"ಪಿಎಂ CARES ಫಂಡ್ ಗೆ ಮಾರ್ಚ್ 26ರಿಂದ 31, 2020ರ ಮಧ್ಯೆ 5 ದಿನದಲ್ಲಿ 3076 ಕೋಟಿ ರುಪಾಯಿ ಬಂದಿದೆ ಎಂದು ಆಡಿಟರ್ಸ್ ಖಾತ್ರಿ ಪಡಿಸಿದ್ದಾರೆ. ಆದರೆ ಅಂಥ ಉದಾರ ದೇಣಿಗೆ ನೀಡಿದವರ ಹೆಸರನ್ನು ಏಕೆ ಬಯಲು ಮಾಡುತ್ತಿಲ್ಲ? ನಿಗದಿತ ಮೊತ್ತಕಿಂತ ಹೆಚ್ಚು ಹಣ ಪಡೆದಲ್ಲಿ ಎಲ್ಲ ಎನ್ ಜಿಒ ಅಥವಾ ಟ್ರಸ್ಟ್ ಗಳು ಬಹಿರಂಗ ಮಾಡಬೇಕು. ಈ ಜವಾಬ್ದಾರಿಯಿಂದ PM CARES FUNDನಿಂದ ಹೊರತಾಗಲು ಸಾಧ್ಯ?" ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಿದಂಬರಂ, ದೇಣಿಗೆ ಪಡೆಯುವವರು ಯಾರು ಅಂತ ಗೊತ್ತಿದೆ. ದೇಣಿಗೆ ಪಡೆಯುವವರೇ ಟ್ರಸ್ಟಿ. ಆದರೆ ದೇಣಿಗೆ ನೀಡಿದವರ ಹೆಸರು ಬಹಿರಂಗ ಮಾಡುವುದಕ್ಕೆ ಟ್ರಸ್ಟಿ ಏಕೆ ಹೆದರುತ್ತಾರೆ? ಎಂದು ಪ್ರಶ್ನಿಸಿದ್ದಾರೆ. PM CARES ಫಂಡ್ ವೆಬ್ ಸೈಟ್ ನಲ್ಲಿ ಆಡಿಟ್ ವರದಿಯನ್ನು ಅಪ್ ಲೋಡ್ ಮಾಡಲಾಗಿದೆ. ಆದರೆ ದೇಶೀಯ ಹಾಗೂ ವಿದೇಶಿ ದೇಣಿಗೆದಾರರ ಹೆಸರನ್ನು ಬಹಿರಂಗ ಸರ್ಕಾರದಿಂದ ಮಾಡಿಲ್ಲ.
PM CARES FUND ಮಾರ್ಚ್ ನಲ್ಲಿ ಆರಂಭ
PM CARES FUND ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ನಲ್ಲಿ ಆರಂಭಿಸಿದ್ದರು. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಎದುರಾಗಿರುವುದರಿಂದ ಅದನ್ನು ನಿರ್ವಹಿಸಲು ಈ ನಿಧಿ ಸ್ಥಾಪಿಸಲಾಯಿತು. ಪ್ರಧಾನಿ ಮೋದಿ ಅವರು ಈ ಟ್ರಸ್ಟ್ ಅಧ್ಯಕ್ಷರಾದರೆ, ಸಂಪುಟದ ಹಿರಿಯ ಸಚಿವರು ಇದರ ಸದಸ್ಯರು.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವುದಿಲ್ಲ
ಕಳೆದ ಜೂನ್ ನಲ್ಲಿ PM CARES FUND, ಅದರ ಟ್ರಸ್ಟ್ ಒಪ್ಪಂದ ಇವುಗಳ ಬಗ್ಗೆ ಮಾಧ್ಯಮವೊಂದು ಪ್ರಶ್ನೆ ಕೇಳಿದಾಗ, ಈ ನಿಧಿಯು ಮಾಹಿತಿ ಹಕ್ಕು ಕಾಯ್ದೆ ಸಾರ್ವಜನಿಕರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿತ್ತು. ಆ ಸಮಯದಲ್ಲಿ ಈ ಕುರಿತು ಆಕ್ಷೇಪಗಳು ಸಹ ಕೇಳಿಬಂದಿದ್ದವು.
ಆಡಿಟ್ ವರದಿಗೆ PMO ಅಧಿಕಾರಿ ಸಹಿ
ಆದರೆ, PM CARES ಪರವಾಗಿ ಆಡಿಟ್ ವರದಿಗೆ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಸಹಿ ಹಾಕಿದ್ದಾರೆ. PMO ಜಂಟಿ ಕಾರ್ಯದರ್ಶಿ ಶ್ರೀಕರ್ ಕೆ. ಪರ್ದೇಶಿ ಅವರು ಸಹಿ ಹಾಕಿದ್ದಾರೆ. ಇದರ ಜತೆಗೆ ಮೋದಿ ಅವರ ಖಾಸಗಿ ಕಾರ್ಯದರ್ಶಿ ಹಾರ್ದಿಕ್ ಶಾ ಕೂಡ ನಿಧಿಯ ಡೆಪ್ಯೂಟಿ ಸೆಕ್ರೆಟರಿ ಎಂದು ಸಹಿ ಮಾಡಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications