ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಅದರ 'ಗೋಲ್ಡನ್' ವೀಸಾ ನಿಯಮವನ್ನು ವಿಸ್ತರಣೆ ಮಾಡಲಾಗುವುದು- ಗಲ್ಫ್ ದೇಶದಲ್ಲಿ ಹತ್ತು ವರ್ಷಗಳ ಕಾಲ ನಿವಾಸಿಗಳಾಗಬಹುದು. ಕೆಲವು ವೃತ್ತಿಪರರಿಗೆ, ವಿಶಿಷ್ಟ ಪದವಿ ಹೊಂದಿದವರಿಗೆ ಮತ್ತು ಇತರರಿಗೆ ಈ ಅನುಕೂಲ ದೊರೆಯಲಿದೆ ಎಂದು ಯುಎಇ ಉಪಾಧ್ಯಕ್ಷ ಭಾನುವಾರ ಹೇಳಿದ್ದಾರೆ.
ವಿದೇಶಿಗರು ಯುಎಇಯಲ್ಲಿ ಸಾಮಾನ್ಯವಾಗಿ ನವೀಕರಿಸುವಂಥ ವೀಸಾವನ್ನು ಕೆಲ ವರ್ಷಗಳ ಅವಧಿಗೆ ಹೊಂದಿರುತ್ತಾರೆ. ಅದು ಉದ್ಯೋಗಕ್ಕೆ ಹೊಂದಿಕೊಂಡಂತೆ ಇರುತ್ತದೆ. ಕಳೆದ ಕೆಲವು ವರ್ಷಗಳಿದ ಸರ್ಕಾರವು ವೀಸಾ ನಿಯಮವನ್ನು ಸಡಿಲಗೊಳಿಸಿದೆ. ಕೆಲವು ಬಗೆಯ ಹೂಡಿಕೆದಾರರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ದೀರ್ಘಾವಧಿಯ ವಾಸಕ್ಕೆ ಅವಕಾಶ ನೀಡುತ್ತಿದೆ.
ಡಾಕ್ಟರೇಟ್ ಪದವೀಧರರು, ವೈದ್ಯಕೀಯ ಪದವೀಧರರು, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್, ಎಲೆಕ್ಟ್ರಿಕಲ್ ಮತ್ತು ಬಯೋಟೆಕ್ನಾಲಜಿ ಎಂಜಿನಿಯರ್ ಗಳು ಅರ್ಹರು ಎಂದು ಯುಎಇ ಉಪಾಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಿಗ್ ಡೇಟಾ ಮತ್ತು ಇತರ ವಿಶೇಷ ಪದವಿಗಳನ್ನು ಪಡೆದವರು ಹಾಗೂ ಯುಎಇಯಲ್ಲಿ ಪ್ರೌಢ ಶಾಲೆಗಳಲ್ಲಿ ಓದುತ್ತಾ ದೇಶಕ್ಕೇ ಉನ್ನತ ಶ್ರೇಯಾಂಕ ಪಡೆದವರು, ಕೆಲ ವಿ.ವಿ. ವಿದ್ಯಾರ್ಥಿಗಳಾಗಿದ್ದು ಜಿಪಿಎ 3.8 ಅಥವಾ ಅದಕ್ಕಿಂತ ಹೆಚ್ಚು ಇರುವವರು ಸಹ ಅರ್ಹರು.
2018ರಲ್ಲಿ ಮೊದಲ ಬಾರಿಗೆ ದೀರ್ಘಾವಧಿ ವೀಸಾವನ್ನು ಘೋಷಣೆ ಮಾಡಿದ ನಂತರ, ಯುಎಇಯಿಂದ 2019ರಲ್ಲಿ 5 ಹಾಗೂ 10 ವರ್ಷದ ನವೀಕರಿಸುವಂಥ ವೀಸಾ ವಿತರಣೆ ಆರಂಭಿಸಲಾಯಿತು. ಕೆಲವು ವಿದೇಶೀ ಹೂಡಿಕೆದಾರರು, ಉದ್ಯಮಿಗಳು, ಮುಖ್ಯಾಧಿಕಾರಿಗಳು, ವಿಜ್ಞಾನಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಆರಂಭಿಸಿತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications