ನವದೆಹಲಿ, ನ. 23: ಟೆಲಿಕಾಂ ನೆಟ್ವರ್ಕ್ ಬಳಸುವ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಗೂಗಲ್ ಮೀಟ್ ಇತ್ಯಾದಿ ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ ಆ್ಯಪ್ಗಳು ಟೆಲಿಕಾಂ ಸಂಸ್ಥೆಗಳಿಗೆ ಹಣ ಭರಿಸಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸುವಂತೆ ಭಾರತೀಯ ಸೆಲೂಲರ್ ಆಪರೇಟರ್ಸ್ ಸಂಸ್ಥೆ (ಸಿಒಎಐ) ಆಗ್ರಹಿಸಿದೆ. ನಿನ್ನೆ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಸಿಒಎಐನ ಮಹಾನಿರ್ದೇಶಕ ಎಸ್ ಪಿ ಕೋಚ್ಚರ್, ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ಗಳಿಗೆ ಪರವಾನಿಗೆ ನೀಡುವುದು ಸೇರಿ ಕಾನೂನು ವ್ಯಾಪ್ತಿಗೆ ಬರುವಂತೆ ಒತ್ತಾಯಿಸಿದ್ದಾರೆ.
ಮುಂಬರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಟೆಲಿಕಾಂ ಆಪರೇಟರ್ಗಳ ಸಂಘ ಈ ಬೇಡಿಕೆಗಳನ್ನು ಮತ್ತು ಸಲಹೆಗಳನ್ನು ಸರ್ಕಾರದ ಮುಂದಿಡುತ್ತಿದೆ. ಡಾಟಾ ಟ್ರಾಫಿಕ್ ಉಪಯೋಗಿಸುವ ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ ಕಂಪನಿಗಳು ಟೆಲಿಕಾಂ ಸಂಸ್ಥೆಗಳಿಗೆ ಎಷ್ಟು ಪರಿಹಾರ ಕೊಡಬೇಕು ಎಂಬಿತ್ಯಾದಿ ಅಂಶಗಳಿರುವ ಪ್ರಸ್ತಾವವನ್ನು ಮುಂಬರುವ ದಿನಗಳಲ್ಲಿ ಸರ್ಕಾರದ ಮುಂದಿಡಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಬೇರೆ ವಿಭಾಗದ ಒಟಿಟಿಗಳೂ ಕೂಡ ಡಾಟಾ ಬಳಕೆ ಆಧಾರದ ಮೇಲೆ ಟೆಲಿಕಾಂ ಕಂಪನಿಗಳಿಗೆ ಆದಾಯ ಹಂಚಿಕೆ ಮಾಡುವ ಕ್ರಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಸಿಒಎಐ ಮಹಾನಿರ್ದೇಶಕರು, ಒಟಿಟಿ ಕಮ್ಯೂನಿಕೇಶನ್ ಸೇವೆ ನೀಡುಗರಾಗಲೀ, ಟೆಲಿಕಾಂ ಕಂಪನಿಗಳಾಗಲೀ ಕೆವೈಸಿಯನ್ನು ಹೊಂದುವುದು ಅತ್ಯಗತ್ಯ ಎಂದು ವಾದಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಟೆಲಿಕಾಂ ಕರಡು ನಿಯಮ ಮಸೂದೆಯಲ್ಲಿ ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ ಬಗ್ಗೆ ಪ್ರಸ್ತಾಪ ಇದೆ. ವಾಟ್ಸಾಪ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು ಒಟಿಟಿ ಕಮ್ಯೂನಿಕೇಶನ್ ಪ್ಲಾಟ್ಫಾರ್ಮ್ಗೆ ಬರುತ್ತವೆ. ಟೆಲಿಕಾಂ ಕಂಪನಿಗಳಂತೆ ಇವುಗಳಿಗೂ ಲೈಸೆನ್ಸ್ ನೀಡುವಿಕೆ ಇತ್ಯಾದಿ ಕಾನೂನು ಪರಿಧಿಗೆ ತರಬೇಕೆನ್ನುವ ಅಭಿಪ್ರಾಯ ಇದೆ.
ಆದರೆ, ಈ ವಿಚಾರದಲ್ಲಿ ಉದ್ಯಮ ವಲಯದಲ್ಲಿ ಭಿನ್ನ ಸ್ವರವೂ ಇದೆ. ಡಿಜಿಟಲ್ ಥಿಂಕ್ ಟ್ಯಾಂಕ್ ಎಂದು ಪರಿಗಣಿಸಲಾಗಿರುವ ಬ್ರಾಡ್ಬ್ಯಾಂಡ್ ಇಂಡಿಯಾ ಫೋರಂ (ಬಿಐಎಫ್) ಒಟಿಟಿ ಸೇವೆ ನೀಡುಗರನ್ನು ಕಾನೂನು ವ್ಯಾಪ್ತಿಗೆ ತರುವುದಕ್ಕೆ ವಿರೋಧಿಸಿದೆ. ಒಂದು ವೇಳೆ ಈ ಹೆಜ್ಜೆ ಇಟ್ಟರೆ ಸಾಮಾಜಿಕ ಆರ್ಥಿಕ ವ್ಯವಸ್ಥೆಗೆ ಮತ್ತು ಸೃಜನಶೀಲತೆಗೆ ಧಕ್ಕೆ ಆಗಬಹುದು ಎಂದು ಎಚ್ಚರಿಸಿದೆ.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications