ಶತಕೋಟ್ಯಧಿಪತಿ ಉದಯ್ ಕೊಟಕ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿನ 2.83 ಪರ್ಸೆಂಟ್ ಷೇರಿನ ಪಾಲನ್ನು ಮಂಗಳವಾರ (ಜೂನ್ 2, 2020) ಮಾರಾಟ ಮಾಡಿದ್ದಾರೆ. ಆ ಮೂಲಕ ಅವರ ಪಾಲಿನ ಷೇರು 28.93 ಪರ್ಸೆಂಟ್ ನಿಂದ 26.1 ಪರ್ಸೆಂಟ್ ಗೆ ಇಳಿಕೆ ಆಗಿದೆ. ಆ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷ ಒಪ್ಪಿಕೊಂಡ ಪರ್ಸಂಟೇಜ್ ನ ಹತ್ತಿರಕ್ಕೆ ತಲುಪಿದಂತಾಗಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ನ 5.5 ಕೋಟಿ ಷೇರನ್ನು ತಲಾ 1240 ರುಪಾಯಿಯಂತೆ ಮಾರಾಟ ಮಾಡಿದ್ದು, 6,940 ಕೋಟಿ ರುಪಾಯಿ ಸಂಗ್ರಹಿಸಿದ್ದಾರೆ ಉದಯ್ ಕೊಟಕ್. ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಪ್ಲೇಸ್ ಮೆಂಟ್ (QIP) ಮೂಲಕ ಷೇರಿಗೆ ತಲಾ 1,145 ರುಪಾಯಿಯಂತೆ ಮಾರಾಟ ಮಾಡಿ, ಒಂದು ದಿನದ ಹಿಂದಷ್ಟೇ ಕೊಟಕ್ ಮಹೀಂದ್ರಾ ಬ್ಯಾಂಕ್ 7442 ಕೋಟಿ ರುಪಾಯಿ ಸಂಗ್ರಹಿಸಿದೆ.
ಇನ್ವೆಸ್ಕೊ ಒಪ್ಪೆನ್ ಹೈಮರ್ 52 ಲಕ್ಷ ಷೇರು ಖರೀದಿಸಿದ್ದರೆ, ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್ ಮೆಂಟ್ ಬೋರ್ಡ್ 46 ಲಕ್ಷ ಷೇರು ಖರೀದಿಸಿದ್ದರೆ, ಐಸಿಐಸಿಐ ಮ್ಯೂಚುವಲ್ ಫಂಡ್ 41 ಲಕ್ಷ ಷೇರು ಖರೀದಿ ಮಾಡಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಡಿಸೆಂಬರ್ 31, 2018ರಲ್ಲಿ ಪ್ರವರ್ತಕರ ಷೇರಿನ ಪಾಲು ಒಟ್ಟು ಪೇಯ್ದ್ ಅಪ್ ಬಂಡವಾಳದ 20 ಪರ್ಸೆಂಟ್ ಗೆ ಮಿತಿಗೊಳಿಸಲು ತಿಳಿಸಲಾಗಿತ್ತು. ಆ ನಂತರ ಮಾರ್ಚ್ 31, 2020ಕ್ಕೆ 15 ಪರ್ಸೆಂಟ್ ಗೆ ಮಿತಿಗೊಳಿಸುವಂತೆ ಸೂಚಿಸಲಾಗಿತ್ತು.
ಆದರೆ, ಸಾಲಗಾರರು ಹೊಸ ಪ್ರಸ್ತಾವ ಮುಂದಿಟ್ಟರು. ಪ್ರವರ್ತಕರ ಪ್ರಮಾಣ 19.70 ಪರ್ಸೆಂಟ್ ಇರಿಸಿಕೊಳ್ಳಲು ಅನುಮತಿ ಕೇಳಿತ್ತು. ಆದರೆ ರಿಸರ್ವ್ ಬ್ಯಾಂಕ್ ಒಪ್ಪಿರಲಿಲ್ಲ. ಈ ವಿಚಾರವಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿತ್ತು.
ಆರ್ ಬಿಐನ ಬ್ಯಾಂಕ್ ಲೈಸೆನ್ಸ್ ನಿಯಮದ ಪ್ರಕಾರ, ಮೂರು ವರ್ಷದಲ್ಲಿ ಪ್ರವರ್ತಕರ ಷೇರಿನ ಪ್ರಮಾಣ 40%, ಹತ್ತು ವರ್ಷಗಳಲ್ಲಿ 20%, ಹದಿನೈದು ವರ್ಷಗಳಲ್ಲಿ 15%ಗೆ ಇಳಿಸಬೇಕು. ಕೊಟಕ್ ಬ್ಯಾಂಕ್ ಕಳೆದ ಫೆಬ್ರವರಿಯಲ್ಲಿ ಕೇಸ್ ಅನ್ನು ವಾಪಸ್ ಪಡೆದಿತ್ತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications