ಯಗಳ ಬೊಕ್ಕಸಕ್ಕೆ ಕಡಿಮೆ ತೆರಿಗೆ ಸಂಗ್ರಹವಾಗುತ್ತಿರುವುದು ಎಲ್ಲರಿಗೂ ತಿಳಿದಿರುವಂತದ್ದು. ಇದರಿಂದಾಗಿ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯಗಳ ಒಟ್ಟು ಮಾರುಕಟ್ಟೆ ಸಾಲಗಳು 1.7 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಇಕ್ರಾ ತನ್ನ ವರದಿಯಲ್ಲಿ ತಿಳಿಸಿದೆ.
ವಿವಿಧ ಮೂಲಗಳಿಂದ ರಾಜ್ಯ ಸರ್ಕಾರಗಳ ತೆರಿಗೆ ಸಂಗ್ರಹಣೆ ಮತ್ತು ಕೋವಿಡ್ -19 ಗೆ ಸಂಬಂಧಿಸಿದ ಖರ್ಚು ಮತ್ತು ಇನ್ನೊಂದು ಖರ್ಚಿನ ನಡುವಿನ ಅಂತರವನ್ನು ವಿಸ್ತರಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಎಲ್ಲಾ ರಾಜ್ಯ ಸರ್ಕಾರಗಳ ಸಂಯೋಜಿತ ಎಸ್ಡಿಎಲ್ ವಿತರಣೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 1.7 ಟ್ರಿಲಿಯನ್ ರೂ.ಗಿಂತಲೂ ಹೆಚ್ಚಾಗಿದೆ. ವರದಿಯ ಪ್ರಕಾರ, ಸಾಲಗಳಲ್ಲಿನ ಈ ತೀಕ್ಷ್ಣವಾದ ಏರಿಕೆ ರಾಜ್ಯ ಸರ್ಕಾರಗಳ ಆದಾಯಕ್ಕೆ ಆಘಾತವನ್ನು ನೀಡಿದೆ.
ಮತ್ತೆ ಲಾಕ್ಡೌನ್ಗಳತ್ತ ಹೊರಳುತ್ತಿವೆ
2020 ರ ಜೂನ್ 8 ರಿಂದ ದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಹಂತಹಂತವಾಗಿ ಪುನರಾರಂಭಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ ಮತ್ತು ಲಭ್ಯವಿರುವ ಕೆಲವು ಸೂಚಕಗಳು ಕ್ರಮೇಣ ಚೇತರಿಕೆ ಸೂಚಿಸುತ್ತಿದ್ದರೆ, ಕೆಲವು ರಾಜ್ಯಗಳು ಹೊಸ ಸೋಂಕುಗಳ ಏರಿಕೆಯ ನಂತರ ಮತ್ತೆ ಲಾಕ್ಡೌನ್ಗಳತ್ತ ಹೊರಳುತ್ತಿವೆ. ಇದರಿಂದ ತೆರಿಗೆ ಸಂಗ್ರಹ ಗಣನೀಯ ಕುಸಿತ ಕಾಣುತ್ತಿದೆ ಎಂದು ರೇಟಿಂಗ್ ಏಜೆನ್ಸಿ ತಿಳಿಸಿದೆ.
ಮಾರುಕಟ್ಟೆ ಸಾಲಗಳ ಸೂಚಕ
ಜೂನ್ 30 ರಂದು, ಆರ್ಬಿಐ ಹಣಕಾಸಿನ ಎರಡನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರಗಳು ಮಾರುಕಟ್ಟೆ ಸಾಲಗಳ ಸೂಚಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿತು. ಇದು ಆ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮಾರುಕಟ್ಟೆ ಸಾಲದ ಹೆಚ್ಚಳವನ್ನು 1.8 ಲಕ್ಷ ಕೋಟಿ ರೂ.ಗೆ ತಲುಪಿಸುತ್ತದೆ ಎಂದು ಅದು ಹೇಳಿದೆ. ನಿಜವಾದ ಸಂಯೋಜಿತ ಸಾಲವು 2019-20ರ ಎರಡನೇ ತ್ರೈಮಾಸಿಕದಲ್ಲಿ 1.4 ಟ್ರಿಲಿಯನ್ ರೂ ಎಂದಿದೆ.
ತಮಿಳುನಾಡು ಅತಿ ದೊಡ್ಡ ಮೊತ್ತ
ಇದರಲ್ಲಿ ಅತಿದೊಡ್ಡ ಮೊತ್ತವನ್ನು ತಮಿಳುನಾಡು (28,000 ಕೋಟಿ ರೂ.), ಮಹಾರಾಷ್ಟ್ರ (25,500 ಕೋಟಿ ರೂ.), ರಾಜಸ್ಥಾನ (16,000 ಕೋಟಿ ರೂ.), ಆಂಧ್ರಪ್ರದೇಶ (15,000 ಕೋಟಿ ರೂ.), ತೆಲಂಗಾಣ (12,500 ಕೋಟಿ ರೂ.), ಕೇರಳ (12,400 ಕೋಟಿ ರೂ.), ಬಂಗಾಳ (10,000 ಕೋಟಿ ರೂ.), ಹರಿಯಾಣ (9,000 ಕೋಟಿ ರೂ.), ಗುಜರಾತ್ (8,600 ಕೋಟಿ ರೂ.) ಮತ್ತು ಕರ್ನಾಟಕ (7,000 ಕೋಟಿ ರೂ.) ಹೊಂದಿವೆ.
ಹಿಂದಿನ ವರ್ಷದ ಅವಧಿಯಲ್ಲಿ 2.3 ಟ್ರಿಲಿಯನ್ ಇತ್ತು
ಇಕ್ರಾದ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಅವರ ಪ್ರಕಾರ, ರಾಜ್ಯಗಳ ಒಟ್ಟು ಮಾರುಕಟ್ಟೆ ಸಾಲಗಳು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 53.3 ರಷ್ಟು ಏರಿಕೆಯಾಗಿ 3.5 ಟ್ರಿಲಿಯನ್ ರೂ.ಗೆ ಏರಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 2.3 ಟ್ರಿಲಿಯನ್ ಇತ್ತು. ಸಾಲಗಳಲ್ಲಿನ ತೀವ್ರ ಏರಿಕೆ ಲಾಕ್ಡೌನ್ ಕಾರಣದಿಂದಾಗಿ ರಾಜ್ಯಗಳ ಆದಾಯದ ಆಘಾತಗಳನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications