ಮ್ಯೂಚುವಲ್ ಫಂಡ್ ಮ್ಯಾನೇಜರ್ UTI ಅಸೆಟ್ ಮ್ಯಾನೇಜ್ ಮೆಂಟ್ ಕಂಪೆನಿ ಲಿಮಿಟೆಡ್ (UTI AMC) 3000 ಕೋಟಿ ರುಪಾಯಿ ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ) ಯೋಜನೆ ಮಾಡಿದೆ. ಸೆಪ್ಟೆಂಬರ್ 14ನೇ ತಾರೀಕಿನ ವಾರದಲ್ಲಿ ಐಪಿಒ ಆರಂಭಿಸಲಿದೆ. ನಿರ್ದಿಷ್ಟವಾಗಿ ಐಪಿಒ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಲಾಗಿದೆ.
ಈ ಕಂಪೆನಿಯಲ್ಲಿ ಎಲ್ ಐಸಿ, ಎಸ್ ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾ ಪ್ರಮುಖವಾದ ಷೇರಿನ ಪಾಲು ಹೊಂದಿವೆ. ಸೆಬಿ ನಿಯಮಾವಳಿ ಪ್ರಕಾರ, ಈ ವರ್ಷದ ಡಿಸೆಂಬರ್ ಹೊತ್ತಿಗೆ ಷೇರಿನ ಪಾಲನ್ನು 10%ಗೆ ಇಳಿಕೆ ಮಾಡಬೇಕು. ಕಳೆದ ವರ್ಷ ಡಿಸೆಂಬರ್ ನಲ್ಲೇ ಈ ಬಗ್ಗೆ ಆದೇಶ ಹೊರಡಿಸಿ, ಒಂದು ವೇಳೆ 2020ರ ಡಿಸೆಂಬರ್ ನೊಳಗೆ ಷೇರಿನ ಪ್ರಮಾಣ ಇಳಿಸದಿದ್ದಲ್ಲಿ ಹೆಚ್ಚುವರಿ ಮತದಾನದ ಹಕ್ಕನ್ನು ಸ್ಥಗಿತ ಮಾಡುವುದಾಗಿ ತಿಳಿಸಲಾಗಿತ್ತು.
ಎರಡು ಹಂತದಲ್ಲಿ ಬಂಡವಾಳ ಹಿಂತೆಗೆತ
ಎಲ್ ಐಸಿ, ಎಸ್ ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾದಿಂದ ಎರಡು ಹಂತದಲ್ಲಿ ಬಂಡವಾಳ ಹಿಂತೆಗೆದುಕೊಳ್ಳಬೇಕಿತ್ತು. ಎಲ್ಲ ಸಾಂಸ್ಥಿಕ ಷೇರುದಾರರಿಂದ ಪ್ರೋ ರೇಟಾ ಆಧಾರದಲ್ಲಿ 25% ಹಿಂತೆಗೆತ ಹಾಗೂ ಆ ನಂತರ 10.92% ಫಾಲೋ ಆನ್ ಪಬ್ಲಿಕ್ ಆಫರ್ ಮೂಲಕ ಮಾಡಬೇಕಿತ್ತು.
ಟಿ ರೋವ್ ಪ್ರಮುಖ ಷೇರುದಾರ
ಮೊದಲ ಹಂತದಲ್ಲಿ ಮೂರು ಮುಖ್ಯ ಸಂಸ್ಥೆಗಳು ತಲಾ 8.25% ಪಾಲನ್ನು ಮಾರಾಟ ಮಾಡುತ್ತದೆ. ಟಿ ರೋವ್ ಪ್ರೈಸ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಲಾ 3% ಮಾರುತ್ತವೆ. ಅದರಲ್ಲಿ ಟಿ ರೋವ್ ಪ್ರಮುಖ ಷೇರುದಾರ ಆಗಿದ್ದು, UTI AMCಯಲ್ಲಿ 26% ಷೇರಿನ ಪಾಲು ಹೊಂದಿದೆ. ಇನ್ನು ಪಿಎನ್ ಬಿ 18.24% ಪಾಲು ಹೊಂದಿದೆ.
10%ಗಿಂತ ಹೆಚ್ಚಿನ ಪಾಲನ್ನು ಹೊಂದಿರುವಂತಿಲ್ಲ
ಮೂರು ಸಾರ್ವಜನಿಕ ಸ್ವಾಮ್ಯದ ಹಣಕಾಸು ಸಂಸ್ಥೆಗಳು ತಲಾ 18.24% ಪಾಲನ್ನು ಹೊಂದಿವೆ. ಸೆಬಿ ನಿಯಮಾವಳಿ ಪ್ರಕಾರ, ಒಂದು ಸಂಸ್ಥೆಯು ಮತ್ತೊಂದು ಸಂಸ್ಥೆಯ ಮ್ಯೂಚುವಲ್ ಫಂಡ್ ನಲ್ಲಿ 10%ಗಿಂತ ಹೆಚ್ಚಿನ ಪಾಲನ್ನು ಹೊಂದಿರುವಂತಿಲ್ಲ. UTI AMCಯಲ್ಲಿ ಷೇರಿನ ಪಾಲನ್ನು ಇಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ ಐಸಿ ಹಾಗೂ ಬ್ಯಾಂಕ್ ಆಫ್ ಬರೋಡಾಗೆ ಸೆಬಿಯಿಂದ ತಲಾ 10 ಲಕ್ಷ ರುಪಾಯಿ ದಂಡ ವಿಧಿಸಲಾಯಿತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications