ಪಾಕಿಸ್ತಾನ ಸೇರಿದಂತೆ ಇತರ ಹನ್ನೊಂದು ದೇಶಗಳ ಸಂದರ್ಶಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಬುಧವಾರದಿಂದ ತಾತ್ಕಾಲಿಕವಾಗಿ ವೀಸಾ ಅಮಾನತು ಮಾಡಿರುವುದಾಗಿ ವಿದೇಶಾಂಗ ಕಚೇರಿ ತಿಳಿಸಿದೆ. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ವಿದೇಶಾಂಗ ಕಚೇರಿ ವಕ್ತಾರ ಝಾಹೀದ್ ಹಫೀಜ್ ಚೌಧುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ವಿತರಣೆ ಆಗಿರುವ ವೀಸಾಗಳಿಗೆ ಈ ಅಮಾನತು ಅನ್ವಯ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಈಗಿನ ನಡೆಯಿಂದ ಎಷ್ಟು ಬಗೆಯ ವೀಸಾಗಳ ಮೇಲೆ ಪರಿಣಾಮ ಆಗಲಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪ್ರವಾಸಿ, ವಾಣಿಜ್ಯ, ವಿದ್ಯಾರ್ಥಿ ಸೇರಿ ವಿವಿಧ ಬಗೆಯ ವೀಸಾಗಳನ್ನು ಯುಎಇಯಿಂದ ವಿತರಣೆ ಮಾಡಲಾಗುತ್ತದೆ.
ಪಾಕಿಸ್ತಾನವನ್ನು ಹೊರತುಪಡಿಸಿದರೆ ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೋಮಾಲಿಯಾ, ಲಿಬಿಯಾ, ಕೀನ್ಯಾ, ಅಫ್ಗಾನಿಸ್ತಾನಕ್ಕೂ ಈಗಿನ ವೀಸಾ ಅಮಾನತಿನ ಪರಿಣಾಮ ಆಗುತ್ತದೆ. ಈ ಹಿಂದೆ ಜೂನ್ ನಲ್ಲಿ ಕೊರೊನಾ ಪ್ರಕರಣಗಳು ವಿಪರೀತ ಹೆಚ್ಚಾಗಿದ್ದಾಗ ಜುಲೈ ತನಕ ತಾತ್ಕಾಲಿಕವಾಗಿ ಪಾಕಿಸ್ತಾನ ಪ್ರಯಾಣಿಕರಿಗೆ ವೀಸಾ ಸೇವೆ ಅಮಾನತು ಮಾಡಲಾಗಿತ್ತು.

ಹಾಂಕಾಂಗ್ ನಲ್ಲಿ ಎಮಿರೇಟ್ಸ್ ವಿಮಾನ ಏರಿದ ಮೂವತ್ತು ಪಾಕಿಸ್ತಾನಿಯರಿಗೆ ಕೊರೊನಾ ಪಾಸಿಟಿವ್ ಎಂದು ಬಂದ ಮೇಲೆ ಈ ನಿರ್ಧಾರ ಬಂದಿದೆ. ಅಂದ ಹಾಗೆ ಕಳೆದ ಆಗಸ್ಟ್ ನಲ್ಲಿ ಕುವೈತ್ ವಿಮಾನ ಯಾನವು ಪಾಕಿಸ್ತಾನ ಮತ್ತು ಮೂವತ್ತು ದೇಶಕ್ಕೆ 'ಹೆಚ್ಚು ಅಪಾಯಕಾರಿ' ಎಂದು ಪರಿಗಣಿಸಿ, ವಾಣಿಜ್ಯ ವಿಮಾನಗಳನ್ನು ನಿಷೇಧಿಸಿತ್ತು.
ಅಕ್ಟೋಬರ್ ಕೊನೆಯ ಭಾಗದಿಂದ ಕೊರೊನಾ ಸೋಂಕಿತ ಪ್ರಕರಣಗಳು ಪಾಕಿಸ್ತಾನದಲ್ಲಿ ಜಾಸ್ತಿ ಆಗುತ್ತಿದೆ. ಎರಡನೇ ಬಾರಿಗೆ ಕೊರೊನಾ ಅಲೆ ಪಾಕ್ ನಲ್ಲಿ ಎದ್ದಿದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಕರಾಚಿ, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್ ಹಾಗೂ ಹೈದರಾಬಾದ್ ನಂಥ ಪ್ರಮುಖ ನಗರಗಳಲ್ಲಿ ಸೋಂಕು ಪ್ರಕರಣ ವಿಪರೀತ ಹೆಚ್ಚಾಗಿದೆ.
ಕೊರೊನಾ ತಡೆಯಬೇಕಾದ ಇಂಥ ಸನ್ನಿವೇಶದಲ್ಲಿ ದೇಶದ ಜನರು ಒಗ್ಗಟ್ಟಾಗಿ ಇರಬೇಕು ಎಂದು ಈಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಈ ತನಕ ಪಾಕಿಸ್ತಾನದಲ್ಲಿ 3,63,380 ಸೋಂಕಿನ ಪ್ರಕರಣಗಳಿದ್ದು, 7,230 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications