ಕ್ರಿಪ್ಟೋಕರೆನ್ಸಿಗಳ ಮೇಲಿನ ಆರ್ಬಿಐ ದೃಷ್ಟಿಕೋನ ಬದಲಾಗುವುದಿಲ್ಲ: ಶಕ್ತಿಕಾಂತ ದಾಸ್
ಬಿಟ್ಕಾಯಿನ್ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗದೆ ಉಳಿದಿದೆ ಹಾಗೂ ಅವುಗಳ ಮೇಲೆ "ಪ್ರಮುಖ ಕಳವಳಗಳನ್ನು" ಹೊಂದಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಆರ್ಬಿಐ ಹಣಕಾಸು ನೀತಿ 2021ರ ಹೈಲೈಟ್ಸ್: ಪ್ರಮುಖ ನಿರ್ಧಾರಗಳೇನು?
"ಆರ್ಬಿಐನ ದೃಷ್ಟಿಯಲ್ಲಿ (ಕ್ರಿಪ್ಟೋಕರೆನ್ಸಿಗಳ ಮೇಲೆ) ಯಾವುದೇ ಬದಲಾವಣೆಗಳಿಲ್ಲ. ನಮ್ಮ ಸುತ್ತೋಲೆ ಈ ವಿಚಾರವನ್ನು ಚೆನ್ನಾಗಿ ಸ್ಪಷ್ಟಪಡಿಸುತ್ತದೆ" ಎಂದು ಪತ್ರಿಕಾಗೋಷ್ಟಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ದಾಸ್ ಉತ್ತರಿಸಿದ್ದಾರೆ. ಸುದ್ದಿಗಾರರು ಆರ್ಬಿಐ ಕ್ರಿಪ್ಟೋಕರೆನ್ಸಿ ದೃಷ್ಟಿಕೋನದಲ್ಲಿ ಏನಾದರೂ ಮರುಚಿಂತನೆ ನಡೆಸಿದೆಯೇ ಎಂದು ಕೇಳಿದ್ದರು.
ಯಾವುದೇ ಸಾರ್ವಭೌಮತ್ವವನ್ನು ಹೊಂದಿರದ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಜನರಿಗೆ ಆರ್ಬಿಐ ಎಚ್ಚರಿಕೆ ನೀಡಿದ್ದು, ಈ ವಿಷಯದ ಬಗ್ಗೆ 2018 ರಲ್ಲಿ ಮೊದಲ ಬಾರಿಗೆ ತಿಳಿಸಿತ್ತು. ಕೆಲವು ಬ್ಯಾಂಕುಗಳು ಇನ್ನೂ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಹಳೆಯ ಸುತ್ತೋಲೆಯನ್ನು ಉಲ್ಲೇಖಿಸುತ್ತಿರುವುದರಿಂದ ಸೋಮವಾರ ಹಣಕಾಸು ಸಂಸ್ಥೆಗಳಿಗೆ ಪರಿಷ್ಕೃತ ಅಧಿಸೂಚನೆ ಅಗತ್ಯವಾಗಿದೆ ಮತ್ತು ಇದು ದಾಖಲೆಯನ್ನು ನೇರಗೊಳಿಸುವ ಪ್ರಯತ್ನವಾಗಿದೆ ಎಂದು ದಾಸ್ ಹೇಳಿದ್ದಾರೆ.
''ಕ್ರಿಪ್ಟೋಕರೆನ್ಸಿಗಳ ಮೇಲೆ ನಾನು ಮೊದಲೇ ಹೇಳಿದ್ದಂತೆ, ಕ್ರಿಪ್ಟೋಕರೆನ್ಸಿಯ ಬಗ್ಗೆ ನಮಗೆ ಪ್ರಮುಖ ಕಾಳಜಿಗಳಿವೆ, ಅದನ್ನು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ" ಎಂದು ದಾಸ್ ಹೇಳಿದರು.
ಕೆಲವು ಕ್ರಿಪ್ಟೋಕರೆನ್ಸಿಗಳು ಇತ್ತೀಚೆಗೆ ಪ್ರತಿ ಯೂನಿಟ್ ವಹಿವಾಟಿನ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದು, ಹೂಡಿಕೆದಾರರ ಸಂಪತ್ತಿನ ಕುಸಿತಕ್ಕೆ ಕಾರಣವಾಗಿದೆ. ಕೆಲವು ಹೂಡಿಕೆದಾರರು ಕ್ರಿಪ್ಟೋಕರೆನ್ಸಿಗಳನ್ನು ಆಕರ್ಷಕ ಹೂಡಿಕೆ ಭಾಗವಾಗಿ ನೋಡುತ್ತಿದ್ದಾರೆ. ಆದರೆ ಅಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ಹೂಡಿಕೆದಾರರು ತಮ್ಮದೇ ಆದ ಮೌಲ್ಯಮಾಪನ ಮಾಡಬೇಕು ಎಂದು ಹೇಳಿದರು.