"ಪಾರದರ್ಶಕ ತೆರಿಗೆ- ಪ್ರಾಮಾಣಿಕ ತೆರಿಗೆದಾರರಿಗೆ ಗೌರವ" ಪ್ಲಾಟ್ ಫಾರ್ಮ್ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಈ ಹೊಸ ಪ್ಲಾಟ್ ಫಾರ್ಮ್ ನಲ್ಲಿನ ಮುಖ್ಯ ಫೀಚರ್ ಅಂದರೆ, ಮುಖರಹಿತವಾದ (ಫೇಸ್ ಲೆಸ್) ಅಸೆಸ್ ಮೆಂಟ್, ಮುಖರಹಿತ ಅರ್ಜಿ. ಇನ್ನು ತೆರಿಗೆ ಪದ್ಧತಿಯನ್ನು ಜನಕೇಂದ್ರಿತ ಹಾಗೂ ಜನಸ್ನೇಹಿಯಾಗಿ ಮಾಡಬೇಕು ಎಂಬುದು ಉದ್ದೇಶ ಎಂದರು.
ನೇರ ತೆರಿಗೆ ಸುಧಾರಣೆಯ ಮುಂದಿನ ಹಂತವನ್ನು ಈ ಹೊಸ ಪ್ಲಾಟ್ ಫಾರ್ಮ್ ತೆರೆದಿಡುತ್ತದೆ. ಕೊರೊನಾದಿಂದ ಬಾಧಿತವಾಗಿರುವ ದೇಶದ ಆರ್ಥಿಕತೆಯನ್ನು ಮತ್ತೆ ಕಟ್ಟಬೇಕಿದೆ. ಆದ್ದರಿಂದ ನಿಯಮಾವಳಿಗಳನ್ನು ಸರಳಗೊಳಿಸಿ, ಪ್ರಾಮಾಣಿಕ ತೆರಿಗೆದಾರರಿಗೆ ಪ್ರತಿಫಲ ದೊರೆಯುವಂತೆ ಮಾಡುವುದರ ಕಡೆಗೆ ನಮ್ಮ ಗಮನ ಇದೆ ಎಂದು ಮೋದಿ ಹೇಳಿದರು.
ಈ ಹಿಂದೆ ನಮ್ಮ ಗಮನ ಇದ್ದದ್ದು ಎಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲವೋ ಅಲ್ಲಿ ಬ್ಯಾಂಕಿಂಗ್ ತರುವುದು, ಅಭದ್ರತೆ ಇರುವೆಡೆ ಭದ್ರತೆ ತರುವುದು, ಹಣಕಾಸು ಅಗತ್ಯ ಇರುವವರಿಗೆ ಅದನ್ನು ನೀಡುವುದಾಗಿತ್ತು. ಈ ದಿನ ನಾವು ಪ್ರಾಮಾಣಿಕರನ್ನು ಗೌರವಿಸುವುದಕ್ಕೆ ಆರಂಭಿಸಿದ್ದೇವೆ ಎಂದು ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ತಿಳಿಸಿದರು.

ಎಲ್ಲಿ ಸಂಕೀರ್ಣತೆ ಇರುತ್ತದೋ ಅಲ್ಲಿನ ನಿಯಮಾವಳಿಗಳಲ್ಲಿ ಸಮಸ್ಯೆ ಇರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ತೆರಿಗೆದಾರರ ಸಬಲೀಕರಣ, ಪಾರದರ್ಶಕ ವ್ಯವಸ್ಥೆ ಒದಗಿಸುವುದು ಹಾಗೂ ಪ್ರಾಮಾಣಿಕರನ್ನು ಗೌರವಿಸುವುದು ಸರ್ಕಾರದ ಉದ್ದೇಶ. ಸಿಬಿಡಿಟಿಯಿಂದ ಚೌಕಟ್ಟು ರೂಪಿಸಲಾಗಿದೆ. ಆ ಮೂಲಕ ಪಾರದರ್ಶಕವಾದ ವ್ಯವಸ್ಥೆ, ದಕ್ಷ ಹಾಗೂ ಉತ್ತರದಾಯಿತ್ವ ಇರುವಂತೆ ನೋಡಿಕೊಳ್ಳಲಾಗುತ್ತದೆ. ಹೊಸ ಪ್ಲಾಟ್ ಫಾರ್ಮ್ ನಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಹಾಗೂ ಡೇಟಾ ಅನಲಿಟಿಕ್ಸ್ ಬಳಸಲಾಗುತ್ತದೆ ಎಂದರು.
ಫೇಸ್ ಲೆಸ್ ಅಸೆಸ್ ಮೆಂಟ್ ಹಾಗೂ ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಫೇಸ್ ಲೆಸ್ ಅಸೆಸ್ ಮೆಂಟ್ ಭಾರತದಾದ್ಯಂತ ಸೆಪ್ಟೆಂಬರ್ 25ರಿಂದ ಲಭ್ಯವಾಗಲಿದೆ.
More From GoodReturns

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications