ಕೇಂದ್ರ ಬಜೆಟ್ ಅಂದಾಕ್ಷಣ, ಏನು ಈ ಸಲ ಇನ್ ಕಮ್ ಟ್ಯಾಕ್ಸ್ ಕಡಿಮೆ ಮಾಡಬಹುದಾ ಎಂಬುದೇ ಬಹುತೇಕರ ಮೊದಲ ಪ್ರಶ್ನೆ ಆಗಿರುತ್ತದೆ.
ಪ್ರಮುಖ ವಾಣಿಜ್ಯ ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ, 2021ರ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯವಿಲ್ಲ. ಮೂಲಗಳ ಮಾಹಿತಿಯನ್ನು ಆಧರಿಸಿ, ಈ ವರದಿಯನ್ನು ಮಾಡಲಾಗಿದೆ. ಆದರೆ ಇತರ ತೆರಿಗೆ ವಿನಾಯಿತಿ ಕ್ರಮಗಳ ಮೂಲಕ ತೆರಿಗೆದಾರರಿಗೆ ಅನುಕೂಲ ಒದಗಿಸಬಹುದು ಎನ್ನಲಾಗಿದೆ.
ಈಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿರುವುದು ಎನ್ ಡಿಎ 2.0ದ 3ನೇ ಬಜೆಟ್. ಒಂದು ಕಡೆ ಆರ್ಥಿಕತೆ ಚೇತರಿಕೆಗೆ ಸಹಾಯ ಆಗುವಂಥ ಬಜೆಟ್ ಮಂಡಿಸಬೇಕಿದೆ ಮತ್ತು ಆದಾಯಕ್ಕೆ ಕೊರತೆ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸರಿತೂಗಿಸಿಕೊಳ್ಳಬೇಕಿದೆ.

2020- 21ರ ಆರ್ಥಿಕ ವರ್ಷ ವೈಯಕ್ತಿಕ ಆದಾಯ ತೆರಿಗೆ ದರ ಹೀಗಿತ್ತು:
ವಾರ್ಷಿಕ ಆದಾಯ- ತೆರಿಗೆ ದರ
2.5 ಲಕ್ಷ ರು. ತನಕದ ಆದಾಯ- ಯಾವುದೇ ಆದಾಯ ತೆರಿಗೆ ಇಲ್ಲ
2.5 ಲಕ್ಷ ರುಪಾಯಿಯಿಂದ 5 ಲಕ್ಷ ರು.- 10%
5 ಲಕ್ಷದಿಂದ 10 ಲಕ್ಷ ರು.- 20%
10 ಲಕ್ಷ ರುಪಾಯಿ ಮತ್ತು ಮೇಲ್ಪಟ್ಟು- 30%
ಕೈಗೆಟುಕುವ ದರದ ಮನೆ ಖರೀದಿಗೆ ಇರುವ ಯೋಜನೆ ವಿಸ್ತರಿಸಬಹುದು. ಸದ್ಯದ ಯೋಜನೆಯಲ್ಲಿ ತೆರಿಗೆಗೆ ಒಳಪಡುವ ಆದಾಯ ಲೆಕ್ಕ ಹಾಕುವಾಗ ಎರಡು ಲಕ್ಷ ರು. ತನಕದ ಗರಿಷ್ಠ ಆದಾಯಕ್ಕೆ ಸಾಲಕ್ಕೆ ಕಟ್ಟಿರುವ ಬಡ್ಡಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸದ್ಯಕ್ಕೆ ಸೆಕ್ಷನ್ 80C ಅಡಿಯಲ್ಲಿ ಇರುವ 1.5 ಲಕ್ಷ ರುಪಾಯಿ ವಿನಾಯಿತಿಯನ್ನು 2 ಲಕ್ಷ ರುಪಾಯಿಗೆ ಹೆಚ್ಚಿಸುವ ಚಿಂತನೆ ಇದೆ. ಸೆಕ್ಷನ್ D ಅಡಿ ವಿನಾಯಿತಿ 25,000 ರು.ಗೂ ಜಾಸ್ತಿ ಮಾಡಬಹುದು.
ಕೊರೊನಾ ಹೊಡೆತಕ್ಕೆ ಸಿಲುಕಿರುವ ಆರ್ಥಿಕತೆಗೆ ಜೀವ ತುಂಬುವುದಕ್ಕಾಗಿ ವಿತ್ತೀಯ ಕೊರತೆ (ವೆಚ್ಚ ಹಾಗೂ ಆದಾಯದ ಮಧ್ಯದ ವ್ಯತ್ಯಾಸ) ಇದ್ದರೂ ಹೆಚ್ಚಿನ ಉತ್ತೇಜನ ಘೋಷಿಸಬಹುದು ಎಂದು ವಿವಿಧ ವಲಯಗಳಲ್ಲಿ ನಿರೀಕ್ಷೆ ಇದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications