ಖಾಸಗಿ ವಲಯದ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ತನ್ನ ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕೃತ ಬಡ್ಡಿದರ ಮೇ 10, 2022 ರಿಂದ ಜಾರಿಗೆ ತಂದಿದೆ. ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಹೊಸ ದರಗಳು ಶೇಕಡ 3ರಿಂದ ಶೇಕಡ 3.5ಕ್ಕೆ ಏರಿಕೆ ಆಗುತ್ತದೆ.
ಈ ಪರಿಷ್ಕರಣೆಯ ಬಳಿಕ ಬ್ಯಾಂಕ್ ಈಗ 50 ಲಕ್ಷಕ್ಕಿಂತ ಕಡಿಮೆ ಇರುವ ಉಳಿತಾಯ ಖಾತೆಯ ಮೇಲೆ ಶೇಕಡ 3.00, ರೂ 50 ಲಕ್ಷದಿಂದ 2,500 ಕೋಟಿಗಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಯ ಮೇಲೆ ಶೇಕಡ 3.5 ಬಡ್ಡಿದರ ನೀಡುತ್ತದೆ.
ಆಕ್ಸಿಸ್ ಬ್ಯಾಂಕ್ ಪ್ರಕಾರ, ಈ ಉಳಿತಾಯ ಖಾತೆಯ ಬಡ್ಡಿದರಗಳನ್ನು ಪ್ರತಿದಿನ ಲೆಕ್ಕಹಾಕಲಾಗುತ್ತದೆ. ಮುಂದಿನ ತ್ರೈಮಾಸಿಕದ ಮೊದಲ ದಿನದಂದು ಖಾತೆಗೆ ಜಮಾ ಮಾಡಲಾಗುತ್ತದೆ. ಆಕ್ಸಿಸ್ ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. "ಮೇ 10, 2022 ರಿಂದ ಜಾರಿಗೆ ಬರುವಂತೆ, ನಿಮ್ಮ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಪರಿಷ್ಕರಣೆ ಮಾಡಲಾಗಿದೆ," ಎಂದು ಬ್ಯಾಂಕ್ ಉಲ್ಲೇಖ ಮಾಡಿದೆ.

ನೂತನ ಬಡ್ಡಿದರವೆಷ್ಟು?
ರೂ. 50 ಲಕ್ಷಕ್ಕಿಂತ ಕಡಿಮೆ: ಶೇಕಡ 3.00 ಬಡ್ಡಿದರ
ರೂ. 50 ಲಕ್ಷಗಳು ಮತ್ತು ರೂ.10 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 10 ಕೋಟಿ ಮತ್ತು 100 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 100 ಕೋಟಿ ಮತ್ತು 200 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 200 ಕೋಟಿ ಮತ್ತು 2,500 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ಆಕ್ಸಿಸ್ ಬ್ಯಾಂಕ್ನ ಉಳಿತಾಯ ಖಾತೆಯ ಈ ಹಿಂದಿನ ಬಡ್ಡಿ ದರ ಎಷ್ಟಿತ್ತು?
ರೂ 50 ಲಕ್ಷಕ್ಕಿಂತ ಕಡಿಮೆ: ಶೇಕಡ 3.00 ಬಡ್ಡಿದರ
ರೂ. 50 ಲಕ್ಷಗಳು ಮತ್ತು ರೂ.10 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 10 ಕೋಟಿ ಮತ್ತು 100 ಕೋಟಿಗಿಂತ ಕಡಿಮೆ: ರೆಪೋ+ಶೇಕಡ 0.65 (ಶೇಕಡ 3.50 ಬಡ್ಡಿದರ)
ರೂ. 100 ಕೋಟಿ ಮತ್ತು 200 ಕೋಟಿಗಿಂತ ಕಡಿಮೆ: ರೆಪೋ+ಶೇಕಡ 0.50
ರೂ. 200 ಕೋಟಿ ಮತ್ತು 2,500 ಕೋಟಿಗಿಂತ ಕಡಿಮೆ: ರೆಪೋ+ಶೇಕಡ 0.50
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications