ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಜಿಯೋ ಸಂಸ್ಥೆ ಫೇಸ್ಬುಕ್ನೊಂದಿಗೆ ಕೈ ಜೋಡಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡುವ ಮೂಲಕ ಫೇಸ್ಬುಕ್ ಇದೀಗ ಜಿಯೋದ ಅತೀ ದೊಡ್ಡ ಷೇರುದಾರನಾಗಿ ಮಾರ್ಪಟ್ಟಿದೆ.
ಜಿಯೋದೊಂದಿಗೆ ಫೇಸ್ಬುಕ್ ಒಪ್ಪಂದ ಮಾಡಿಕೊಳ್ಳಲು ಪ್ರಮುಖ ಕಾರಣ ಅಂದರೆ ಜಿಯೋದ ಸುಮಾರು 38.8 ಕೋಟಿ ಗ್ರಾಹಕರ ಬೃಹತ್ ಪಡೆಯ ಲಾಭ ಇದೀಗ ಫೇಸ್ಬುಕ್ಗೆ ದೊರೆಯಲಿದೆ. ಇಷ್ಟಲ್ಲದೆ ಭಾರತದಲ್ಲಿರುವ ಸುಮಾರು 6 ಕೋಟಿಗೂ ಅಧಿಕ ಸಣ್ಣ ಉದ್ಯಮಗಳಿಗೆ, ರಿಟೇಲ್ ವ್ಯಾಪಾರಿಗಳಿಗೆ ಡಿಜಿಟಲ್ ಅವಕಾಶಗಳನ್ನು ಸೃಷ್ಟಿಸಲು ಜಿಯೋ-ಫೇಸ್ಬುಕ್ ನಡುವಿನ ಒಪ್ಪಂದ ಸಹಾಯಕಾರಿಯಾಗಲಿದೆ.

ಇದಕ್ಕೆ ಪ್ರತಿಯಾಗಿ ಪೇಟಿಯಂ ಭವಿಷ್ಯದ ಜಿಯೋ ಸವಾಲುಗಳನ್ನು ಎದುರಿಸಲು ಹೊಸ ಕ್ರಮಗಳನ್ನು ಅನಾವರಣಗೊಳಿಸಿದೆ. ದೇಶದ ಲಕ್ಷಾಂತರ ವ್ಯಾಪಾರಿಗಳಿಗೆ ತನ್ನ ಕೊಡುಗೆಯನ್ನು ತಲುಪಿಸುವ ಮೂಲಕ ರಿಟೇಲ್ ಮಾರುಕಟ್ಟೆಗೆ ಗಾಳ ಹಾಕಲು ಹೊರಟಿದೆ.
ಚಿಲ್ಲರೆ ಅಂಗಡಿಗಳನ್ನು ಸಂಪರ್ಕ ಸಾಧಿಸುವ ಮೂಲಕ ಅವುಗಳಿಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಈ ಸಮಯದಲ್ಲಿ ಪೇಟಿಎಂ ಆಲ್ ಇನ್ ಒನ್ ಕ್ಯೂಆರ್ ಮೂಲಕ ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಕಿರಾನಾ ಅಂಗಡಿಗಳಿಗೆ ಸಹಾಯ ಮಾಡಲು 100 ಕೋಟಿ ರುಪಾಯಿಯ ಯೋಜನೆ ಹಮ್ಮಿಕೊಂಡಿದೆ.
ಫೇಸ್ಬುಕ್ನೊಂದಿಗೆ ಜಿಯೊ ಜೊತೆಯಾದ ಪರಿಣಾಮ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಜಿಯೋಮಾರ್ಟ್ ಆರಂಭವು ಪೇಟಿಎಂಗೆ ಅತಿದೊಡ್ಡ ಭಯವನ್ನುಂಟುಮಾಡಿದೆ. ಹೀಗಾಗಿ ಹೊಸ ಕಾರ್ಯಕ್ರಮದಡಿಯಲ್ಲಿ ಪೇಟಿಎಂ ಎಲ್ಲಾ ವ್ಯಾಪಾರಿ ಪಾಲುದಾರರು Paytm Wallet, Rupay Cards, ಮತ್ತು ಎಲ್ಲಾ UPI ಆಧಾರಿತ ಪಾವತಿ ಅಪ್ಲಿಕೇಶನ್ಗಳಿಂದ ಪಾವತಿಗಳನ್ನು ಸ್ವೀಕರಿಸಿದರೆ ಪ್ರತಿಫಲ ಅಂಕಗಳನ್ನು(ರಿವಾರ್ಡ್ ಪಾಯಿಂಟ್ಸ್) ಗಳಿಸಲು ಅರ್ಹರಾಗಿರುತ್ತಾರೆ.
ಜಿಯೋಮಾರ್ಟ್ ದೇಶದಲ್ಲಿ 400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ಲಾಟ್ಫಾರ್ಮ್ ವಾಟ್ಸಾಪ್ ಮೂಲಕ ಆರ್ಡರ್ ತೆಗೆದುಕೊಳ್ಳುವ ಮೂಲಕ ಶೀಘ್ರವಾಗಿ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಜಿಯೋಮಾರ್ಟ್ ಖಂಡಿತವಾಗಿಯೂ ದೇಶದಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದರೆ, ಪೇಟಿಎಂಗೆ ದೊಡ್ಡ ಸವಾಲು ಎದುರಾಗಲಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications