ತೆರಿಗೆ ಕಟ್ಟಬೇಕಾದಷ್ಟು ವರಮಾನ ಇದ್ದರೂ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡದವರಿಗೆ ಮೂಗುದಾರ ಹಾಕಲು ಮತ್ತು ನಗದು ವ್ಯವಹಾರಗಳಿಗೆ ಕಡಿವಾಣ ಹಾಕುವ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟಿಡಿಎಸ್ ಕಡಿತಗೊಳಿಸಲು ಹಣಕಾಸು ಕಾಯ್ದೆ 2020 ಪರಿಚಯಿಸಲಾಗಿದೆ. ಜುಲೈ 1ನೇ ತಾರೀಕಿನಿಂದ ಇದು ಅನ್ವಯ ಆಗಲಿದೆ.
ಕಳೆದ ಮೂರು ಹಣಕಾಸು ವರ್ಷದಲ್ಲಿ ಯಾರು ಐಟಿಆರ್ ಫೈಲ್ ಮಾಡಿರುವುದಿಲ್ಲವೋ ಅಂಥವರು ಬ್ಯಾಂಕ್ ನಿಂದ 20 ಲಕ್ಷದಿಂದ 1 ಕೋಟಿಯ ತನಕ ವಿತ್ ಡ್ರಾ ಮಾಡಿದರೆ ಅದಕ್ಕೆ 2 ಪರ್ಸೆಂಟ್ ಟಿಡಿಎಸ್ ಕಟ್ಟಬೇಕು. ಒಂದು ಕೋಟಿ ರುಪಾಯಿ ದಾಟಿದಲ್ಲಿ 5% ದರದಲ್ಲಿ ಟಿಡಿಎಸ್ ಕಡಿತ ಮಾಡಲಾಗುತ್ತದೆ.
2 ಪರ್ಸೆಂಟ್ ಟಿಡಿಎಸ್
ಹಣಕಾಸು ವರ್ಷದಲ್ಲಿ ಒಂದು ಕೋಟಿ ರುಪಾಯಿಗೂ ಹೆಚ್ಚು ವಿತ್ ಡ್ರಾ ಮಾಡಿದಲ್ಲಿ ಐಟಿಆರ್ ಫೈಲ್ ಮಾಡಲಿ ಅಥವಾ ಮಾಡದಿರಲಿ ಟಿಡಿಎಸ್ ಅಂತೂ ಕಟ್ಟಲೇಬೇಕು. 2019ರ ಜುಲೈನಲ್ಲಿ ಸರ್ಕಾರ ಮೊದಲ ಬಾರಿಗೆ ಸೆಕ್ಷನ್ 194N ಅಡಿಯಲ್ಲಿ ಹಣಕಾಸು ವರ್ಷದಲ್ಲಿ 1 ಕೋಟಿ ರುಪಾಯಿಗೂ ಹೆಚ್ಚು ವಿಥ್ ಡ್ರಾ ಮಾಡಿದಲ್ಲಿ 2 ಪರ್ಸೆಂಟ್ ಟಿಡಿಎಸ್ ಪರಿಚಯಿಸಿತು.
ಹೇಗೆ ಅನ್ವಯಿಸುತ್ತದೆ?
ಬ್ಯಾಂಕ್ ಗಳು, ಕೋ ಆಪರೇಟಿವ್ ಬ್ಯಾಂಕ್ ಗಳು ಮತ್ತು ಪೋಸ್ಟ್ ಆಫೀಸ್ ನಲ್ಲಿನ ಎಲ್ಲ ಬಗೆಯ ಖಾತೆಗಳಿಗೂ ಇದು ಅನ್ವಯ ಆಗುತ್ತದೆ. ಒಂದೇ ಬ್ಯಾಂಕ್ ನಲ್ಲಿ ವಿವಿಧ ಖಾತೆಗಳಿದ್ದು, ಎಲ್ಲವೂ ಸೇರಿ ಅಥವಾ ಯಾವುದಾದರೂ ಒಂದರಲ್ಲಿ ಮಿತಿಯನ್ನು ದಾಟಿದರೂ ಟಿಡಿಎಸ್ ಅನ್ವಯಿಸುತ್ತದೆ. ಆದರೆ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಖಾತೆಗಳಿದ್ದಲ್ಲಿ ಮಿತಿಯು ಪ್ರತ್ಯೇಕವಾಗಿ ಅನ್ವಯಿಸುತ್ತದೆ.
ಐಟಿಆರ್ ಫೈಲ್ ಆಗಿದೆಯಾ ಇಲ್ಲವಾ?
ಬ್ಯಾಂಕ್ ಗಳು ನಗದು ವಿಥ್ ಡ್ರಾ ಮೇಲೆ ನಿಗಾ ಇಟ್ಟಿರಬೇಕು. ಒಂದು ಸಲ ಆ ಮಿತಿಯನ್ನು ದಾಟಿದ ಮೇಲೆ ಟಿಡಿಎಸ್ ಕಡಿತಗೊಳಿಸಬೇಕು. ಬ್ಯಾಂಕ್ ಗಳು ಕಳೆದ ಮೂರು ವರ್ಷದ ಅಥವಾ ಮೂರರ ಪೈಕಿ ಒಂದು ವರ್ಷದಲ್ಲಿ ರಿಟರ್ನ್ ಫೈಲ್ ಮಾಡಿದ್ದಾರಾ ಎಂದು ಜನರನ್ನು ವಿಚಾರಿಸುತ್ತಿದೆ. ಇದರಿಂದ ಬ್ಯಾಂಕ್ ಗಳಿಗೆ ಖಾತೆದಾರರು ಐಟಿಆರ್ ಫೈಲ್ ಮಾಡಿದ್ದಾರಾ ಇಲ್ಲವಾ ಎಂಬುದು ತಿಳಿಯುತ್ತದೆ ಎಂದು ತೆರಿಗೆ ಅಧಿಕಾರಿ ತಿಳಿಸಿದ್ದಾರೆ.
ಡಿಜಿಟಲ್ ಪಾವತಿಗೆ ಪ್ರೋತ್ಸಾಹ
ನಗದು ವ್ಯವಹಾರ ಕಡಿಮೆ ಮಾಡಬೇಕು ಹಾಗೂ ಡಿಜಿಟಲ್ ಪಾವತಿ ಹೆಚ್ಚು ಮಾಡಬೇಕು ಎಂಬುದು ಉದ್ದೇಶ. ದೊಡ್ಡ ಮೊತ್ತದ ನಗದು ವಿಥ್ ಡ್ರಾ ವರ್ಷಕ್ಕೆ 100 ಲಕ್ಷ/ 20 ಲಕ್ಷ ರುಪಾಯಿಗೆ ಮಾತ್ರ ಅನ್ವಯ ಆಗುತ್ತದೆ. ಟಿಡಿಎಸ್ ಕಡಿತ ಆಗಬಾರದು ಅಂದರೆ ಖಾತೆದಾರರು ಡಿಜಿಟಲ್ ಪಾವತಿ ಅಥವಾ ಚೆಕ್ ಮೂಲಕ ನೀಡಬೇಕು ಎನ್ನುತ್ತಾರೆ ತಜ್ಞರು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications