ಐಬಿಎಂ ಸಿಇಓ ಅರವಿಂದ ಕೃಷ್ಣ ಜೊತೆ ಪ್ರಧಾನಿ ಮೋದಿ ಸಂವಾದ: ಏನು ಹೇಳಿದರು?
ಭಾರತದಲ್ಲಿ ಹೂಡಿಕೆ ಮಾಡಲು ಇದು ಅತ್ತ್ಯುತ್ತಮ ಸಮಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಗಳನ್ನು ದೇಶ ಮುಕ್ತವಾಗಿ ಸ್ವಾಗತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಐಬಿಎಂ ಸಿಇಒ ಅರವಿಂದ ಕೃಷ್ಣ ಅವರಿಗೆ ತಿಳಿಸಿದ್ದಾರೆ.
ಕೃಷ್ಣ ಅವರೊಂದಿಗಿನ ವರ್ಚುವಲ್ ಸಂವಾದದಲ್ಲಿ, ಜಗತ್ತು ನಿಧಾನಗತಿಯಲ್ಲಿ ಸಾಗುತ್ತಿರುವಾಗ, ಭಾರತದಲ್ಲಿ ಎಫ್ಡಿಐ ಒಳಹರಿವು ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ದೇಶವು ಸ್ವಾವಲಂಬಿ ಭಾರತದ ದೃಷ್ಟಿಯೊಂದಿಗೆ ಮುಂದುವರಿಯುತ್ತಿದೆ ಎಂದು ಮೋದಿ ಹೇಳಿದರು.
ಇದೀಗ ಗೂಗಲ್, ಜಿಯೋ ದೋಸ್ತಿ: ಜಿಯೋದಲ್ಲಿ 33,737 ಕೋಟಿ ಹೂಡಿಕೆ
ಕೋವಿಡ್ -19 ಸಾಂಕ್ರಾಮಿಕ ರೋಗವು ವ್ಯಾಪಾರ ಸಂಸ್ಕೃತಿಯ ಮೇಲೆ ಬೀರುವ ಪರಿಣಾಮದ ಕುರಿತು ಮಾತನಾಡಿದ ಪ್ರಧಾನಿ, 'ಮನೆಯಿಂದ ಕೆಲಸ' ವನ್ನು ದೊಡ್ಡ ರೀತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ಈ ತಾಂತ್ರಿಕ ಬದಲಾವಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಮೂಲಸೌಕರ್ಯ, ಸಂಪರ್ಕ ಮತ್ತು ನಿಯಂತ್ರಕ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
75 ಪ್ರತಿ ಶತದಷ್ಟು ಮನೆಯಿಂದ ಕೆಲಸ
ಐಬಿಎಂ ತನ್ನ 75 ಪ್ರತಿ ಶತದಷ್ಟು ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡುವಂತೆ ಮಾಡುವ ಇತ್ತೀಚಿನ ನಿರ್ಧಾರದದ ಬಗ್ಗೆ ಸಂಬಂಧಿಸಿದ ತಂತ್ರಜ್ಞಾನಗಳು ಮತ್ತು ಸವಾಲುಗಳ ಬಗ್ಗೆಯೂ ಮೋದಿ ಚರ್ಚಿಸಿದ್ದಾರೆ.
ಆತ್ಮಾ ನಿರ್ಭರ ಭಾರತ್ ಬಗ್ಗೆ ವಿಶ್ವಾಸ
ಐಬಿಎಂ ಸಿಇಒ ಭಾರತದಲ್ಲಿ ತಮ್ಮ ಕಂಪನಿಯ ಬೃಹತ್ ಹೂಡಿಕೆ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿಗೆ ಮಾಹಿತಿ ನೀಡಿದರು ಮತ್ತು ‘ಆತ್ಮಾ ನಿರ್ಭರ ಭಾರತ್' (ಸ್ವಾವಲಂಬಿ ಭಾರತ) ದರ್ಶನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಉತ್ತಮ ಸಮಯ
ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂದು ಪ್ರಧಾನಿ ಎತ್ತಿ ತೋರಿಸಿದರು. ಟೆಕ್ ವಲಯದಲ್ಲಿ ನಡೆಯುತ್ತಿರುವ ಹೂಡಿಕೆಗಳನ್ನು ದೇಶ ಸ್ವಾಗತಿಸುತ್ತಿದೆ ಮತ್ತು ಬೆಂಬಲಿಸುತ್ತಿದೆ ಎಂದು ಅವರು ಹೇಳಿದರು. ಜಗತ್ತು ಮಂದಗತಿಯಲ್ಲಿ ಸಾಗುತ್ತಿರುವಾಗ, ಭಾರತದಲ್ಲಿ ಎಫ್ಡಿಐ ಒಳಹರಿವು ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ದೇಶವು ಸಾಗುತ್ತಿದೆ
ಸಮಗ್ರ, ತಂತ್ರಜ್ಞಾನ ಮತ್ತು ದತ್ತಾಂಶ-ಚಾಲಿತ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ದೇಶವು ಸಾಗುತ್ತಿದೆ ಎಂದು ಅವರು ಒತ್ತಿಹೇಳಿದ್ದಾರೆ. ಆರೋಗ್ಯ ದೃಷ್ಟಿಯನ್ನು ಮುಂದೆ ತೆಗೆದುಕೊಳ್ಳುವಲ್ಲಿ ಐಬಿಎಂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಐಬಿಎಂನ ಜಾಗತಿಕ ಮುಖ್ಯಸ್ಥರಾದ ಕೃಷ್ಣ ಅವರನ್ನು ಮೋದಿ ಅಭಿನಂದಿಸಿದರು. ಭಾರತದೊಂದಿಗೆ ಐಬಿಎಂನ ಬಲವಾದ ಸಂಪರ್ಕ ಮತ್ತು ದೇಶದಲ್ಲಿ ಅದರ ದೊಡ್ಡ ಉಪಸ್ಥಿತಿಯನ್ನು ಅವರು ಉಲ್ಲೇಖಿಸಿದ್ದಾರೆ, ಕಂಪನಿಯ 20 ನಗರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.