ಮಾರುಕಟ್ಟೆ ನಿಯಂತ್ರಕ ಸೆಬಿಯು ಪಿಜಿಐಎಂ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಮೆನನ್ ಸೇರಿದಂತೆ ಐದು ಘಟಕಗಳ ಮೇಲೆ ಒಟ್ಟು 36 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ.
ಐಎಸ್ಟಿ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣದಿಂದಾಗಿ ಕುಮರೇಶ್ ರಾಮಕೃಷ್ಣನ್, ಪುನೀತ್ ಪಾಲ್, ರಾಕೇಶ್ ಸೂರಿ ಹಾಗೂ ಪಿಜಿಐಎಂ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಮೆನನ್ ಮೇಲೆ ದಂಡವನ್ನು ವಿಧಿಸಿದ್ದಾರೆ. ಕುಮರೇಶ್ ರಾಮಕೃಷ್ಣನ್, ಪುನೀತ್ ಪಾಲ್, ರಾಕೇಶ್ ಸೂರಿ ಈ ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಸಂಸ್ಥೆಯ ಫಂಡ್ ಮ್ಯಾನೇಜರ್ ಆಗಿದ್ದರು.
ಪಿಜಿಐಎಂ ಎಂಎಫ್ನ ಯೋಜನೆಗಳಲ್ಲಿ ಐಎಸ್ಟಿಯನ್ನು ಅನ್ವಯ ಮಾಡುವ ಸಂದರ್ಭದಲ್ಲಿ ಐದು ಘಟಕಗಳು ಮ್ಯೂಚುಯಲ್ ಫಂಡ್ ನಿಯಮಗಳ ನಿಬಂಧನೆಗಳಿಗೆ ಬದ್ಧವಾಗಿಲ್ಲ ಎಂದು ಸೆಬಿಯು ಆದೇಶದಲ್ಲಿ ಉಲ್ಲೇಖ ಮಾಡಿದೆ. ಐಎಸ್ಟಿ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವು ಕಡಿಮೆ-ಗುಣಮಟ್ಟದ ಸೆಕ್ಯುರಿಟಿಗಳನ್ನು ಕ್ಲೋಸ್-ಎಂಡೆಡ್ ಸ್ಕೀಮ್ಗಳಿಂದ ಓಪನ್-ಎಂಡೆಡ್ ಸ್ಕೀಮ್ಗಳಿಗೆ ವರ್ಗಾಯಿಸಲಾಗಿದೆ.

ಈ ಸ್ವಾಪ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ. ನಿರ್ದಿಷ್ಟವಾಗಿ ಕೆಲವು ಕ್ಲೋಸ್-ಎಂಡೆಡ್ ಸ್ಕೀಮ್ಗಳ ಹೂಡಿಕೆದಾರರ ವೆಚ್ಚದಲ್ಲಿ ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕ್ಲೋಸ್-ಎಂಡೆಡ್ ಸ್ಕೀಮ್ಗಳ ಹೂಡಿಕೆದಾರರು, ಓಪನ್-ಎಂಡೆಡ್ ಸ್ಕೀಮ್ಗಳಿಗಿಂತ ಭಿನ್ನವಾಗಿ, ಯೋಜನೆಯ ಮುಕ್ತಾಯದ ಮೊದಲು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ.
ಸಂಸ್ಥೆಯ ಮೇಲೆ ಇರುವ ಆರೋಪವೇನು?
"ಪರಿಶೀಲನೆಯ ಅವಧಿಯಲ್ಲಿ ಫಂಡ್ ಮ್ಯಾನೇಜರ್ಗಳು ಮಾಡಿದ ಐಎಸ್ಟಿಗಳು ಕ್ಲೋಸ್-ಎಂಡೆಡ್ ಸ್ಕೀಮ್ ಹೋಲ್ಡರ್ಗಳ ಹಿತಾಸಕ್ತಿಗೆ ಸ್ಪಷ್ಟವಾಗಿ ಪೂರ್ವಾಗ್ರಹಪೀಡಿತವಾಗಿದೆ. ಇಂಟರ್ ಸ್ಕೀಮ್ ವರ್ಗಾವಣೆಗಳು ಕೇವಲ ಎರಡು ಕಡೆಯ ಹೂಡಿಕೆದಾರರಿಗೆ (ಓಪನ್ ಮತ್ತು ಕ್ಲೋಸ್ ಎಂಡೆಡ್ ಸ್ಕೀಮ್) ಅನ್ಯಾಯವಾಗಿದೆ. ಎರಡೂ ಚಂದಾದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿಲ್ಲ," ಎಂದು ಸೆಬಿಯು ಹೇಳಿದೆ.
ಅವರು ಮ್ಯೂಚುವಲ್ ಫಂಡ್ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿರುವ ಸೆಬಿಯು ಪಿಜಿಐಎಂ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗೆ 25 ಲಕ್ಷ, ಮೆನನ್ಗೆ 5 ಲಕ್ಷ ಮತ್ತು ರಾಮಕೃಷ್ಣನ್, ಪಾಲ್ ಮತ್ತು ಸೂರಿಗೆ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಆಗಸ್ಟ್ 2018 ರಿಂದ ಫೆಬ್ರವರಿ 2019 ರ ಅವಧಿಗೆ ಪಿಜಿಐಎಂ ಇಂಡಿಯಾ ಮ್ಯೂಚುಯಲ್ ಫಂಡ್ನ ಎಲ್ಲಾ ಯೋಜನೆಗಳ ಪರಿಶೀಲನೆ ಬಳಿಕ ಸೆಬಿಯು ಈ ಆದೇಶವನ್ನು ನೀಡಿದೆ. ಕ್ಲೋಸ್-ಎಂಡೆಡ್ ಸ್ಕೀಮ್ಗಳಲ್ಲಿ ಒಟ್ಟು ಸ್ವತ್ತುಗಳು ಮತ್ತು ಎನ್ಎವಿಯು ಸ್ಕೀಮ್ ಮುಚ್ಚುವ ಅವಧಿಗೆ ಮಾತ್ರ ಪ್ರಸ್ತುತವಾಗುತ್ತದೆ. ಆದರೆ ಆದರೆ ಚಂದಾದಾರರು ಯಾವುದೇ ಸಮಯದಲ್ಲಿ ಸ್ಕೀಮ್ ಕ್ಲೋಸ್ ಮಾಡುವ ವೇಳೆ ಯೋಜನೆಯ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ತಿಳಿದಿರಬೇಕಾಗುತ್ತದೆ.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications