ಬೆಂಗಳೂರು: ಕೊರೊನಾ ಲಾಕ್ಡೌನ್ ಪರಿಣಾಮ ಹಲವು ಕಂಪನಿಗಳು ನಷ್ಟ ಅನುಭವಿಸುತ್ತಿದ್ದವು. ಆದರೆ ಟೆಲಿಕಾಂ ಕ್ಷೇತ್ರ ಭಾರೀ ಆದಾಯ ಮಾಡಿಕೊಂಡಿರುವ ಕೆಲ ವರದಿಗಳು ಬಂದಿದ್ದವು. ಆದರೆ ಇದಕ್ಕೆ ವೊಡಾಫೋನ್ ಐಡಿಯಾ ಸಂಸ್ಥೆಯ ಸದ್ಯದ ಪರಿಸ್ಥಿತಿ ವ್ಯತಿರಿಕ್ತವಾಗಿದೆ.
ಹೌದು, ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ, ಮಾರ್ಚ್ 2020 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 73,878 ಕೋಟಿ ರೂ.ಗಳ ನಿವ್ವಳ ನಷ್ಟವನ್ನು ಅನುಭವಿಸಿದೆ ಎಂಬ ವರದಿಗಳು ಬಂದಿವೆ.
ಇದು ಇದುವರೆಗೆ ಭಾರತೀಯ ಟೆಲಿಕಾಂ ಕಂಪನಿಯೊಂದು ಅನುಭವಿಸಿದ ಅತ್ಯಧಿಕ ನಿವ್ವಳ ನಷ್ಟವಾಗಿದೆ ಎನ್ನಲಾಗಿದೆ. ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಕಂಪನಿ ನಡುವಿನ ವಿಲೀನವು ಆಗಸ್ಟ್ 2018 ರಲ್ಲಿ ಜಾರಿಗೆ ಬಂದಿದೆ.
ಒಂದೇ ತ್ರೈಮಾಸಿಕದಲ್ಲಿ 11,643.5 ಕೋಟಿ ರು ನಷ್ಟ
ವೊಡಾಫೋನ್ ಐಡಿಯಾ 11,643.5 ಕೋಟಿ ರು ಮಾರ್ಚ್ ತ್ರೈಮಾಸಿಕದ ನಿವ್ವಳ ನಷ್ಟವನ್ನು ಅನುಭವಿಸಿದೆ. ಈ ನಷ್ಟವು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 4,881.9 ಕೋಟಿ ರುಪಾಯಿ ಇತ್ತು ಮತ್ತು ಹಿಂದಿನ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 6,438.8 ಕೋಟಿ ರು ನಿವ್ವಳ ನಷ್ಟ ಇತ್ತು. 2020 ರ ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷದ ಆರ್ಥಿಕ ಫಲಿತಾಂಶಗಳನ್ನು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.
304 ಮಿಲಿಯನ್ನಿಂದ 291 ಮಿಲಿಯನ್ಗೆ ಇಳಿಕೆ
ಡಿಸೆಂಬರ್ ತ್ರೈಮಾಸಿಕದಿಂದ ಮಾರ್ಚ್ ತ್ರೈಮಾಸಿಕದವರೆಗೆ ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ 304 ಮಿಲಿಯನ್ನಿಂದ 291 ಮಿಲಿಯನ್ಗೆ ಇಳಿಕೆ ಆಗಿದೆ. ಕ್ಯೂ 4 ನಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯ ಕ್ಯೂ 3 ಗಿಂತ ಸುಧಾರಿಸಿದೆ. ಪ್ರಿಪೇಯ್ಡ್ ಸುಂಕ ಹೆಚ್ಚಳದಿಂದ ಇದು ಸಾಧ್ಯವಾಗಿದೆ ಎಂದು ಕಂಪನಿ ತಿಳಿಸಿದೆ.
ಎಜಿಆರ್ ಬಾಕಿ
ಟೆಲಿಕಾಂ ಇಲಾಖೆ (ಡಿಒಟಿ) 2016-17ನೇ ಹಣಕಾಸು ವರ್ಷದವರೆಗೆ ಈ ಸಂಸ್ಥೆಯ ಎಜಿಆರ್ 58,254 ಕೋಟಿ ರೂ ಬಾಕಿ ಎಂದು ಅಂದಾಜಿಸಿದೆ. ಆದರೆ, ಕಂಪನಿಯು 46,000 ಕೋಟಿ ರುಪಾಯಿ ಎಂದು ಹೇಳಿದೆ. ಎಜಿಆರ್ ವಿಷಯದ ಕುರಿತು ಮುಂದಿನ ಸುಪ್ರೀಂ ಕೋರ್ಟ್ ವಿಚಾರಣೆ ಜುಲೈ ಮೂರನೇ ವಾರದಲ್ಲಿ ನಡೆಯಲಿದೆ.
ಸವಾಲುಗಳನ್ನು ಎದುರಿಸುತ್ತಿರುವ ಕಂಪನಿ
ವೊಡಾಫೋನ್ ಐಡಿಯಾದ ಎಂಡಿ ಮತ್ತು ಸಿಇಒ ರವೀಂದರ್ ತಕ್ಕರ್ ಅವರು, ತ್ವರಿತ ನೆಟ್ವರ್ಕ್ ಸೌಲಭ್ಯ, 4 ಜಿ ವ್ಯಾಪ್ತಿ ಮತ್ತು ಸಾಮರ್ಥ್ಯ ವಿಸ್ತರಣೆಯತ್ತ ನಮ್ಮ ಗಮನವು ಗ್ರಾಹಕರ ಸೆಳೆಯುತ್ತಿದೆ. ಏತನ್ಮಧ್ಯೆ, ನಿರ್ಣಾಯಕ ಸವಾಲುಗಳನ್ನು ಎದುರಿಸುತ್ತಿರುವ ಕಂಪನಿಗಾಗಿ ಸಮಗ್ರ ಪರಿಹಾರ ಪ್ಯಾಕೇಜ್ ಕೋರಿ ನಾವು ಸರ್ಕಾರದೊಂದಿಗೆ ಸಕ್ರಿಯವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications