ದೇಶದ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಜುಲೈ 8ರಂದು ತನ್ನ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದೆ. ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಹೊರ ಬರದಿದ್ದರೂ ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ನಿವ್ವಳ ಲಾಭ ಏರಿಕೆ ಕಂಡಿದೆ. ಜೂನ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭ 9,478 ಕೋಟಿ ರು ದಾಟಿದ್ದು, ಶೇ 5.21ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ 9,008 ಕೋಟಿ ರು ಲಾಭ ಬಂದಿತ್ತು.
ತ್ರೈಮಾಸಿಕದಲ್ಲಿ ಆದಾಯ ಶೇ 4.28ರಷ್ಟು ಏರಿಕೆ ಕಂಡಿದ್ದು, ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಶೇ 16.17ರಷ್ಟು ಏರಿಕೆ ಕಂಡು 52,758 ಕೋಟಿ ರು ದಾಟಿದೆ.
ಟಿಸಿಎಸ್ ಸಂಸ್ಥೆ ತ್ರೈಮಾಸಿಕ ವರದಿ ಬೆನ್ನಲ್ಲೇ ತನ್ನ ಷೇರುದಾರರಿಗೆ 8 ರು ಪ್ರತಿಷೇರಿನಂತೆ ಡಿವಿಡೆಂಡ್ ಘೋಷಿಸಿದೆ. ಆಗಸ್ಟ್ 3, 2022ರಲ್ಲಿ ಮೊತ್ತ ತಲುಪಲಿದೆ.

ಆಟ್ರಿಷನ್ ದರದ ಚಿಂತೆ
ಇನ್ಫೋಸಿಸ್ ಸಂಸ್ಥೆಯಂತೆ ಟಿಸಿಎಸ್ ಕೂಡಾ ಆಟ್ರಿಷನ್ ದರದ ಬಗ್ಗೆ ಚಿಂತಿಸಬೇಕಾಗಿದೆ. ಕಳೆದ 12 ತಿಂಗಳಲ್ಲಿಆಟ್ರಿಷನ್ ದರ ಶೇ 19.7ರಷ್ಟು ತಲುಪಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 17.4ರಷ್ಟಿತ್ತು. ಕೋವಿಡ್ 19 ನಂತರದ ಕಚೇರಿ ಸಂಸ್ಕೃತಿಗೆ ನಿಧಾನಗತಿಯಿಂದ ಉದ್ಯೋಗಿಗಳು ಒಗ್ಗಿಕೊಳ್ಳುತ್ತಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ 20ರಷ್ಟು ಸಿಬ್ಬಂದಿ ಮಾತ್ರ ವರ್ಕ್ ಫ್ರಂ ಹೋಂ ಸೌಲಭ್ಯ ಬಳಸಿದ್ದಾರೆ. 2023ರ ವೇಳೆಗೆ 6 ಲಕ್ಷ
ಈ ತ್ರೈಮಾಸಿಕದಲ್ಲಿ 8.2 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, ಕಳೆದ ತ್ರೈಮಾಸಿಕದಲ್ಲಿ 11.3 ಬಿಲಿಯನ್ ಡಾಲರ್ ಒಪ್ಪಂದ ಕಂಡಿತ್ತು. 100 ಮಿಲಿಯನ್ ಡಾಲರ್ ಪ್ಲಸ್ ಸ್ತರಕ್ಕೆ 9 ಹಾಗೂ 50 ಮಿಲಿಯನ್ ಡಾಲರ್ ಸ್ತರಕ್ಕೆ 19 ಕ್ಲೈಂಟ್ ಗಳನ್ನು ಟಿಸಿಎಸ್ ಸೇರಿಸಿಕೊಂಡಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications