2019- 20ನೇ ಸಾಲಿನ 8.5% ಬಡ್ಡಿ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ ಒ)ನಿಂದ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್)ನ ಆರು ಕೋಟಿ ಚಂದಾದಾರರಿಗೆ ಡಿಸೆಂಬರ್ ಕೊನೆಗೆ ಒಂದೇ ಸಲಕ್ಕೆ ಜಮೆ ಆಗಲಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಬಡ್ಡಿ ದರವನ್ನು ಎರಡು ಕಂತಿನಲ್ಲಿ ಪಾವತಿಸಲು ಇಪಿಎಫ್ ಒ ನಿರ್ಧರಿಸಿತ್ತು.
ಅಂದರೆ, 8.5 ಪರ್ಸೆಂಟ್ ಬಡ್ಡಿಯ ಪೈಕಿ ಮೊದಲಿಗೆ 8.15% ಹಾಗೂ ನಂತರ 0.35% ಹೀಗೆ ಎರಡು ಕಂತಿನಲ್ಲಿ ಪಾವತಿ ಮಾಡಲು ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಈ ತಿಂಗಳ ಆರಂಭದಲ್ಲಿ ಕಾರ್ಮಿಕ ಸಚಿವಾಲಯದಿಂದ ಆರ್ಥಿಕ ಸಚಿವಾಲಯಕ್ಕೆ ಪ್ರಸ್ತಾವವೊಂದನ್ನು ಕಳುಹಿಸಿ, 2019- 20ನೇ ಸಾಲಿನ 8.5% ಬಡ್ಡಿ ಒಂದೇ ಸಲಕ್ಕೆ ಖಾತೆಗಳಿಗೆ ಜಮೆ ಮಾಡಲು ಅನುಮತಿ ಕೇಳಿತ್ತು.
ಈ ವರ್ಷದ ಮಾರ್ಚ್ ನಲ್ಲಿ ಇಪಿಎಫ್ ನ ಕೇಂದ್ರೀಯ ಬೋರ್ಡ್ ಟ್ರಸ್ಟಿಗಳು 8.5% ಬಡ್ಡಿ ದರವನ್ನು ನಿಗದಿ ಮಾಡಿದರು. ಲಾಕ್ ಡೌನ್ ಕಾರಣಕ್ಕೆ ಮಾರುಕಟ್ಟೆ ಸ್ಥಿತಿ ಬಹಳ ಕೆಟ್ಟದಾಗಿದ್ದರಿಂದ ಈ ತನಕ ಮೊದಲ ಕಂತಿನ ಬಡ್ಡಿ ಚಂದಾದಾರರ ಖಾತೆಗೆ ಜಮೆ ಆಗಿಲ್ಲ.

ಆದರೂ ಚಂದಾದಾರರು ತಮ್ಮ ಇಪಿಎಫ್ ಬ್ಯಾಲೆನ್ಸ್ ಪರೀಕ್ಷಿಸಿಕೊಳ್ಳಬಹುದು ಮತ್ತು ಒಂದು ಮಿಸ್ ಕಾಲ್ ಮೂಲಕ ಬಡ್ಡಿ ಬಂದಿದೆಯೋ ಇಲ್ಲವೋ ತಿಳಿದುಕೊಳ್ಳಬಹುದು. ಅದು ಹೇಗೆಂದರೆ,
* ಯೂನಿವರ್ಸಲ್ ಅಕೌಂಟ್ ನಂಬರ್ (UAN) ಜತೆಗೆ ನೋಂದಣಿ ಆಗಿರುವ ಫೋನ್ ನಿಂದ 011-22901406ಗೆ ಕರೆ ಮಾಡಬೇಕು.
* ಆ ಕರೆಯು ಎರಡು ಬಾರಿ ರಿಂಗ್ ಆದ ಮೇಲೆ ತಾನಾಗಿಯೇ ಕಟ್ ಆಗುತ್ತದೆ.
* ಈ ಸೇವೆಗೆ ಯಾವುದೇ ಶುಲ್ಕ ಇರುವುದಿಲ್ಲ.
* ಆದರೆ, ಫೋನ್ ಬಳಕೆದಾರರು ಇಪಿಎಫ್ ಒ ಜತೆಗೆ ಕೆವೈಸಿ ಆಗಿರಬೇಕು.
ಎಸ್ಸೆಮ್ಮೆಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಿರಿ:
ಬಳಕೆದಾರರು EPFOHO ಟೈಪ್ ಮಾಡಿ 7738299899 ಸಂಖ್ಯೆಗೆ ಕಳುಹಿಸಬೇಕು.
ಇನ್ಯಾವುದೇ ಮಾಹಿತಿಗಾಗಿ ಬಳಕೆದಾರರು https://unifiedportal-mem.epfindia.gov.in/memberinterface ಭೇಟಿ ನೀಡಬಹುದು.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications