ಭಾರತೀಯರು ಚಿನ್ನವನ್ನು ಅಧಿಕವಾಗಿ ಇಷ್ಟ ಪಡುತ್ತಾರೆ. ಭಾರತದಲ್ಲಿ ಚಿನ್ನ ಸಂಸ್ಕೃತಿಯ ಪ್ರತೀಕ, ಶ್ರೀಮಂತಿಕೆಯ ಪ್ರತೀಕ ಕೂಡಾ ಹೌದು. ಈ ಚಿನ್ನವು ನಗದು ಕೊರತೆಯ ಸಮಯದಲ್ಲಿ ತಮ್ಮ ಸಹಾಯಕ್ಕೆ ಬರುವ ಸಂಕಷ್ಟದಲ್ಲಿರುವ ಸ್ನೇಹಿತ ಎಂದು ಭಾರತೀಯರು ನಂಬಿದ್ದಾರೆ. ನಿಜವಾಗಿಯೂ ಕೂಡಾ ಕಷ್ಟದ ಸಮಯದಲ್ಲಿ, ಚಿನ್ನವು ರಕ್ಷಣೆಗೆ ಬರುತ್ತದೆ. ಕೇಂದ್ರ ಸರ್ಕಾರ ಚಿನ್ನದ ಮೇಲೆ ಹೂಡಿಕೆಯನ್ನು ಬೆಂಬಲಿಸುತ್ತಿದ್ದು, ಕೇಂದ್ರ ಬಜೆಟ್ 2022ರಲ್ಲೂ ಚಿನ್ನದ ಮೇಲಿನ ಹೂಡಿಕೆ, ಆಮದು ಮೇಲಿನ ಸುಂಕ ಇಳಿಕೆಯನ್ನು ಗ್ರಾಹಕರು ಬಯಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಬ್ಯಾಂಕುಗಳು ಸಾಲದ ಮೇಲೆ ಬಡ್ಡಿದರ ತಗ್ಗಿಸುತ್ತಿವೆ.
ಚಿನ್ನದ ಸಾಲವು ಚಿನ್ನದಿಂದ ಬೆಂಬಲಿತ ಸಾಲವಾಗಿದೆ. ಇದು ಸುರಕ್ಷಿತ ಸಾಲವಾಗಿದ್ದು, ಇದರಲ್ಲಿ ಸಾಲ ನೀಡುವ ಬ್ಯಾಂಕ್ ಚಿನ್ನದ ವಸ್ತುಗಳನ್ನು ಮೇಲಾಧಾರವಾಗಿ ತೆಗೆದುಕೊಂಡು ಸಾಲವನ್ನು ನೀಡುತ್ತದೆ. ಉದಾಹರಣೆಗೆ ಚಿನ್ನಾಭರಣಗಳು, ಆಭರಣಗಳು, ಇತ್ಯಾದಿಗಳನ್ನು ಅಡವಿಟ್ಟು ಸಾಲ ಪಡೆಯುವುದು ಆಗಿದೆ. ಸಾಲಗಾರನಿಗೆ ಈ ಚಿನ್ನವನ್ನು ಭದ್ರತೆಯಾಗಿ ಸಾಲ ನೀಡಲಾಗುತ್ತದೆ.
ಹಣಕಾಸು ಸಂಸ್ಥೆಯಿಂದ ಹಣವನ್ನು ಸಾಲವಾಗಿ ಪಡೆಯುವಾಗ ವೈಯಕ್ತಿಕ ಸಾಲದ ಬದಲಿಗೆ ಚಿನ್ನದ ಸಾಲವನ್ನು ಬಳಸಬಹುದು. ಆದರೆ ನಮ್ಮ ರಾಷ್ಟ್ರದಲ್ಲಿ ಈ ಕೆಲವು ಪ್ರಮುಖ ಬ್ಯಾಂಕುಗಳು ಚಿನ್ನದ ಸಾಲದ ಮೇಲೆ ಕಡಿಮೆ ಬಡ್ಡಿದರವನ್ನು ವಿಧಿಸುತ್ತದೆ. ಅಗ್ಗದ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ. ಹಾಗಾದರೆ ಆ ಬ್ಯಾಂಕುಗಳು ಯಾವುದು ಎಷ್ಟು ಬಡ್ಡಿ ವಿಧಿಸುತ್ತದೆ ಎಂದು ತಿಳಿಯಲು ಮುಂದೆ ಓದಿ..
ಪ್ರಮುಖ ಬ್ಯಾಂಕುಗಳಲ್ಲಿ ಚಿನ್ನದ ಸಾಲ
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶೇಕಡ 7.00ರಷ್ಟು ಬಡ್ಡಿದರವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಸಾಲಕ್ಕೆ ಶೇಕಡ 7.00ರಿಂದ ಶೇಕಡ 7.50ರಷ್ಟು ಬಡ್ಡಿದರವನ್ನು ವಿಧಿಸಲಾಗುವುದು. ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ಗಳು ಶೇಕಡ 7.00ರಿಂದ ಶೇಕಡ 7.50ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಯೂನಿಯನ್ ಬ್ಯಾಂಕ್ ಶೇಕಡ 7.25ರಿಂದ ಶೇಕಡ 8.25ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಕೆನರಾ ಬ್ಯಾಂಕ್ ಶೇಕಡ 7.35ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಇಂಡಿಯನ್ ಬ್ಯಾಂಕ್ ಶೇಕಡ 7.50ರಿಂದ ಶೇಕಡ 8ರಷ್ಟು ಬಡ್ಡಿದರವನ್ನು ವಿಧಿಸುತ್ತದೆ.
ಚಿನ್ನದ ಸಾಲವನ್ನು ಪಾವತಿಸದಿದ್ದರೆ ಏನಾಗುತ್ತದೆ?
ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ ಪ್ರಕಾರ, "ಚಿನ್ನದ ಸಾಲವನ್ನು ಮರುಪಾವತಿ ಮಾಡದಿದ್ದಲ್ಲಿ, ಇಎಂಐ ಪಾವತಿಯ ಕುರಿತು ಸಾಲಗಾರನಿಗೆ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಿಗದಿತ ಸಮಯ ಕಳೆದ ನಂತರ ಕೆಲವು ದಂಡ ಶುಲ್ಕಗಳು ಅಥವಾ ಬಡ್ಡಿ ದರಗಳನ್ನು ಚಿನ್ನದ ಸಾಲದ ಮೊತ್ತದ ಮೇಲೆ ವಿಧಿಸಲಾಗುತ್ತದೆ. ಬ್ಯಾಂಕ್ ನಿಗದಿಪಡಿಸಿದ ಸಮಯದ ಚೌಕಟ್ಟಿನೊಳಗೆ ಸಾಲ ಪಡೆದವರು ಚಿನ್ನದ ಸಾಲದ ಮೊತ್ತವನ್ನು ಪಾವತಿಸದಿದ್ದರೆ, ಸಾಲದ ಹಣವನ್ನು ಮರುಪಾವತಿಸಲು ಬ್ಯಾಂಕ್ ಚಿನ್ನದ ಆಭರಣಗಳನ್ನು ಮಾರಾಟ ಮಾಡುತ್ತದೆ ಅಥವಾ ಹರಾಜು ಮಾಡುತ್ತದೆ.
ಕನಿಷ್ಠ ಮತ್ತು ಗರಿಷ್ಠ ಚಿನ್ನದ ಸಾಲದ ಮೊತ್ತ
ಒಬ್ಬ ವ್ಯಕ್ತಿಯು ಚಿನ್ನದ ಆಭರಣವನ್ನು ಅಡವಿಟ್ಟು ಸಾಲವನ್ನು ಪಡೆಯಬಹುದಾದದ ಹಣದ ಮೊತ್ತವು ಸಾಲ ನೀಡುವ ಬ್ಯಾಂಕುಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಐಸಿಐಸಿಐ ಬ್ಯಾಂಕ್ 10,000 ರೂ.ನಿಂದ 1 ಕೋಟಿ ರೂ.ವರೆಗೆ ಚಿನ್ನದ ಸಾಲವನ್ನು ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 20,000 ರಿಂದ 20 ಲಕ್ಷದವರೆಗೆ ಚಿನ್ನದ ಸಾಲಗಳನ್ನು ಒದಗಿಸುತ್ತದೆ. ಮತ್ತೊಂದೆಡೆ, ಮುತ್ತೂಟ್ ಫೈನಾನ್ಸ್ ಯಾವುದೇ ಗರಿಷ್ಠ ನಿರ್ಬಂಧವಿಲ್ಲದೆ ರೂ 1,500 ರಿಂದ ಪ್ರಾರಂಭವಾಗುವ ಚಿನ್ನದ ಸಾಲಗಳನ್ನು ನೀಡುತ್ತದೆ.
ಚಿನ್ನದ ಸಾಲದ ಸ್ವತ್ತುಮರುಸ್ವಾಧೀನ ಪಡೆಯುವುದು ಹೇಗೆ?
ನೀವು ಇಎಂಐ ಮರುಪಾವತಿ ಯೋಜನೆಯೊಂದಿಗೆ ಚಿನ್ನದ ಸಾಲವನ್ನು ಹೊಂದಿದ್ದರೆ ನೀವು ಸಾಲದ ಪೂರ್ಣಗೊಳ್ಳುವ ಮೊದಲು ನೀವು ಪೂರ್ಣ ಮೊತ್ತವನ್ನು ಪಾವತಿಸುವ ಆಯ್ಕೆಯನ್ನು ಹೊಂದಿರುತ್ತೀರಿ. ಆದಾಗ್ಯೂ, ಚಿನ್ನದ ಸಾಲವನ್ನು ಸಾಮಾನ್ಯವಾಗಿ ನೀವು ಅವಧಿ ಪೂರ್ವ ಮುಕ್ತಾಯ ಮಾಡಬೇಕಾದರೆ ಕೆಲವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಶುಲ್ಕ ಬ್ಯಾಂಕ್ಗಳ ಮೇಲೆ ಆಧಾರಿತವಾಗಿದೆ.
ಚಿನ್ನದ ಸಾಲದ ಅವಧಿ
ಚಿನ್ನದ ಸಾಲದ ಅವಧಿಯು ಸಾಲ ನೀಡುವ ಬ್ಯಾಂಕ್ನ ಮೇಲೆ ಅವಲಂಭಿತವಾಗಿರುತ್ತದೆ. ಚಿನ್ನದ ಸಾಲದ ಅವಧಿಯು ಸಹ ಭಿನ್ನವಾಗಿರುತ್ತದೆ. ಉದಾಹರಣೆಗೆ, ಎಚ್ಡಿಎಫ್ಸಿ ಬ್ಯಾಂಕ್ ಮೂರು ತಿಂಗಳಿಂದ 24 ತಿಂಗಳವರೆಗಿನ ನಿಯಮಗಳೊಂದಿಗೆ ಚಿನ್ನದ ಸಾಲಗಳನ್ನು ನೀಡುತ್ತದೆ. ಎಸ್ಬಿಐ ಚಿನ್ನದ ಸಾಲಕ್ಕೆ ಗರಿಷ್ಠ ಮರುಪಾವತಿ ಅವಧಿಯು 36 ತಿಂಗಳುಗಳು ಆಗಿದೆ. ಮುತ್ತೂಟ್ ಫೈನಾನ್ಸ್ ವಿವಿಧ ಮರುಪಾವತಿ ನಿಯಮಗಳನ್ನು ಹೊಂದಿದೆ.
ಅಗತ್ಯವಿರುವ ದಾಖಲೆಗಳೇನು?
ಚಿನ್ನದ ಸಾಲವನ್ನು ಪಡೆಯಲು, ನೀವು ಬ್ಯಾಂಕ್ಗೆ ಹಲವಾರು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಗುರುತಿನ ಪುರಾವೆಗಳು (ಪ್ಯಾನ್, ಆಧಾರ್, ಇತ್ಯಾದಿ) ಮತ್ತು ವಿಳಾಸದ ಪುರಾವೆ (ಆಧಾರ್, ಪಾಸ್ಪೋರ್ಟ್, ಮತದಾರರಐಡಿ ಕಾರ್ಡ್ ಇತ್ಯಾದಿ), ಸಾಮಾನ್ಯವಾಗಿ ಅಗತ್ಯವಿರುತ್ತದೆ. ಜೊತೆಗೆ ನಿಮ್ಮ ಫೋಟೋ ಕೂಡಾ ಬೇಕಾಗಿದೆ. ಅಗತ್ಯವಿರುವ ಯಾವುದೇ ಹೆಚ್ಚುವರಿ ದಾಖಲೆಗಳು ಸಾಲ ನೀಡುವ ಬ್ಯಾಂಕ್ಗಳ ಮೇಲೆ ಅವಲಂಭಿತವಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications