ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದಲ್ಲೇ ನಂಬರ್ 1 ಶ್ರೀಮಂತ ಎಂಬ ಪಟ್ಟವನ್ನು ಕಳೆದುಕೊಂಡಿದ್ದಾರೆ. ಸೋಮವಾರ (ಮಾರ್ಚ್ 9) ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಹಾಗೂ ಷೇರು ಬೆಲೆ ಕುಸಿತದ ಪರಿಣಾಮ ಮುಕೇಶ್ ಅಂಬಾನಿ ಮೊದಲ ಸ್ಥಾನದಿಂದ ಕೆಳಗೆ ಜಾರಿದ್ದಾರೆ.
ಮುಕೇಶ್ ಅಂಬಾನಿ ಏಷ್ಯಾದ ಸಿರಿವಂತ ಪಟ್ಟವನ್ನು ಕಳೆದುಕೊಂಡ ಬಳಿಕ ಚೀನಾದ ಅಲಿಬಾಬಾ ಗ್ರೂಪ್ನ ಸಂಸ್ಥಾಪಕ ಜಾಕ್ ಮಾ ಏಷ್ಯಾದ ನಂಬರ್ 1 ಶ್ರೀಮಂತ ಸ್ಥಾನ ಪಡೆದಿದ್ದಾರೆ.
ಕೊರೊನಾ ಭೀತಿಗೆ ಕಂಗೆಟ್ಟಿರುವ ಷೇರುಪೇಟೆ
ಸೋಮವಾರ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವೇ ಆಗಿ ಹೋಯಿತು. ಸೆನ್ಸೆಕ್ಸ್ 1,941.67 ಅಂಶಗಳು ಕುಸಿತಗೊಂಡಿದು. ಎನ್ಎಸ್ಇ ಸೂಚ್ಯಕ ನಿಫ್ಟಿ 538 ಅಂಶಗಳು ಕುಸಿತ ಕಾಣುವ ಮೂಲಕ ಷೇರುಪೇಟೆಯಲ್ಲಿ ಹೂಡಿಕೆದಾರರ ಆರು ಲಕ್ಷಕ್ಕೂ ಅಧಿಕ ಸಂಪತ್ತು ಕರಗಿ ಹೋಯಿತು.
ರಿಲಯನ್ಸ್ ಸೇರಿದಂತೆ ಅನೇಕ ಕಂಪನಿಗಳ ಷೇರು ಭಾರೀ ಕುಸಿತ
ಸೋಮವಾರ ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ ಬೃಹತ್ ಕಂಪನಿಗಳಲ್ಲಿ ಪ್ರಮುಖವಾದುದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ಕಂಪನಿಯ ಷೇರುಗಳು. ಕಳೆದ ವರ್ಷ ಡಿಸೆಂಬರ್ 20ರಂದು 1,617.55 ರುಪಾಯಿಗೆ ತಲುಪಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮೂರು ತಿಂಗಳ ಒಳಗೆ 1114.15 ಅಂಶಗಳಿಗೆ ತಲುಪಿದೆ. ಸೋಮವಾರ ಆರ್ಐಎಲ್ 156.85 ಪಾಯಿಂಟ್ಸ್ ಇಳಿಕೆಗೊಂಡಿತು.
ಒಂದೇ ದಿನದಲ್ಲಿ ಅಂಬಾನಿಯ 42,855 ಕೋಟಿ ರುಪಾಯಿ ನಾಶ
ಒಂದೇ ದಿನದಲ್ಲಿ ಮುಕೇಶ್ ಅಂಬಾನಿಯ 5.8 ಬಿಲಿಯನ್ ಡಾಲರ್ ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 42,855 ಕೋಟಿ ರುಪಾಯಿ ಕರಗಿ ಹೋಗಿದೆ. ಇದರಿಂದಾಗಿ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದಕೊಂಡು ಎರಡನೇ ಸ್ಥಾನಕ್ಕೆ ಕುಸಿದರು ಎಂದು ಬ್ಲೂಮಬರ್ಗ್ ವರದಿ ಮಾಡಿದೆ.
ನಂಬರ್ 1 ಸ್ಥಾನದಲ್ಲಿ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ
2018ರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥಾಪಕ ಜಾಕ್ ಮಾ 44.5 ಬಿಲಿಯನ್ ಡಾಲರ್ ಭಾರತದ ರುಪಾಯಿಗಳಲ್ಲಿ ಸುಮಾರು 3.29 ಲಕ್ಷ ಕೋಟಿ ರುಪಾಯಿ ಸಂಪತ್ತಿನೊಂದಿಗೆ ಮತ್ತೆ ಮೊದಲ ಸ್ಥಾನಕ್ಕೇರಿದ್ದಾರೆ.
ಜಾಕ್ ಮಾ ಅಂಬಾನಿಯ ಸಂಪತ್ತಿಗಿಂತ 2.6 ಬಿಲಿಯನ್ ಡಾಲರ್ ಅಧಿಕ ಸಂಪತ್ತು ಹೊಂದಿದ್ದಾರೆ.
ಸೌದಿ ಅರೇಬಿಯಾ-ರಷ್ಯಾ ನಡುವೆ ತೈಲ ಸಮರ
ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ತೈಲ ಸಮರದಿಂದಾಗಿ 29 ವರ್ಷಗಳಲ್ಲಿ ಕಚ್ಚಾ ತೈಲ ದರವು ಅತ್ಯಧಿಕ ಕುಸಿತ ಕಂಡಿದೆ. ಇದರ ಜೊತೆಗೆ ಕೊರೊನಾವೈರಸ್ ಪರಿಣಾಮವಾಗಿ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೇಡಿಕೆಯು ಕಡಿಮೆ ಆಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆ ಹಾಗೂ ಷೇರುಪೇಟೆ ಮೇಲೆ ಭಾರೀ ಪರಿಣಾಮ ಬೀರಿದೆ.
More From GoodReturns

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications