ನವದೆಹಲಿ, ಜುಲೈ 01: ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (ಆರ್ಬಿಎಲ್) ಹೆಸರಾಂತ ಆಹಾರ ಸರಪಣಿ ಬ್ರಾಂಡ್ 'ಪ್ರೆಟ್ ಮೊಂಜೀರ್' ಜೊತೆಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತೀಯ ಮಾರುಕಟ್ಟೆಗಳಲ್ಲಿ 'ಪ್ರೆಟ್ ಎ ಮ್ಯಾಂಜರ್' ಬ್ರ್ಯಾಂಡ್ ಅನ್ನು ಬಲಪಡಿಸಲು ಎರಡೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಪ್ರೆಟ್ ಎ ಮ್ಯಾಂಜರ್ ತಾಜಾ ಆಹಾರ ಮತ್ತು ಸಾವಯವ ಕಾಫಿಗೆ ವಿಶ್ವಪ್ರಸಿದ್ಧವಾಗಿದೆ. ಈ ಫ್ರಾಂಚೈಸ್ ಪಾಲುದಾರಿಕೆಯೊಂದಿಗೆ, ರಿಲಯನ್ಸ್ ಬ್ರಾಂಡ್ಗಳು ಈಗ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಆಹಾರ ಸರಪಣಿಗಳನ್ನು ತೆರೆಯಲಿವೆ.
1986 ರಲ್ಲಿ ಲಂಡನ್ನಲ್ಲಿ ಪ್ರೆಟ್ ಎಂ ಮ್ಯಾಂಜರ್ನ ಮೊದಲ ಆಹಾರ ಮಳಿಗೆಯನ್ನು ತೆರೆಯಲಾಯಿತು. ಅಲ್ಲಿ ಕೈಯಿಂದ ತಯಾರಿಸಿದ ತಾಜಾ ಸಿದ್ಧ ಆಹಾರವನ್ನು ಬಡಿಸಲಾಗುತ್ತದೆ. ಬ್ರ್ಯಾಂಡ್ ಪ್ರಸ್ತುತ ಯುಕೆ, ಯುಎಸ್, ಯುರೋಪ್ ಮತ್ತು ಏಷ್ಯಾ ಸೇರಿದಂತೆ 9 ದೇಶಗಳಲ್ಲಿ 550 ಆಹಾರ ಮಳಿಗೆಗಳನ್ನು ಹೊಂದಿದೆ. ಮತ್ತೊಂದೆಡೆ, ರಿಲಯನ್ಸ್ ಬ್ರ್ಯಾಂಡ್ಗಳು ಭಾರತದ ಅತಿದೊಡ್ಡ ಐಷಾರಾಮಿ ಮತ್ತು ಪ್ರೀಮಿಯಂ ಚಿಲ್ಲರೆ ವ್ಯಾಪಾರಿ ಎಂದು ಕರೆಯಲ್ಪಡುತ್ತವೆ. ಕಳೆದ 14 ವರ್ಷಗಳಲ್ಲಿ, ಕಂಪನಿಯು ಪ್ರಪಂಚದಾದ್ಯಂತ ಬ್ರ್ಯಾಂಡ್ಗಳನ್ನು ಅಭಿವೃದ್ಧಿಪಡಿಸಿದೆ.
ರಿಲಯನ್ಸ್ ಬ್ರ್ಯಾಂಡ್ಸ್ ಲಿ. ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಮೆಹ್ತಾ ಹೇಳುವಂತೆ "ಪ್ರೀಟ್ ಜೊತೆಗಿನ ನಮ್ಮ ಪಾಲುದಾರಿಕೆಯು ಭಾರತದಲ್ಲಿ ಆಹಾರ ಮತ್ತು ಪಾನೀಯ ಉದ್ಯಮದ ಪ್ರಬಲ ಬೆಳವಣಿಗೆಯ ಸಾಮರ್ಥ್ಯದಲ್ಲಿ ಬೇರೂರಿದೆ. ಆರ್ಬಿಎಲ್ ಭಾರತೀಯ ಗ್ರಾಹಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದೆ. ಆಹಾರದ ಬಗ್ಗೆ ಗ್ರಾಹಕರಲ್ಲಿ ಅರಿವು ಹೆಚ್ಚಾಗಿದೆ. ಸಿದ್ಧ ಆಹಾರವು ಹೊಸ ಫ್ಯಾಷನ್ ಆಗುತ್ತಿದೆ. ಪ್ರಪಂಚದಾದ್ಯಂತದ ಭಾರತೀಯರು ತಾಜಾ ಮತ್ತು ಸಾವಯವ ಪದಾರ್ಥಗಳಿಂದ ಮಾಡಿದ ಆಹಾರವನ್ನು ಸೇವಿಸಲು ಬಯಸುತ್ತಾರೆ, ಪ್ರೆಟ್ ಅವರ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ.

ಪ್ರೆಟ್ ಎ ಮ್ಯಾಂಜರ್ನ ಸಿಇಒ ಪನೊ ಕ್ರಿಸ್ಟೌ ಹೇಳುವಂತೆ "ಎರಡು ದಶಕಗಳ ಹಿಂದೆ, ನಾವು ಏಷ್ಯಾದಲ್ಲಿ ಪ್ರೆಟ್ನ ಮೊದಲ ಮಳಿಗೆಯನ್ನು ತೆರೆದಿದ್ದೇವೆ. ನಮ್ಮ ತಾಜಾ ಆಹಾರ ಮತ್ತು 100% ಸಾವಯವ ಕಾಫಿಯನ್ನು ಏಷ್ಯಾದ ಹೊಸ ನಗರಗಳಿಗೆ ವಿಸ್ತರಿಸಲು ಇದು ನಮಗೆ ಸ್ಫೂರ್ತಿಯಾಗಿದೆ. ಆರ್ಬಿಎಲ್ ತನ್ನ ಪರಿಣತಿಯೊಂದಿಗೆ ಭಾರತದಲ್ಲಿ ನಮ್ಮ ಬ್ರ್ಯಾಂಡ್ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಜಾಗತಿಕ ಫ್ರಾಂಚೈಸ್ ಪಾಲುದಾರಿಕೆಯಲ್ಲಿ ಅವರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ.'' ಎಂದರು.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications