ದೇಶ ಬಿಟ್ಟು ಪರಾರಿ ಆಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ರೋಲ್ಸ್ ರಾಯ್ಸ್ ಕಾರು, ಎಂ.ಎಫ್. ಹುಸೇನ್ ಮತ್ತು ಅಮೃತಾ ಷೇರ್- ಗಿಲ್ ಅವರ ಕಲಾಕೃತಿಗಳು, ಡಿಸೈನರ್ ಹ್ಯಾಂಡ್ ಬ್ಯಾಗ್ ಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಗುರುವಾರ ಎರಡನೇ ಬಾರಿಗೆ ಹರಾಜು ಹಾಕಿದಾಗ 51 ಕೋಟಿ ರುಪಾಯಿ ಸಂಗ್ರಹ ಆಗಿದೆ.
40 ವಸ್ತುಗಳನ್ನು ಗುರುವಾರ ಹರಾಜು ಹಾಕಲಾಯಿತು. ಜಾರಿ ನಿರ್ದೇಶನಾಲಯವು (ಇ.ಡಿ.) ವಶಪಡಿಸಿಕೊಂಡಿದ್ದ ಆಸ್ತಿಗಳೆಲ್ಲವನ್ನೂ ಆ ಮೂಲಕ ಪೂರ್ತಿಯಾಗಿ ಹರಾಜು ಹಾಕಿದಂತಾಯಿತು. ಇ.ಡಿ. ಡೆಪ್ಯೂಟಿ ನಿರ್ದೇಶಕರ ಪರವಾಗಿ ಸ್ಯಾಫ್ರೋನೆಟ್ ನಿಂದ ಹರಾಜು ಆಯೋಜಿಸಲಾಗಿತ್ತು. ಈ ಮಾರಾಟದಿಂದ 40 ಕೋಟಿ ರುಪಾಯಿ ಸಂಗ್ರಹ ಆಗಬಹುದು ಎಂಬ ನಿರೀಕ್ಷೆ ಇತ್ತು.
ಮಾರ್ಚ್ 3ರಿಂದ 5ನೇ ತಾರೀಕಿನ ಮಧ್ಯೆ ನೀರವ್ ಮೋದಿಗೆ ಸೇರಿದ 112 ಆಸ್ತಿಗಳನ್ನು ನೇರ ಹಾಗೂ ಆನ್ ಲೈನ್ ಹರಾಜು ಹಾಕಲಾಗಿತ್ತು. 3-4ನೇ ತಾರೀಕು ನಡೆದ ಹರಾಜಿನಲ್ಲಿ 2.04 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಆಗ 52 ಲಕ್ಷ ರುಪಾಯಿ ಸಂಗ್ರಹ ಆಗಬಹುದು ಎಂಬ ನಿರೀಕ್ಷೆ ಇತ್ತು. ಗುರುವಾರದ ಹರಾಜಿನಲ್ಲಿ 51.41 ಕೋಟಿ ಸಂಗ್ರಹ ಆಗಿತ್ತು.

ನೀರವ್ ಮೋದಿ ವಿವಿಧ ಬ್ಯಾಂಕ್ ಗಳಿಗೆ ಸಾಲ ಬಾಕಿ ಇದ್ದು, ಈಗ ಹರಾಜಿನಲ್ಲಿ ವಸೂಲಿ ಆದ ಹಣವನ್ನು ಆ ಬಾಕಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಈ ಎರಡೂ ಹರಾಜಿನ ಮೂಲಕ 53.45 ಕೋಟಿ ರುಪಾಯಿಯನ್ನು ಜಾರಿ ನಿರ್ದೇಶನಾಲಯವು ಪಡೆಯುತ್ತದೆ.
ಎಂ. ಎಫ್. ಹುಸೇನ್ ಅವರ "ಬ್ಯಾಟಲ್ ಆಫ್ ಗಂಗಾ ಅಂಡ್ ಜಮುನಾ- ಮಹಾಭಾರತ 12" ಕಲಾಕೃತಿಯು 12 ಕೋಟಿ ರುಪಾಯಿಯ ದಾಖಲೆ ಮೊತ್ತಕ್ಕೆ ಖರೀದಿ ಆಗಿದೆ. ಇದು ಎಂ.ಎಫ್. ಹುಸೇನ್ ಅವರ ಕಲಾಕೃತಿಗಳ ಪೈಕಿಯೇ ದೊರೆತಿರುವ ಅತಿ ದೊಡ್ಡ ಮೊತ್ತ.
ಇನ್ನು ಅಮೃತಾ ಷೇರ್- ಗಿಲ್ ಅವರ "ಬಾಯ್ಸ್ ವಿಥ್ ಲೆಮನ್ಸ್" ಮೊದಲ ಬಾರಿಗೆ ಹರಾಜಾಗಿದ್ದು, 15.7 ಕೋಟಿ ರುಪಾಯಿಗೆ ಮಾರಾಟ ಆಗಿದೆ. ವಿ.ಎಸ್.ಗಾಯ್ ತೊಂಡೆ ಕಲಾಕೃತಿ 9.52 ಕೋಟಿ ಮತ್ತು ಬಾವಾ ಅವರ ಕಲಾಕೃತಿ 6.16 ಕೋಟಿಗೆ ಮಾರಾಟ ಆಗಿದೆ.
ಇನ್ನು ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಅಂದುಕೊಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಬೆಲೆಯಾದ 1.68 ಕೋಟು ರುಪಾಯಿಗೆ ಖರೀದಿಯಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications