ಆ ಒಂದು ಸಾವಿರ ಮಂದಿ ಅದೃಷ್ಟಶಾಲಿಗಳು ಯಾರು ಎಂದು ತಿಳಿದುಕೊಳ್ಳಲು ನಲವತ್ತು ಲಕ್ಷಕ್ಕೂ ಹೆಚ್ಚು ಮಂದಿ ಕಾಯುತ್ತಿದ್ದಾರೆ. ಅಂದ ಹಾಗೆ ಈ ನಲವತ್ತು ಲಕ್ಷ ಜನ ಯಾರು ಅಂತೀರಾ? ಇವರೆಲ್ಲ ಜಪಾನ್ ನ ಶತ ಕೋಟ್ಯಧಿಪತಿ ಯುಸಕು ಮೆಝವಾ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದವರು. ಈ ಪುಣ್ಯಾತ್ಮ ಒಂದು ಘೋಷಣೆ ಮಾಡಿದ್ದಾರೆ: ಆಯ್ದ ಸಾವಿರ ಮಂದಿ ಅದೃಷ್ಟಶಾಲಿಗಳಿಗೆ ಒಂಬತ್ತು ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಹಂಚುತ್ತಾರಂತೆ.
ಭಾರತೀಯ ರುಪಾಯಿಗಳಲ್ಲಿ ಹೇಳಬೇಕು ಅಂದರೆ, ಅರವತ್ನಾಲ್ಕು ಕೋಟಿ ರುಪಾಯಿ. ಇಷ್ಟು ಮೊತ್ತವನ್ನು ಆಯ್ದ ಸಾವಿರ ಮಂದಿಗೆ ಹಂಚಿ, ಅವರ ಬದುಕಿನಲ್ಲಿ ಹಣವು ಸಂತೋಷ ತರಬಹುದಾ ಎಂದು ನೋಡಲು ಬಯಸುತ್ತಾರಂತೆ ಯುಸಕು. ಹೊಸ ವರ್ಷದ ಹಿಂದಿನ ಯುಸಕು ಘೋಷಣೆ ಮಾಡಿದರು, ಟ್ವಿಟ್ಟರ್ ಬಳಕೆದಾರರಿಗೆ ಒಂದು ಬಿಲಿಯನ್ ಯೆನ್ ಹಂಚುವುದಾಗಿ ತಿಳಿಸಿದರು. ಹಣವು ಅವರ ಸಂತೋಷವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ನೋಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದರು.

ಈ ಅದೃಷ್ಟದಾಟದಲ್ಲಿ ಭಾಗವಹಿಸಲು ಬಯಸುವವರು ಮಾಡಬೇಕಾಗಿದ್ದದ್ದು ಇಷ್ಟೇ: ಜನವರಿ ಏಳನೇ ತಾರೀಕಿನ ಮಧ್ಯರಾತ್ರಿಗೆ ಮುನ್ನ ಯುಸಕು ಟ್ವೀಟ್ ಅನ್ನು ರೀಟ್ವೀಟ್ ಮಾಡಬೇಕಿತ್ತು. ಅಂದ ಹಾಗೆ ಸಾವಿರ ಅದೃಷ್ಟಶಾಲಿಗಳಿಗೆ ತಲಾ ಒಂದು ಮಿಲಿಯನ್ ಯೆನ್ ದೊರೆಯುತ್ತದೆ.
ಲಾಟರಿ ಮೂಲಕ ವಿಜಯಿ ಯಾರು ಅಂತ ಆರಿಸಲಾಗುತ್ತದೆ. ಯುಸಕು ಸ್ವತಃ ಮೆಸೇಜ್ ಮಾಡಿ, ಎರಡ್ಮೂರು ದಿನದೊಳಗೆ ವಿಜಯಿಗಳಿಗೆ ಮಾಹಿತಿ ನೀಡುತ್ತಾರೆ ಎಂದು ಸಿಎನ್ ಎನ್ ವರದಿ ಮಾಡಿದೆ. ಕಳೆದ ವರ್ಷದ ಜನವರಿಯಲ್ಲಿ ಇದೇ ರೀತಿ ನೂರು ಮಂದಿ ಟ್ವಿಟ್ಟರ್ ಬಳಕೆದಾರರಿಗೆ ತಲಾ ಒಂದು ಮಿಲಿಯನ್ ವಿತರಿಸುವುದಾಗಿ ಹೇಳಿದ್ದರು. ಆಗ ಅವರ ಟ್ಬೀಟ್ 46.8 ಲಕ್ಷ ಬಾರಿ ರೀಟ್ವೀಟ್ ಆಗಿತ್ತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications