ಜ್ಯುವೆಲ್ಲರಿಯಿಂದ ಉಪ್ಪಿನ ತನಕ 11,100 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸಾಮ್ರಾಜ್ಯ ಇದೆ ಟಾಟಾ ಸಮೂಹದ್ದು. ಆಗಸ್ಟ್ 26ನೇ ತಾರೀಕಿಗೆ ಒಂದು ಅಮೆರಿಕನ್ ಡಾಲರ್ ಗೆ ಭಾರತದ ರುಪಾಯಿ ಮೌಲ್ಯ 74.234 ಇದೆ. ಅಂದರೆ 8,23,997.4 ಕೋಟಿ ರುಪಾಯಿಯ ಸಾಮ್ರಾಜ್ಯ ಟಾಟಾ ಸಮೂಹದ್ದು. ಇದೀಗ ದೊಡ್ಡ ಡಿಜಿಟಲ್ ಬದಲಾವಣೆಯ ಹೆಜ್ಜೆ ಇಡುವುದರಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಟಾಟಾದಿಂದ ಎಲ್ಲ ಗ್ರಾಹಕ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಂದು ಕಡೆಗೆ ದೊರಕುವಂತೆ ಮಾಡಲು ಇ ಕಾಮರ್ಸ್ ಅಪ್ಲಿಕೇಷನ್ ರೂಪಿಸುತ್ತಿದೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಗ್ರಾಹಕರಿಗಾಗಿ ಈಗ ಇರುವ ಎಲ್ಲ ಆನ್ ಲೈನ್ ಆಸ್ತಿಗಳನ್ನು ಒಗ್ಗೂಡಿಸಿಕೊಂಡು ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭಕ್ಕೆ ಆರಂಭಿಸುವ ನಿರೀಕ್ಷೆ ಇದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.
2023ರ ಹೊತ್ತಿಗೆ ಇಂಟರ್ ನೆಟ್ ಅನ್ನು ಬಳಸುವವರ ಸಂಖ್ಯೆ 90 ಕೋಟಿ ತಲುಪುತ್ತದೆ ಎಂಬ ಅಂದಾಜು ಮಾಡಿದೆ ಸಿಸ್ಕೋ ಸಿಸ್ಟಮ್ಸ್ ಕಂಪೆನಿ. ಇನ್ನು ಇಂಟರ್ ನೆಟ್ ಬಳಸುವವರ ಪೈಕಿ ಎಲ್ಲರೂ ಸ್ಮಾರ್ಟ್ ಫೋನ್ ಬಳಸಿ ಖರೀದಿ ಹಾಗೂ ಪಾವತಿ, ಮಾಹಿತಿಯನ್ನು ನೋಡುವುದಕ್ಕೆ ಬಳಸುವವರು ಎನ್ನಲಾಗಿದೆ. ಆದ್ದರಿಂದ ಮುಂಬೈ ಮೂಲದ ಟಾಟಾ ಸಮೂಹವು ಆನ್ ಲೈನ್ ನಲ್ಲಿ ತನ್ನ ಇರುವಿಕೆ ಪ್ರಮುಖವಾಗಿ ಇರಬೇಕು ಎಂಬ ಪ್ರಯತ್ನ ಶುರು ಮಾಡಿದೆ.

ಅಮೆಜಾನ್, ಫ್ಲಿಪ್ ಕಾರ್ಟ್, ಇನ್ನೇನು ಈ ವ್ಯವಹಾರಕ್ಕೆ ಹೊಸದಾಗಿ ಕಾಲಿರಿಸಿರುವ ರಿಲಯನ್ಸ್ ಜತೆಗೆ ಸೆಣೆಸಲು ಸಿದ್ಧತೆ ನಡೆಸುತ್ತಿದೆ. ಟಾಟಾ ಡಿಜಿಟಲ್ ಸಿಇಒ ಪ್ರತೀಕ್ ಪಾಲ್ ಅವರು ಅಪ್ಲಿಕೇಷನ್ ರೂಪಿಸುವ ಹೊಣೆ ಹೊತ್ತಿದ್ದಾರೆ. ಅವರಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ ಮೂರು ದಶಕದ ಅನುಭವ ಇದೆ. ಡಿಜಿಟಲ್ ಗೆ ಬದಲಾದ ವಿಶ್ವದ ಅತಿದೊಡ್ಡ ಕಂಪೆನಿಗಳಿಗೆ ಸಹಾಯ ಮಾಡಿದ ಕೀರ್ತಿ ಅವರದು. ಅದರಲ್ಲಿ ವಾಲ್ ಮಾರ್ಟ್, ಟಾರ್ಗೆಟ್, ಬೆಸ್ಟ್ ಬೈ ಸೇರಿದಂತೆ ಇತರ ಕಂಪೆನಿಗಳೂ ಇವೆ.
ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಟಾಟಾ ಸಮೂಹ ನಿರಾಕರಿಸಿದೆ. ಟಾಟಾ ಸಮೂಹದಿಂದ ವಿಲಾಸಿ ಹೋಟೆಲ್ ಗಳು, ಏರ್ ಲೈನ್ಸ್, ಇನ್ಷೂರೆನ್ಸ್, ಡಿಪಾರ್ಟ್ ಮೆಂಟಲ್ ಸ್ಟೋರ್ಸ್ ಹೀಗೆ ನಾನಾ ಬಗೆಯ ವ್ಯವಹಾರಗಳಲ್ಲಿ ತೊಡಗಿಕೊಳ್ಳಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications