ವಿಶ್ವಾದ್ಯಂತ ಟೆಕ್ಕೀ ಸಂಸ್ಥೆಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಫೇಸ್ಬುಕ್ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್ಫಾರ್ಮ್ಸ್ ಬರೋಬ್ಬರಿ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿರುವ ಸುದ್ದಿ ರಾಚಿದೆ. ಅಲ್ಲದೇ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಯವರೆಗೂ ಸ್ಥಗಿತಗೊಳಿಸಿದೆ.
ಕೆಲಸ ಕಳೆದುಕೊಂಡ 11 ಸಾವಿರ ಉದ್ಯೋಗಿಗಳು ಮೆಟಾದ ಒಟ್ಟು ಸಿಬ್ಬಂದಿಯ ಶೇ. 13ರಷ್ಟಿದ್ದರು. 2004ರಿಂದ ಮೆಟಾ ಪ್ಲಾಟ್ಫಾರ್ಮ್ಸ್ನ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಕಡಿತ ಮಾಡಲಾಗಿರಲಿಲ್ಲ.
"ಇದು ಪ್ರತಿಯೊಬ್ಬರಿಗೂ ಕಠಿಣವೆನಿಸುವ ನಿರ್ಧಾರ. ಇದರಿಂದ ಬಾಧಿತರಾದವರ ಬಗ್ಗೆ ನನಗೆ ಬಹಳ ವಿಷಾದ ಇದೆ" ಎಂದು ಮೆಟಾ ಪ್ಲಾಟ್ಫಾರ್ಮ್ಸ್ನ ಸಿಇಒ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಮುಗ್ಗಟ್ಟು ಇರುವ ಕಾರಣ ಡಿಜಿಟಲ್ ಆ್ಯಡ್ ಮಾರುಕಟ್ಟೆ ಕಳೆಗುಂದಿದ್ದು ಫೇಸ್ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿ ಸೋಷಿಯಲ್ ಮೀಡಿಯಾಗಳ ಆದಾಯಕ್ಕೆ ಸಂಚಕಾರ ಬಿದ್ದಂತಾಗಿದೆ. ಮೆಟಾ ಪ್ಲಾಟ್ಫಾರ್ಮ್ಸ್ ಮಾಲಕತ್ವದಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಇವೆ. ಆನ್ಲೈನ್ ಜಾಹೀರಾತುಗಳೇ ಬಹುತೇಕ ಆದಾಯ ಮೂಲ ಇರುವ ಮೀಡಿಯಾಗಳಿವು. ಹೀಗಾಗಿ, ಮೆಟಾ ಸಂಸ್ಥೆ ತನ್ನ ವೆಚ್ಚವನ್ನು ಕಡಿಮೆಗೊಳಿಸಲು ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡದೇ ಬೇರೆ ದಾರಿ ಇರಲಿಲ್ಲ ಎನ್ನಲಾಗುತ್ತಿದೆ.
ಮೆಟಾ ಇಂಡಿಯಾ?
ಮೆಟಾದ ಭಾರತ ವಿಭಾಗದಲ್ಲಿ 300-400 ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಎಷ್ಟು ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ ಎಂಬುದು ಗೊತ್ತಾಗಿಲ್ಲ. ಇತ್ತೀಚೆಗಷ್ಟೇ ಮೆಟಾ ಇಂಡಿಯಾದ ಎಂಡಿಯಾಗಿದ್ದ ಅಜಿತ್ ಮೋಹನ್ ರಾಜೀನಾಮೆ ನೀಡಿ ಸ್ನ್ಯಾಪ್ ಎಂಬ ಇಂಥದ್ದೇ ಸೋಷಿಯಲ್ ಮೀಡಿಯಾ ಕಂಪನಿ ಸೇರಿದ್ದರು. ಸದ್ಯ ಮೆಟಾ ಇಂಡಿಯಾವನ್ನು ಮನೀಶ್ ಚೋಪ್ರಾ ಮುನ್ನಡೆಸುತ್ತಿದ್ದಾರೆ.

ಈಗ ಮೆಟಾದ ಸಿಬ್ಬಂದಿ ಕಡಿತದ ಕ್ರಮ ಅದರ ಭಾರತದ ವ್ಯವಹಾರಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಅಜಿತ್ ಮೋಹನ್ ನೇತೃತ್ವದಲ್ಲಿದ್ದಾಗ ಭಾರತದಲ್ಲಿ ಫೇಸ್ಬುಕ್ಗೆ ಒಳ್ಳೆಯ ಆದಾಯ ಬಂದಿದೆ. 2021-22ರ ಹಣಕಾಸು ವರ್ಷದಲ್ಲಿ ಮೆಟಾದ ನಿವ್ವಳ ಲಾಭ ಬಹುತೇಕ ದ್ವಿಗುಣಗೊಂಡು 297 ಕೋಟಿ ರೂ ತಲುಪಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದು 128.2 ಕೋಟಿ ರೂ ನಿವ್ವಳ ಲಾಭ ಪಡೆದಿತ್ತು.
2021-22ರ ಹಣಕಾಸು ವರ್ಷದಲ್ಲಿ ಮೆಟಾದ ಒಟ್ಟಾರೆ ಆದಾಯ 2,324 ಕೋಟಿ ರೂಪಾಯಿ ಇದೆ. ಹಿಂದಿನ ವರ್ಷದಲ್ಲಿ 1,485.1 ಕೋಟಿ ರೂ ಆದಾಯ ಹೊಂದಿದ್ದ ಮೆಟಾ ಒಂದು ವರ್ಷದಲ್ಲಿ ಶೇ. 56.5ರಷ್ಟು ಆದಾಯ ಹೆಚ್ಚಲ ಕಂಡಿದೆ. ಭಾರತದಲ್ಲಿ ಜಾಹೀರಾತುಗಳಿಂದ ಬಂದ ಒಟ್ಟು ಆದಾಯ ಶೇ. 74ರಷ್ಟು ಹೆಚ್ಚಾಗಿದೆ.
ಯಾಕೆ ಲೇ ಆಫ್?
ಭಾರತದಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ಗೆ ಲಾಭ ಬಂದಿರಬಹುದು. ಆದರೆ, ಜಾಗತಿಕವಾಗಿ ಆ ಸ್ಥಿತಿ ಇಲ್ಲ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಂದ ಬಳಿಕ ಮೆಟಾ ಸಾಕಷ್ಟು ವ್ಯವಹಾರ ನಷ್ಟ ಅನುಭವಿಸಿದೆ.
"ಇ-ಕಾಮರ್ಸ್ ಬಮದ ಬಳಿಕ ವಿಪರೀತ ಎನಿಸುವಷ್ಟು ಆದಾಯ ಹೆಚ್ಚಳವಾಯಿತು. ಕೋವಿಡ್ ಬಿಕ್ಕಟ್ಟು ಅಂತ್ಯಗೊಂಡ ಬಳಿಕ ಈ ಬೆಳವಣಿಗೆ ಹೀಗೆ ಇರುತ್ತದೆ ಎಂದು ಎಲ್ಲರಂತೆ ನಾವೂ ನಿರೀಕ್ಷಿಸಿದ್ದೆವು. ಆದರೆ, ಹಾಗಾಗಲಿಲ್ಲ... ಆನ್ಲೈನ್ ಕಾಮರ್ಸ್ ಮುಂಚಿದ್ದ ಸ್ಥಿತಿಗೆ ಬಂದಿದ್ದಲ್ಲದೇ, ಆರ್ಥಿಕ ದುಸ್ಥಿತಿ, ಸ್ಪರ್ಧೆ ಹೆಚ್ಚಳ, ಜಾಹೀರಾತು ನಷ್ಟ ಇತ್ಯಾದಿಗಳಿಂದ ನಾವು ಅಂದುಕೊಂಡಿದ್ದಕ್ಕಿಂತ ಆದಾಯ ಕಡಿಮೆ ಆಗಿದೆ. ನಾನು ತಪ್ಪಾಗಿ ಎಣಿಕೆ ಮಾಡಿದ್ದೆ, ಅದರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ" ಎಂದು ಮಾರ್ಕ್ ಜುಕರ್ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸ್ಥಿತಿ ಮುಗಿದ ಬಳಿಕ ಮತ್ತೆ ಆದಾಯ ಯಥಾಪ್ರಕಾರ ಹೆಚ್ಚೆಚ್ಚು ಹರಿದುಬರುವ ನಿರೀಕ್ಷೆಯಲ್ಲಿದ್ದ ಮೆಟಾ ಆ ಹಂತದಲ್ಲಿ ಬಹಳಷ್ಟು ಹೂಡಿಕೆಗಳನ್ನು ಮಾಡಿತ್ತು. ಈ ಬಂಡವಾಳ ವಾಪಸ್ ಬರಬಹುದು ಎಂಬ ಅದರ ಎಣಿಕೆ ಸುಳ್ಳಾಗಿ ಹೋಗಿದೆ. ಈಗ ಮೆಟಾ ತನ್ನ ಸಿಬ್ಬಂದಿ ವರ್ಗ ಕಡಿತಗೊಳಿಸುವ ಮುನ್ನ ವೆಚ್ಚ ಕಡಿತಕ್ಕೆ ಬೇರೆ ಮಾರ್ಗೋಪಾಯಗಳನ್ನೂ ಅನುಸರಿಸಿತ್ತು. ವೇತನಕಡಿತ, ತಂಡಗಳ ಪುನಾರಚನೆ, ಬಜೆಟ್ ಕಡಿತ, ರಿಯಲ್ ಎಸ್ಟೇಟ್ ವೆಚ್ಚ ಕಡಿತ ಇತ್ಯಾದಿ ಹಲವು ಕ್ರಮಗಳನ್ನು ಕೈಗೊಂಡಿತೆನ್ಲಾಗಿದೆ.
"ನಾವು ಕೈಗೊಂಡ ಈ ಕ್ರಮಗಳು ನಿರೀಕ್ಷಿತ ಫಲ ಕೊಡಲು ಸಾಲದಾಗಿವೆ. ಹೀಗಾಗಿ, ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ" ಎಂದು ಮಾರ್ಕ್ ಜುಕರ್ಬರ್ಕ್ ಸ್ಪಷ್ಟಪಡಿಸಿದ್ಧಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications