ನೀವು ಈ ವಿಚಾರವನ್ನು ಗಮನಿಸಿದ್ದಿರೋ ಇಲ್ವೋ ತಿಳಿದಿಲ್ಲ. ಆದರೆ ಪ್ರಸಕ್ತ ಹಣಕಾಸು ವರ್ಷದ ಜುಲೈ-ಜನವರಿ ಅವಧಿಯಲ್ಲಿ ಸಬ್ಸಿಡಿ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ಗೆ 10 ಪರ್ಸೆಂಟ್ ಏರಿಕೆಯಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿನ ಬೆಳವಣಿಗೆಗಳೊಂದಿಗೆ, 2022ರ ಹಣಕಾಸು ವರ್ಷದ ಆರಂಭದಲ್ಲಿ ತೈಲ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರ ಎದುರು ನೋಡುತ್ತಿದೆ. ಈ ಕ್ರಮವು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದ್ದು, ಅಡುಗೆ ಅನಿಲದ ಬೆಲೆ ಮುಂದಿನ ಒಂದು ವರ್ಷದಲ್ಲಿ ಪ್ರತಿ ಸಿಲಿಂಡರ್ಗೆ 100 ರಿಂದ 150 ರುಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ತೈಲ ಬೆಲೆ ಇಳಿಕೆಯ ಪರಿಣಾಮ
ಇತ್ತೀಚಿನ ಕೆಲ ವಾರಗಳಲ್ಲಿ ತೈಲ ಬೆಲೆಯು ಇಳಿಮುಖದತ್ತ ಸಾಗಿದೆ. ಕಡಿಮೆ ತೈಲ ಬೆಲೆಗಳ ಲಾಭವನ್ನು ಪಡೆದುಕೊಂಡು, ಸಬ್ಸಿಡಿ ಪಡೆದ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಕ್ರಮೇಣ ಹೆಚ್ಚಿಸಲು ಸರ್ಕಾರವು, ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಅನುಮತಿ ನೀಡಬಹುದು. ಇದರಿಂದಾಗಿ ಅರ್ಹ ಗ್ರಾಹಕರಿಗೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಪಾವತಿಸುವ ಸಂಪೂರ್ಣ ಸಬ್ಸಿಡಿಯನ್ನು ಒಂದು ವರ್ಷದಲ್ಲಿ ತೆಗೆದುಹಾಕಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಜುಲೈ 2019 ರಿಂದ ಜನವರಿ 2020 ರ ಅವಧಿಯಲ್ಲಿ 63 ರುಪಾಯಿ ಏರಿಕೆ
ಈಗಾಗಲೇ ಜುಲೈ 2019 ರಿಂದ ಜನವರಿ 2020 ರ ಅವಧಿಯಲ್ಲಿ ಒಎಂಸಿಗಳು ಸಬ್ಸಿಡಿ ಪಡೆದ ಎಲ್ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 63 ರುಪಾಯಿ ಹೆಚ್ಚಿಸಿವೆ. ಪ್ರಸ್ತುತ ಜಾಗತಿಕ ತೈಲ ಬೆಲೆಗಳಲ್ಲಿ, ತೈಲ ಕಂಪನಿಗಳು ಸಬ್ಸಿಡಿ ಪಡೆದ LPG ಸಿಲಿಂಡರ್ (14.2 ಕೆಜಿ) ದರವನ್ನು ತಿಂಗಳಿಗೆ ಕೇವಲ 10 ರುಪಾಯಿನಷ್ಟು ಹೆಚ್ಚಿಸಿದರೆ, 15 ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡುವ ಅವಶ್ಯಕತೆಯೇ ಇರುವುದಿಲ್ಲ.
ತೈಲ ಬೆಲೆ ಮತ್ತಷ್ಟು ಇಳಿದರೆ ಸಬ್ಸಿಡಿ ಕಡಿತ?
ಸಬ್ಸಿಡಿ ಪಡೆದ ಎಲ್ಪಿಜಿ ಸಿಲಿಂಡರ್ನ (14.2 ಕೆ.ಜಿ) ಬೆಲೆ ಪ್ರಸ್ತುತ ಸುಮಾರು 557 ರುಪಾಯಿನಷ್ಟಿದೆ. ಸರ್ಕಾರವು 157 ರುಪಾಯಿ ಸಬ್ಸಿಡಿಯನ್ನು ಅರ್ಹ ಗ್ರಾಹಕರ ಖಾತೆಗೆ ನೇರವಾಗಿ ನೀಡುತ್ತದೆ. 2021ರ ಹಣಕಾಸು ವರ್ಷದಲ್ಲಿ ತೈಲ ಬೆಲೆಗಳು ಹೆಚ್ಚಿನ ಭಾಗಗಳಲ್ಲಿ ಬ್ಯಾರೆಲ್ಗೆ 60 ಡಾಲರ್ಗಿಂತ ಕ್ಕಿಂತ ಕಡಿಮೆಗೆ ಇಳಿದರೆ ಸಬ್ಸಿಡಿ ಮಟ್ಟ ಮತ್ತಷ್ಟು ಕುಸಿಯಬಹುದು.
ಸಬ್ಸಿಡಿ ಕಡಿಮೆಯಾದಂತೆ ಒಎಂಸಿಗಳ ಕಾರ್ಯನಿರತ ಬಂಡವಾಳ ಹೆಚ್ಚಳ
2019ರ ಹಣಕಾಸು ವರ್ಷದ ಕೊನೆಯಲ್ಲಿ, ಒಎಂಸಿಗಳು ಎಲ್ಪಿಜಿ ಅಥವಾ ಸೀಮೆಎಣ್ಣೆಗೆ ಸಬ್ಸಿಡಿ ಪರಿಹಾರದ ಕಾರಣ ಒಟ್ಟು, 34,900 ಕೋಟಿ ರುಪಾಯಿಗಳನ್ನು ಸರ್ಕಾರದಿಂದ ಪಡೆಯಬೇಕಾಗಿತ್ತು. LPGಯನ್ನು ಅನಿಯಂತ್ರಣಗೊಳಿಸುವುದರಿಂದ ಒಎಂಸಿಗಳ ಕಾರ್ಯನಿರತ ಬಂಡವಾಳ ಹೆಚ್ಚಾಗುತ್ತದೆ.
ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) 2019ರ ಹಣಕಾಸು ವರ್ಷದಲ್ಲಿ ಒಟ್ಟು 43,300 ಕೋಟಿ ರುಪಾಯಿ ವಸೂಲಿ ಮಾಡಿವೆ, ಅದರಲ್ಲಿ ಎಲ್ಪಿಜಿ 31,500 ಕೋಟಿ ( 73 ಪರ್ಸೆಂಟ್) ರಷ್ಟಿದೆ. ಸೀಮೆಎಣ್ಣೆಯ ವಿಚಾರದಲ್ಲಿ ಸಬ್ಸಿಡಿ ಬೆಂಬಲವು ಈಗಾಗಲೇ ಕುಸಿದಿದೆ. ಪಿಡಿಎಸ್ ವ್ಯವಸ್ಥೆಯ ಮೂಲಕ ಇಂಧನ ಹರಿವನ್ನು ರಾಜ್ಯಗಳು ಗುರಿಯಾಗಿಸಿಕೊಂಡರೆ ಈ ಸಬ್ಸಿಡಿಯನ್ನು ಸಹ ತೆಗೆದುಕೊಳ್ಳಬಹುದು.
More From GoodReturns

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications